Posts

Showing posts from January, 2025

ಅಷ್ಟಾವಕ್ರಗೀತಾ - ೧

ಅಷ್ಟಾವಕ್ರ ಗೀತೆ ಜನಕ ಮತ್ತು ಅಷ್ಟಾವಕ್ರನ ಸಂವಾದದ ರೂಪದಲ್ಲಿದೆ. ರಾಜಾ ಜನಕ ಅಷ್ಟಾವಕ್ರನನ್ನು ಮುಕ್ತಿಯನ್ನು ಪಡೆಯುವ ಮಾರ್ಗದ ಬಗ್ಗೆ ಕೇಳುತ್ತಾನೆ. ಅಷ್ಟಾವಕ್ರ ಅವನಿಗೆ ಅದನ್ನು ವಿವರಿಸುತ್ತಾನೆ   . . ಶ್ರೀ .. ಅಥ ಶ್ರೀಮದಷ್ಟಾವಕ್ರಗೀತಾ ಪ್ರಾರಭ್ಯತೇ . ಜನಕ ಉವಾಚ .. ಕಥಂ ಜ್ಞಾನಮವಾಪ್ನೋತಿ ಕಥಂ ಮುಕ್ತಿರ್ಭವಿಷ್ಯತಿ . ವೈರಾಗ್ಯಂ ಚ ಕಥಂ ಪ್ರಾಪ್ತಮೇತದ್ ಬ್ರೂಹಿ ಮಮ ಪ್ರಭೋ .. 1-1.. ಜನಕ ಹೇಳಿದನು: ಜ್ಞಾನವನ್ನು ಹೇಗೆ ಸಂಪಾದಿಸಬೇಕು? ಮುಕ್ತಿಯನ್ನು ಹೇಗೆ ಪಡೆಯಬೇಕು? ವೈರಾಗ್ಯವನ್ನು ಪಡೆಯುವದು ಹೇಗೆ? ಪ್ರಭೂ,  ನನಗೆ ತಿಳಿಸಿಕೊಡಿ. ಅಷ್ಟಾವಕ್ರ ಉವಾಚ .. ಮುಕ್ತಿಮಿಚ್ಛಸಿ ಚೇತ್ತಾತ ವಿಷಯಾನ್ ವಿಷವತ್ತ್ಯಜ . ಕ್ಷಮಾರ್ಜವದಯಾತೋಷಸತ್ಯಂ ಪೀಯೂಷವದ್ ಭಜ .. 1-2.. ಅಷ್ಟಾವಕ್ರ ಹೇಳಿದನು:    ನೀನು ಮುಕ್ತಿ ಪಡೆಯಬೇಕೆಂಬ ಆಸೆ ಇದ್ದರೆ ವಿಷಯಗಳನ್ನು(ಕಾಮ, ಕ್ರೋಧ ಇತ್ಯಾದಿ) ವಿಷದಂತೆ ತ್ಯಜಿಸಬೇಕು. ಕ್ಷಮೆ, ದಯೆ ಸತ್ಯ ಮತ್ತು ಸಮಾಧಾನಗಳನ್ನು ಅಮೃತದಂತೆ ಬೆಳೆಸಿಕೊಳ್ಳಬೇಕು. ನ ಪೃಥ್ವೀ ನ ಜಲಂ ನಾಗ್ನಿರ್ನ ವಾಯುರ್ದ್ಯೌರ್ನ ವಾ ಭವಾನ್ . ಏಷಾಂ ಸಾಕ್ಷಿಣಮಾತ್ಮಾನಂ ಚಿದ್ರೂಪಂ ವಿದ್ಧಿ ಮುಕ್ತಯೇ .. 1-3.. ಮುಕ್ತಿ ಪಡೆಯಲು ನೀನು  ಭೂಮಿ, ನೀರು, ಬೆಂಕಿ, ಗಾಳಿ, ಆಕಾಶಗಳಿಂದ ತುಂಬಿದವನಲ್ಲ. ಮುಕ್ತಿಯನ್ನು ಗಳಿಸಲು ನೀನು ಇವೆಲ್ಲವುಗಳ ಸಾಕ್ಷಿ ಹಾಗೂ ಚಿತ್ ( ಪ್ರಜ್ಞೆಯ) ರೂಪನು ಎಂಬ ಮಾತನ್ನು ...

ಅಷ್ಟಾವಕ್ರಗೀತಾ - ೨

ಆತ್ಮಸಾಕ್ಷಾತ್ಕಾರದ ಆನಂದ   ಅಷ್ಟಾವಕ್ರನಿಂದ ಆತ್ಮಜ್ಞಾನ ಪಡೆದ ಜನಕನು ತನ್ನ ಹರ್ಷವನ್ನು ಈ ಕೆಳಗಿನ ಸಾಲುಗಳಲ್ಲಿ ವ್ಯಕ್ತಪಡಿಸುತ್ತಾನೆ.   ಜನಕ ಉವಾಚ .. ಅಹೋ ನಿರಂಜನಃ ಶಾಂತೋ ಬೋಧೋಽಹಂ ಪ್ರಕೃತೇಃ ಪರಃ . ಏತಾವಂತಮಹಂ ಕಾಲಂ ಮೋಹೇನೈವ ವಿಡಂಬಿತಃ .. 2-1..  ನಾನು ನಿಷ್ಕಳಂಕ, ಶಾಂತ ಮತ್ತು  ಈ ಪ್ರಕೃತಿಯನ್ನು ಮೀರಿದ ಜ್ಞಾನವಾಗಿರುವೆ. (ಇದನ್ನು ತಿಳಿಯದೆ) ಇಷ್ಟು ದಿನ ಭ್ರಮೆಯಿಂದ ಮೋಸ ಹೋಗಿದ್ದೆ. ಯಥಾ ಪ್ರಕಾಶಯಾಮ್ಯೇಕೋ ದೇಹಮೇನಂ ತಥಾ ಜಗತ್ . ಅತೋ ಮಮ ಜಗತ್ಸರ್ವಮಥವಾ ನ ಚ ಕಿಂಚನ .. 2-2.. ಹೇಗೆ ನಾನು ಈ ಶರೀರಕ್ಕೆ ಬೆಳಕು ಕೊಡುವವನೋ - ಹಾಗೆಯೆ ನಾನು ಈ ಜಗತ್ತಿಗೆ ಬೆಳಕು ಕೊಡುವವನು. ಹಾಗಾಗಿ ಈ ಜಗತ್ತೆಲ್ಲ ನನ್ನದು. ಅಥವಾ ಯಾವುದೂ ನನ್ನದಲ್ಲ. (ಬೆಳಕಿಲ್ಲದೇ ಶರೀರ ಕಾಣಲಾರದು. ನಾನು ಶರೀರವನ್ನು ಬೆಳಕು ನೀಡಿ ಅದನ್ನು ಪ್ರಕಟಿಸುವವನು). ಸ ಶರೀರಮಹೋ ವಿಶ್ವಂ ಪರಿತ್ಯಜ್ಯ ಮಯಾಧುನಾ . ಕುತಶ್ಚಿತ್ ಕೌಶಲಾದ್ ಏವ ಪರಮಾತ್ಮಾ ವಿಲೋಕ್ಯತೇ .. 2-3.. ಈಗ ಈ ಶರೀರವನ್ನು ಹಾಗು ವಿಶ್ವವನ್ನು ಪರಿತ್ಯಜಿಸಿ, ಹೇಗೋ ಕೌಶಲ್ಯದಿಂದ ಪರಮಾತ್ಮನನ್ನು  ಕಲ್ಪಿಸಿಕೊಳ್ಳುತ್ತೇನೆ. (ಪರಮಾತ್ಮನ ರೂಪವನ್ನು ಅರಿಯುತ್ತೇನೆ.) ಯಥಾ ನ ತೋಯತೋ ಭಿನ್ನಾಸ್ತರಂಗಾಃ ಫೇನಬುದ್ಬುದಾಃ . ಆತ್ಮನೋ ನ ತಥಾ ಭಿನ್ನಂ ವಿಶ್ವಮಾತ್ಮವಿನಿರ್ಗತಂ .. 2-4.. ಹೇಗೆ ಅಲೆ, ನೊರೆ, ನೀರಿನ ಗುಳ್ಳೆ ಇವೆಲ್ಲವೂ ನೀರಿಗಿಂತ ...

ಅಷ್ಟಾವಕ್ರಗೀತಾ - ೩

 ಆತ್ಮಜ್ಞಾನದ ಅವಲೋಕನ ಅಷ್ಟಾವಕ್ರ ಉವಾಚ .. ಅವಿನಾಶಿನಮಾತ್ಮಾನಮೇಕಂ ವಿಜ್ಞಾಯ ತತ್ತ್ವತಃ . ತವಾತ್ಮಜ್ಞಾನಸ್ಯ ಧೀರಸ್ಯ ಕಥಮರ್ಥಾರ್ಜನೇ ರತಿಃ .. 3-1..  ಅವಿನಾಶಿಯಾದ, ಅದ್ವೈತವಾದ ಆತ್ಮವನ್ನು ಅರಿತುಕೊಂಡಮೇಲೆ ಆತ್ಮಜ್ಞಾನಿಯಾದ ವ್ಯಕ್ತಿಯು, ಸಂಪತ್ತಿನ ಗಳಿಕೆಯಲ್ಲಿ ಆಸಕ್ತಿಯನ್ನು ಹೇಗೆ ಇರಿಸಿಕೊಳ್ಳುತ್ತಾನೆ? ಆತ್ಮಾಜ್ಞಾನಾದಹೋ ಪ್ರೀತಿರ್ವಿಷಯಭ್ರಮಗೋಚರೇ . ಶುಕ್ತೇರಜ್ಞಾನತೋ ಲೋಭೋ ಯಥಾ ರಜತವಿಭ್ರಮೇ .. 3-2.. ಕಪ್ಪೆಚಿಪ್ಪನ್ನು ನೋಡಿ ಬೆಳ್ಳಿಯೆಂದು ಭ್ರಮೆಯಿಂದ ಮೋಹವಾಗುವಂತೆ, ಆತ್ಮದ ಅಜ್ಞಾನವು ಭ್ರಮೆಯ ಬಯಕೆಯನ್ನು (ಕಾಣುವ ವಸ್ತುಗಳಲ್ಲಿ) ಉಂಟುಮಾಡುತ್ತದೆ. ವಿಶ್ವಂ ಸ್ಫುರತಿ ಯತ್ರೇದಂ ತರಂಗಾ ಇವ ಸಾಗರೇ . ಸೋಽಹಮಸ್ಮೀತಿ ವಿಜ್ಞಾಯ ಕಿಂ ದೀನ ಇವ ಧಾವಸಿ .. 3-3.. ಯಾರಲ್ಲಿ ಬ್ರಹ್ಮಾಂಡವು ಸಮುದ್ರದ ಮೇಲಿನ  ಅಲೆಗಳಂತೆ ಕಾಣಿಸುವದೋ ಅವನೇ ನೀನು ಎಂದು ತಿಳಿದಿದ್ದರೂ, ನೀನು ಯಾಕೆ ದೀನನಂತೆ ಓಡುತ್ತೀಯ? ಶ್ರುತ್ವಾಪಿ ಶುದ್ಧಚೈತನ್ಯ ಆತ್ಮಾನಮತಿಸುಂದರಂ . ಉಪಸ್ಥೇಽತ್ಯಂತಸಂಸಕ್ತೋ ಮಾಲಿನ್ಯಮಧಿಗಚ್ಛತಿ .. 3-4.. ನೀನು ಶುದ್ಧ ಚೈತನ್ಯನೆಂದೂ, ಅತಿ ಸುಂದರನೆಂದೂ ಕೇಳಿ ತಿಳಿದಮೇಲೂ, ಮಲಿನವಾದ ವಿಷಯಸುಖಗಳಲ್ಲಿ ಯಾಕೆ ಆಸಕ್ತಿ ತೋರಿಸುತ್ತಿರುವೆ? (ಇನ್ನೊಂದು ಅನುವಾದ - ತಾನು ಆತ್ಮ, ಶುದ್ಧ ಪ್ರಜ್ಞೆ ಮತ್ತು ಅತ್ಯಂತ ಸುಂದರ ಎಂದು ಕೇಳಿದ ನಂತರವೂ, ದೇಹಕ್ಕೆ ಅತಿಯಾಗಿ ಅಂಟಿಕೊಂಡಿರುವವನು ಮಾಲಿನ್ಯವನ್ನು ಪಡೆಯುತ್ತಾನೆ....

ಅಷ್ಟಾವಕ್ರಗೀತಾ - ೪

ಆತ್ಮಸಾಕ್ಷಾತ್ಕಾರದ ವೈಭವ  ಜನಕ ಉವಾಚ .. ಹಂತಾತ್ಮಜ್ಞಾನಸ್ಯ ಧೀರಸ್ಯ ಖೇಲತೋ ಭೋಗಲೀಲಯಾ . ನ ಹಿ ಸಂಸಾರವಾಹೀಕೈರ್ಮೂಢೈಃ ಸಹ ಸಮಾನತಾ .. 4-1.. ಆತ್ಮಜ್ಞಾನಿಯಾದ ಧೀರನು ಭೋಗಲೀಲೆಯಲ್ಲಿ ಕ್ರೀಡಿಸುವಂತೆ ಕಂಡರೂ ಸಂಸಾರದ ಭಾರವನ್ನು ಹೊರುವ ಮೂಢರ ಜೊತೆ ಅವನನ್ನು ಹೋಲಿಸಲಾಗುವದಿಲ್ಲ. (ಯಾಕೆಂದರೆ ಅವನು ಭೋಗದಿಂದ ಯಾವ ರೀತಿಯಲ್ಲೂ ಪರಿಣಾಮಿತನಾಗುವದಿಲ್ಲ) ಯತ್ ಪದಂ ಪ್ರೇಪ್ಸವೋ ದೀನಾಃ ಶಕ್ರಾದ್ಯಾಃ ಸರ್ವದೇವತಾಃ . ಅಹೋ ತತ್ರ ಸ್ಥಿತೋ ಯೋಗೀ ನ ಹರ್ಷಮುಪಗಚ್ಛತಿ .. 4-2.. ಯಾವ ಸ್ಥಿತಿಯನ್ನು ಹೊಂದಲು ಇಂದ್ರ(ಶಕ್ರ)ನನ್ನು ಒಳಗೊಂಡು ದೇವತೆಗಳೆಲ್ಲ  ಅತ್ಯುತ್ಸುಕರಾಗಿರುತ್ತಾರೋ, ಆ ಸ್ಥಿತಿಯನ್ನು ಹೊಂದಿಯೂ ಕೂಡ ಯೋಗಿಯು ಹರ್ಷವನ್ನು ಹೊಂದುವದಿಲ್ಲ. ತಜ್ಜ್ಞಸ್ಯ ಪುಣ್ಯಪಾಪಾಭ್ಯಾಂ ಸ್ಪರ್ಶೋ ಹ್ಯಂತರ್ನ ಜಾಯತೇ . ನ ಹ್ಯಾಕಾಶಸ್ಯ ಧೂಮೇನ ದೃಶ್ಯಮಾನಾಪಿ ಸಂಗತಿಃ .. 4-3.. ಹೊಗೆ ಆಕಾಶವನ್ನೇ ತಲುಪಿದಂತೆ ಕಂಡರೂ ಅದು ದೂರವೇ ಇರುವಂತೆ,  ಜ್ಞಾನಿಗೆ ಪಾಪ ಪುಣ್ಯಗಳಾವವವೂ ತಟ್ಟುವದಿಲ್ಲ.  ಆತ್ಮೈವೇದಂ ಜಗತ್ಸರ್ವಂ ಜ್ಞಾತಂ ಯೇನ ಮಹಾತ್ಮನಾ . ಯದೃಚ್ಛಯಾ ವರ್ತಮಾನಂ ತಂ ನಿಷೇದ್ಧುಂ ಕ್ಷಮೇತ ಕಃ .. 4-4.. ಈ ಜಗತ್ತೆಲ್ಲವನ್ನು ಸ್ವಯಂ ಆತ್ಮವೇ ಎಂದು ತಿಳಿದ ಮಹಾತ್ಮನನ್ನು, ತನ್ನಿಚ್ಛೆಯಂತೆ ಜೀವಿಸುವದನ್ನು ಯಾರು ತಾನೇ ತಡೆಯಬಲ್ಲರು. ಆಬ್ರಹ್ಮಸ್ತಂಬಪರ್ಯಂತೇ ಭೂತಗ್ರಾಮೇ ಚತುರ್ವಿಧೇ . ವಿಜ್ಞಸ್ಯೈವ ಹಿ ಸಾಮರ್ಥ್ಯಮಿಚ್ಛಾನಿಚ್ಛಾವಿವ...

ಅಷ್ಟಾವಕ್ರ ಗೀತಾ - ೫

ಲಯದ ಉಪದೇಶ ಅಷ್ಟಾವಕ್ರ ಉವಾಚ .. ನ ತೇ ಸಂಗೋಽಸ್ತಿ ಕೇನಾಪಿ ಕಿಂ ಶುದ್ಧಸ್ತ್ಯಕ್ತುಮಿಚ್ಛಸಿ . ಸಂಘಾತವಿಲಯಂ ಕುರ್ವನ್ನೇವಮೇವ ಲಯಂ ವ್ರಜ .. 5-1.. ಅಷ್ಟಾವಕ್ರನು ಜನಕನಿಗೆ ಮೋಕ್ಷದ ಮಾರ್ಗವನ್ನು ತಿಳಿಸಿ ಹೇಳುತ್ತಾ ಹೀಗೆ ಹೇಳುತ್ತಾನೆ- ನೀನು ನಿಸ್ಸಂಗನು, ಶುದ್ಧನು ಆಗಿರುವಾಗ ಏನನ್ನು ತಾನೇ ತ್ಯಜಿಸಲು ಇಚ್ಛಿಸುವೆ? ನೀನು ಶರೀರ ಎನ್ನುವ ಭಾವನೆಯನ್ನು ಬಿಟ್ಟು ಲಯವನ್ನು, ಮುಕ್ತಿಯನ್ನು ಹೊಂದು ಉದೇತಿ ಭವತೋ ವಿಶ್ವಂ ವಾರಿಧೇರಿವ ಬುದ್ಬುದಃ . ಇತಿ ಜ್ಞಾತ್ವೈಕಮಾತ್ಮಾನಮೇವಮೇವ ಲಯಂ ವ್ರಜ .. 5-2.. ಸಾಗರದಿಂದ ಅಲೆಗಳು ಉದಯಿಸಿದಂತೆ, ಈ ವಿಶ್ವವೆಲ್ಲ ನಿನ್ನಿಂದಲೆ ಉದ್ಭವವಾಗುತ್ತದೆ ಇದನ್ನು ತಿಳಿದು, ನೀನೇ ಆತ್ಮನೆಂದು ತಿಳಿದು, ಲಯವನ್ನು (ಮೋಕ್ಷವನ್ನು) ಹೊಂದು. ಪ್ರತ್ಯಕ್ಷಮಪ್ಯವಸ್ತುತ್ವಾದ್ ವಿಶ್ವಂ ನಾಸ್ತ್ಯಮಲೇ ತ್ವಯಿ . ರಜ್ಜುಸರ್ಪ ಇವ ವ್ಯಕ್ತಮೇವಮೇವ ಲಯಂ ವ್ರಜ .. 5-3.. ಹಗ್ಗ ಸರ್ಪದಂತೆ ಕಾಣುವಂತೆ, ಪ್ರತ್ಯಕ್ಷವೆನಿಸಿದರೂ ಅವಸ್ತುವಾದದ್ದರಿಂದ (ಮಿಥ್ಯೆಯಾದದ್ದರಿಂದ) ಈ ವಿಶ್ವವು ಅಮಲನಾದ ನಿನ್ನಲ್ಲಿ ಇಲ್ಲ. ಇದನ್ನು ಅರಿತು ಲಯವನ್ನು ಹೊಂದು. ಸಮದುಃಖಸುಖಃ ಪೂರ್ಣ ಆಶಾನೈರಾಶ್ಯಯೋಃ ಸಮಃ . ಸಮಜೀವಿತಮೃತ್ಯುಃ ಸನ್ನೇವಮೇವ ಲಯಂ ವ್ರಜ .. 5-4.. ನೀನಗೆ ಸುಖ-ದುಃಖಗಳು ಸಮಾನ. ನಿನಗೆ ಆಶಾ-ನಿರಾಶೆಗಳು ಸಮಾನ. ಜೀವನ-ಮೃತ್ಯುಗಳು ಸಮಾನ. ಈ ರೀತಿಯವನಾಗಿರುವ ನೀನು ಲಯವನ್ನು ಹೊಂದು.    ಸಂಪೂರ್ಣ ಕೃತಿಯನ್ನು ಡೌನ್ ಲೋಡ್ ಮಾ...

ಅಷ್ಟಾವಕ್ರಗೀತಾ- ೬

ಯತಾರ್ಥ ಜ್ಞಾನೋಪದೇಶ ಜನಕ ಉವಾಚ- ಆಕಾಶವದನಂತೋಽಹಂ ಘಟವತ್ ಪ್ರಾಕೃತಂ ಜಗತ್ . ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ .. 6-1.. ನಾನು (ಆತ್ಮ) ಆಕಾಶದಂತೆ ಅನಂತನು. ಈ ಪ್ರಾಕೃತಿಕ ಜಗತ್ತಾದರೋ ಮಡಿಕೆಯಂತೆ. ಇದನ್ನು ಅರಿಯುವದೇ ಜ್ಞಾನ. (ಹಾಗಾಗಿ) ಈ ಇದನ್ನು(ಜಗತ್ತನ್ನು) ಗೃಹಿಸುವದು, ತ್ಯಜಿಸುವದು ಅಥವಾ ನಾಶ ಮಾಡುವ ಪ್ರಶ್ನೆಯೇ ಇಲ್ಲ. ಮಹೋದಧಿರಿವಾಹಂ ಸ ಪ್ರಪಂಚೋ ವೀಚಿಸನ್ನಿಭಃ . ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ .. 6-2.. ನಾನು ಮಹಾಸಾಗರದಂತೆ ಅನಂತನು, ಪ್ರಪಂಚವೋ ಆ ಸಾಗರದ ಅಲೆಯಂತೆ ಕ್ಷಣಿಕ. ಇದೇ ಜ್ಞಾನ. ಹಾಗಾಗಿ ಈ ಆತ್ಮವನ್ನು ಗೃಹಿಸುವದೂ ಅಲ್ಲ, ತ್ಯಜಿಸುವದೂ ಅಲ್ಲ, ಬದಲಾಗಿ ಅದರಲ್ಲೇ ಲಯವಾಗುವದೇ ಸರಿ. ಅಹಂ ಸ ಶುಕ್ತಿಸಂಕಾಶೋ ರೂಪ್ಯವದ್ ವಿಶ್ವಕಲ್ಪನಾ . ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ .. 6-3.. ಚಿಪ್ಪನ್ನು ನೋಡಿ ಬೆಳ್ಳಿಯೆಂದು ಭ್ರಮೆ ಹೊಂದುವಂತೆ, ಭ್ರಮೆಯಿಂದ ಆತ್ಮ ಬಾಹ್ಯ ಜಗತ್ತಿನಂತೆ ಕಂಡುಬರುತ್ತದೆ. ಇದನ್ನು ಅರಿತಮೇಲೆ ಈ ಆತ್ಮವನ್ನು ಗೃಹಿಸುವದು, ತ್ಯಜಿಸುವದು ಅಥವಾ ನಾಶ ಮಾಡಲು ಸಾಧ್ಯ ಇಲ್ಲ. ಅಹಂ ವಾ ಸರ್ವಭೂತೇಷು ಸರ್ವಭೂತಾನ್ಯಥೋ ಮಯಿ . ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ .. 6-4.. ನಾನೇ ಸಕಲಭೂತಗಳಲ್ಲಿ ಇದ್ದೇನೆ. ನನ್ನಲ್ಲಿ ಸರ್ವಭೂತಗಳು ಇವೆ. ಈ ಜ್ಞಾನ ತಿಳಿದ ಮೇಲೆ ಆತ್ಮದ ತ್ಯಾಗ, ಗೃಹಣ ಅಥವಾ ಲಯದ ಪ್ರಶ್ನೆಯೇ ಇಲ್ಲ.   ಸಂಪೂರ್ಣ ಕೃತಿಯನ್ನು...

ಅಷ್ಟಾವಕ್ರಗೀತಾ-೭

 ಜನಕನ ಸಾಕ್ಷಾತ್ಕಾರ ಜನಕ ಉವಾಚ -  ಮಯ್ಯನಂತಮಹಾಂಭೋಧೌ ವಿಶ್ವಪೋತ ಇತಸ್ತತಃ . ಭ್ರಮತಿ ಸ್ವಾಂತವಾತೇನ ನ ಮಮಾಸ್ತ್ಯಸಹಿಷ್ಣುತಾ .. 7-1.. ನಾನೆಂಬ ಅನಂತ ಮಹಾಸಾಗರದಲ್ಲಿ ವಿಶ್ವವೆಂಬ ಹಡಗು ತನ್ನದೇ ಗಾಳಿಯಿಂದ ಅಲ್ಲಿ ಇಲ್ಲಿ ಓಲಾಡುತ್ತದೆ. ಆದರೆ ಅದರಿಂದ ನಾನು ವಿಚಲಿತನಾಗುವದಿಲ್ಲ.      ಮಯ್ಯನಂತಮಹಾಂಭೋಧೌ ಜಗದ್ವೀಚಿಃ ಸ್ವಭಾವತಃ . ಉದೇತು ವಾಸ್ತಮಾಯಾತು ನ ಮೇ ವೃದ್ಧಿರ್ನ ಚ ಕ್ಷತಿಃ .. 7-2.. ನಾನೆಂಬ ಅನಂತ ಮಹಾಸಾಗರದಲ್ಲಿ ಜಗತ್ತೆಂಬ ಅಲೆಗಳು ಉದಯಿಸಿ ಅಸ್ತವಾಗುತ್ತಲಿದ್ದರೂ ನನಗೆ ವೃದ್ಧಿ ಅಥವಾ ಕ್ಷಯವಿಲ್ಲ. ಮಯ್ಯನಂತಮಹಾಂಭೋಧೌ ವಿಶ್ವಂ ನಾಮ ವಿಕಲ್ಪನಾ . ಅತಿಶಾಂತೋ ನಿರಾಕಾರ ಏತದೇವಾಹಮಾಸ್ಥಿತಃ .. 7-3.. ನಾನೆಂಬ ಮಹಾಸಾಗರದಲ್ಲಿ ವಿಶ್ವ ಎಂಬದು ಒಂದು ಕಲ್ಪನೆ. ಅತಿ ಶಾಂತನೂ ನಿರಾಕಾರನೂ ಆದ ನಾನು ಅದರಲ್ಲೇ ಇರುತ್ತೇನೆ. ನಾತ್ಮಾ ಭಾವೇಷು ನೋ ಭಾವಸ್ತತ್ರಾನಂತೇ ನಿರಂಜನೇ . ಇತ್ಯಸಕ್ತೋಽಸ್ಪೃಹಃ ಶಾಂತ ಏತದೇವಾಹಮಾಸ್ಥಿತಃ .. 7-4.. ನಾನು ಯಾವ ವಸ್ತುಗಳಲ್ಲೂ ಇಲ್ಲ ನನ್ನಲ್ಲಿ ವಸ್ತುಗಳೂ ಇಲ್ಲ - ಯಾಕೆಂದರೆ ನಾನು ಅನಂತ ಮತ್ತು ನಿಷ್ಕಳಂಕನು. ನಾನು ನಿರಾಸಕ್ತನು ಮತ್ತು ಆಸೆಯಿಲ್ಲದವನೂ, ಶಾಂತನೂ ಆಗದ್ದೇನೆ. ಇದರಲ್ಲೆ ಸ್ಥಿತನಾಗಿದ್ದೇನೆ. ಅಹೋ ಚಿನ್ಮಾತ್ರಮೇವಾಹಮಿಂದ್ರಜಾಲೋಪಮಂ ಜಗತ್ . ಇತಿ ಮಮ ಕಥಂ ಕುತ್ರ ಹೇಯೋಪಾದೇಯಕಲ್ಪನಾ .. 7-5.. ನಾನು ಕೇವಲ ಚಿತ್(ಪ್ರಜ್ಞೆ) ಮಾತ್ರನು. ಜಗತ್ತು ಇಂದ್ರಜ...

ಅಷ್ಟಾವಕ್ರಗೀತಾ-೮

  ಬಂಧನ ಮತ್ತು ಮುಕ್ತಿ ಅಷ್ಟಾವಕ್ರ ಉವಾಚ -  ತದಾ ಬಂಧೋ ಯದಾ ಚಿತ್ತಂ ಕಿಂಚಿದ್ ವಾಂಛತಿ ಶೋಚತಿ . ಕಿಂಚಿನ್ ಮುಂಚತಿ ಗೃಹ್ಣಾತಿ ಕಿಂಚಿದ್ಧೃಷ್ಯತಿ ಕುಪ್ಯತಿ .. 8-1..   ಯಾವಾಗ ಮನಸ್ಸು ಏನನ್ನಾದರೂ ಆಸೆ ಪಡುವದೋ,  ಏನನ್ನಾದರೂ ಕುರಿತು ಶೋಕ  ಪಡುವದೋ ,  ಏನನ್ನಾದರೂ ಪಡೆಯುವದೋ,  ಏನನ್ನಾದರೂ ತ್ಯಜಿಸಿವದೋ,  ಏನನ್ನಾದರೂ ಕುರಿತು ಸಂತೋಷ ಪಡುವದೋ,  ಏನನ್ನಾದರೂ ಕುರಿತು ದುಃಖಿಸುವದೋ, ಆಗ ಆತ್ಮಕ್ಕೆ ಬಂಧನ ಉಂಟಾಗುತ್ತದೆ .   ತದಾ ಮುಕ್ತಿರ್ಯದಾ ಚಿತ್ತಂ ನ ವಾಂಛತಿ ನ ಶೋಚತಿ . ನ ಮುಂಚತಿ ನ ಗೃಹ್ಣಾತಿ ನ ಹೃಷ್ಯತಿ ನ ಕುಪ್ಯತಿ .. 8-2..   ಯಾವಾಗ ಮನಸ್ಸು ಏನನ್ನೂ  ಆಸೆ ಪಡುವದಿಲ್ಲವೋ,  ಏನನ್ನು  ಕುರಿತೂ ಶೋಕ  ಪಡುವದಿಲ್ಲವೋ ,  ಏನನ್ನೂ  ಪಡೆಯುವದಿಲ್ಲವೋ,  ಏನನ್ನೂ  ತ್ಯಜಿಸಿವದಿಲ್ಲವೋ,  ಏನನ್ನು ಕುರಿತು ಸಂತೋಷಪಡುವದಿಲ್ಲವೋ,  ಏನನ್ನೂ  ಕುರಿತು ದುಃಖಿಸುವದಿಲ್ಲವೋ, ಆಗ ಆತ್ಮಕ್ಕೆ ಮುಕ್ತಿ   ದೊರೆಯುತ್ತದೆ.   ತದಾ ಬಂಧೋ ಯದಾ ಚಿತ್ತಂ ಸಕ್ತಂ ಕಾಸ್ವಪಿ ದೃಷ್ಟಿಷು . ತದಾ ಮೋಕ್ಷೋ ಯದಾ ಚಿತ್ತಮಸಕ್ತಂ ಸರ್ವದೃಷ್ಟಿಷು .. 8-3..   ಯಾವಾಗ ಮನಸ್ಸು ಯಾವುದಾದರೂ ದೃಷ್ಟಿಯಲ್ಲಿ ಅಥವಾ ಜಡ ವಸ್ತುವಿನಲ್ಲಿ  ಆಸಕ್ತನಾಗುವದೋ, ಆಗ ಆತ್ಮ ಬಂಧನಕ್ಕೊಳಗಾಗು...

ಅಷ್ಟಾವಕ್ರಗೀತಾ - ೯

  ವೈರಾಗ್ಯ ಅಷ್ಟಾವಕ್ರ ಉವಾಚ- ಕೃತಾಕೃತೇ ಚ ದ್ವಂದ್ವಾನಿ ಕದಾ ಶಾಂತಾನಿ ಕಸ್ಯ ವಾ . ಏವಂ ಜ್ಞಾತ್ವೇಹ ನಿರ್ವೇದಾದ್ ಭವ ತ್ಯಾಗಪರೋಽವ್ರತೀ .. 9-1..   ಈ ಕೆಲಸ ಮಾಡಬೇಕಾದದ್ದು, ಈ ಕೆಲಸ ಮಾಡಬಾರದ್ದು ಎಂಬ ದ್ವಂದ್ವ ಎಂದಿಗೂ ಕೊನೆಯಾಗದು, ಯಾರಿಗೂ ಕೊನೆಯಾಗದು. ಇದನ್ನು ಅರಿತು ನೀನು ತ್ಯಾಗಪರನಾಗಿ, ವಿರಕ್ತನಾಗಿ, ನಿರಾಸಕ್ತನಾಗು. ಕಸ್ಯಾಪಿ ತಾತ ಧನ್ಯಸ್ಯ ಲೋಕಚೇಷ್ಟಾವಲೋಕನಾತ್ . ಜೀವಿತೇಚ್ಛಾ ಬುಭುಕ್ಷಾ ಚ ಬುಭುತ್ಸೋಪಶಮಂ ಗತಾಃ .. 9-2..   ಯಾರಲ್ಲಿ ಈ ಲೋಕದ ಚೇಷ್ಟೆಗಳನ್ನು ನೋಡಿ (ಅವುಗಳ ನಿರರ್ಥಕತೆಯನ್ನು ಅರಿತು), ಜೀವಿಸುವ ಇಚ್ಛೆ, ಜೀವನವನ್ನು ಭೋಗಿಸುವ ಇಚ್ಛೆ ಮತ್ತು ಜ್ಞಾನದ ಇಚ್ಛೆ ಇವೆಲ್ಲವೂ ನಶಿಸುವದೋ, ಅಂತವನೇ ಧನ್ಯನು. ಅನಿತ್ಯಂ ಸರ್ವಮೇವೇದಂ ತಾಪತ್ರಿತಯದೂಷಿತಂ . ಅಸಾರಂ ನಿಂದಿತಂ ಹೇಯಮಿತಿ ನಿಶ್ಚಿತ್ಯ ಶಾಮ್ಯತಿ .. 9-3..   ಈ ಜಗದಲ್ಲಿ ಕಾಣುವದೆಲ್ಲ ಅಶಾಶ್ವತ ಮತ್ತು ಮೂರು ಬಗೆಯ ನೋವಿನಿಂದ ತುಂಬಿರುವದು, ನಿಂದನೀಯ, ಸಾರವಿಲ್ಲದ್ದು, ಹೇಯವಾದದ್ದು ಎನ್ನುವ ಸತ್ಯ ತಿಳಿದಾಗ ನೀನು ಶಾಂತನಾಗುವೆ. ಕೋಽಸೌ ಕಾಲೋ ವಯಃ ಕಿಂ ವಾ ಯತ್ರ ದ್ವಂದ್ವಾನಿ ನೋ ನೃಣಾಂ . ತಾನ್ಯುಪೇಕ್ಷ್ಯ ಯಥಾಪ್ರಾಪ್ತವರ್ತೀ ಸಿದ್ಧಿಮವಾಪ್ನುಯಾತ್ .. 9-4..    ಮನುಜನಿಗೆ ಯಾವ ವಯಸ್ಸಿನಲ್ಲಿ ಅಥವಾ ಯಾವ ಕಾಲದಲ್ಲಿ ಸುಖ-ದುಃಖಗಳ, ಒಳಿತು-ಕೆಡುಕುಗಳ ದ್ವಂದ್ವ ಇರವದಿಲ್ಲ? ಅವುಗಳನ್...

ಅಷ್ಟಾವಕ್ರ ಗೀತಾ - ೧೦

 ಪ್ರಶಾಂತತೆ ಅಷ್ಟಾವಕ್ರ  ಉವಾಚ- ವಿಹಾಯ ವೈರಿಣಂ ಕಾಮಮರ್ಥಂ ಚಾನರ್ಥಸಂಕುಲಂ . ಧರ್ಮಮಪ್ಯೇತಯೋರ್ಹೇತುಂ ಸರ್ವತ್ರಾನಾದರಂ ಕುರು .. 10-1..  ವೈರಿಗಳಾದ ಕಾಮ, ಅನರ್ಥಗಳ ಸಂಕುಲವಾದ ಅರ್ಥ(ಧನ-ಕನಕ) ಮತ್ತು ಇವೆರಡಕ್ಕೂ ಹೇತುವಾದ ಧರ್ಮ (ಸತ್ಕರ್ಮ) ಈ ಮೂರನ್ನೂ ತ್ಯಜಿಸಿ, ಎಲ್ಲದರಲ್ಲೂ ಉದಾಸೀನತೆ ತೋರಿಸು.  (ನಾವು ಕರ್ಮ ಮಾಡುವದು ಸಂಪತ್ತು ಪಡೆಯಲು ಮತ್ತು ಸುಖ ಪಡೆಯಲು. ಆ ಕರ್ಮವೇ ಕಾಮ, ಅರ್ಥಗಳ ಗಳಿಕೆಗೆ  ಕಾರಣ. ಹಾಗಾಗಿ ಸತ್ಕರ್ಮವನ್ನೂ ತ್ಯಜಿಸಬೇಕು. ಮೋಕ್ಷ ಪ್ರಾಪ್ತಿಗಾಗಿ ಧರ್ಮಾರ್ಥಕಾಮಗಳೆಲ್ಲವನ್ನೂ ತ್ಯಜಿಸಿ ಅವುಗಳ ಬಗ್ಗೆ ನಿರಾಸಕ್ತಿ ಹೊಂದು.)   ಸ್ವಪ್ನೇಂದ್ರಜಾಲವತ್ ಪಶ್ಯ ದಿನಾನಿ ತ್ರೀಣಿ ಪಂಚ ವಾ . ಮಿತ್ರಕ್ಷೇತ್ರಧನಾಗಾರದಾರದಾಯಾದಿಸಂಪದಃ .. 10-2..  ಮೂರು-ನಾಲ್ಕು ದಿನ ಬಾಳುವ ಮಿತ್ರ, ಭೂಮಿ, ಧನ, ಮನೆ, ಮಡದಿ ಈ ಐದೂ ಮೋಹಗಳನ್ನೂ ಸ್ವಪ್ನದಂತೆ, ಮಾಯಾಜಾಲದಂತೆ ನೋಡು (ಅವುಗಳನ್ನು ತ್ಯಜಿಸು).  ಯತ್ರ ಯತ್ರ ಭವೇತ್ತೃಷ್ಣಾ ಸಂಸಾರಂ ವಿದ್ಧಿ ತತ್ರ ವೈ . ಪ್ರೌಢವೈರಾಗ್ಯಮಾಶ್ರಿತ್ಯ ವೀತತೃಷ್ಣಃ ಸುಖೀ ಭವ .. 10-3..  ಎಲ್ಲೆಲ್ಲಿ ಕಾಮನೆಗಳು ಉಂಟಾಗುವದೋ, ಅಲ್ಲೆಲ್ಲ ಜಗದ ಮಾಯೆಯಿದೆ ಎಂದು ತಿಳಿ. ದೃಢ ವೈರಾಗ್ಯವನ್ನು ಅವಲಂಬಿಸಿ ಆಸೆಯಿಲ್ಲದವನಾಗಿ ಸುಖಿಯಾಗು.  ತೃಷ್ಣಾಮಾತ್ರಾತ್ಮಕೋ ಬಂಧಸ್ತನ್ನಾಶೋ ಮೋಕ್ಷ ಉಚ್ಯತೇ . ಭವಾಸಂಸಕ್ತಿಮಾತ್ರೇಣ ಪ್ರಾಪ್ತಿತುಷ್...

ಅಷ್ಟಾವಕ್ರಗೀತಾ - ೧೧

ಜ್ಞಾನ ಅಷ್ಟಾವಕ್ರ ಉವಾಚ ..   ಭಾವಾಭಾವವಿಕಾರಶ್ಚ ಸ್ವಭಾವಾದಿತಿ ನಿಶ್ಚಯೀ . ನಿರ್ವಿಕಾರೋ ಗತಕ್ಲೇಶಃ ಸುಖೇನೈವೋಪಶಾಮ್ಯತಿ .. 11-1..   ಇರುವುದು, ಇಲ್ಲದಿರುವದು ಇತ್ಯಾದಿ ಬದಲಾವಣೆಗಳು ವಸ್ತುಗಳ ಸ್ವಭಾವ ಎಂದು ತಿಳಿದವನು, ನಿರ್ವಿಕಾರನಾಗಿ, ದುಃಖರಹಿತನಾಗಿ ಸುಖ-ಸಮಾಧಾನವನ್ನು ಹೊಂದುತ್ತಾನೆ. ಈಶ್ವರಃ ಸರ್ವನಿರ್ಮಾತಾ ನೇಹಾನ್ಯ ಇತಿ ನಿಶ್ಚಯೀ . ಅಂತರ್ಗಲಿತಸರ್ವಾಶಃ ಶಾಂತಃ ಕ್ವಾಪಿ ನ ಸಜ್ಜತೇ .. 11-2..   ಈಶ್ವರನು ಸಕಲವನ್ನೂ ನಿರ್ಮಿಸಿದವನು. ಅವನ ಹೊರತು ಇಲ್ಲಿ ಏನೂ ಇಲ್ಲ ಎಂದು ನಿಶ್ಚಯವಾಗಿ ತಿಳಿದವನು, ಎಲ್ಲ ಆಸೆಗಳನ್ನು ತ್ಯಜಿಸಿ, ಯಾವುದಕ್ಕೂ ಅಂಟಿಕೊಳ್ಳವದೆ ಶಾಂತನಾಗಿರುತ್ತಾನೆ. ಆಪದಃ ಸಂಪದಃ ಕಾಲೇ ದೈವಾದೇವೇತಿ ನಿಶ್ಚಯೀ . ತೃಪ್ತಃ ಸ್ವಸ್ಥೇಂದ್ರಿಯೋ ನಿತ್ಯಂ ನ ವಾಂಛತಿ ನ ಶೋಚತಿ .. 11-3..   ಆಪತ್ತುಗಳು ಮತ್ತು ಸುಖ-ಸಂತೋಷಗಳು ತನಗೆ ಬರುವದು ವಿಧಿಯ ಮಾಯೆಯಿಂದಲೇ ಎಂದು ದೃಢವಾಗಿ ಅರಿತವನು, ತೃಪ್ತನಾಗಿ, ಇಂದ್ರಿಯ ನಿಗ್ರಹನಾಗಿ ಇರುತ್ತಾನೆ. ಅವನು ಏನನ್ನೂ ವಾಂಛಿಸುವದೂ ಇಲ್ಲ, ಏನನ್ನೂ ಶೋಕಿಸುವದೂ ಇಲ್ಲ. ಸುಖದುಃಖೇ ಜನ್ಮಮೃತ್ಯೂ ದೈವಾದೇವೇತಿ ನಿಶ್ಚಯೀ . ಸಾಧ್ಯಾದರ್ಶೀ ನಿರಾಯಾಸಃ ಕುರ್ವನ್ನಪಿ ನ ಲಿಪ್ಯತೇ .. 11-4..   ಸುಖದುಃಖಗಳು, ಜನ್ಮ ಮೃತ್ಯು ಇತ್ಯಾದಿಗಳು ವಿಧಿಯ ಮಾಯೆ ಎಂದು ನಿಶ್ಚಯವಾಗಿ ತಿಳಿದವನು, ಬೇಕೆಂಬುದೆಲ್ಲಾ ಅಸಾಧ್ಯವೆಂದು ತಿಳಿದು, ನಿರಾಯಾಸನಾಗುತ್ತಾನೆ. ಮತ್ತು ...

ಅಷ್ಟಾವಕ್ರಗೀತಾ-೧೨

 ಜನಕನ ಸ್ಥಿತಿ  ಜನಕ ಉವಾಚ ..  ಕಾಯಕೃತ್ಯಾಸಹಃ ಪೂರ್ವಂ ತತೋ ವಾಗ್ವಿಸ್ತರಾಸಹಃ . ಅಥ ಚಿಂತಾಸಹಸ್ತಸ್ಮಾದ್ ಏವಮೇವಾಹಮಾಸ್ಥಿತಃ .. 12-1.. ಜನಕನು ಆತ್ಮಜ್ಞಾನದ ನಂತರದ ತನ್ನ ಅನುಭೂತಿಗಳನ್ನು ವರ್ಣಿಸುತ್ತ ಹೀಗೆ ಹೇಳುತ್ತಾನೆ- ಮೊದಲು ನಾನು ಕಾರ್ಯಕೃತ್ಯಗಳ ಬಗ್ಗೆ ನಿರಾಸಕ್ತನಾದೆ. ನಂತರ ಅತಿ ಮಾತುಕತೆಯ ಬಗ್ಗೆ ನಿರಾಸಕ್ತನಾದೆ. ನಂತರ ಯೋಚನೆ ಬಗ್ಗೆ ನಿರಾಸಕ್ತನಾದೆ. ಈಗ ನಾನು ಈ ಸ್ಥಿತಿಯಲ್ಲಿ ಇದ್ದೇನೆ. (ಮಾತು, ಕೃತಿ, ಚಿಂತೆ ಇವಲ್ಲವುಗಳಿಂದ ನಿರ್ಲಿಪ್ತನಾಗಿದ್ದೇನೆ) ಪ್ರೀತ್ಯಭಾವೇನ ಶಬ್ದಾದೇರದೃಶ್ಯತ್ವೇನ ಚಾತ್ಮನಃ . ವಿಕ್ಷೇಪೈಕಾಗ್ರಹೃದಯ ಏವಮೇವಾಹಮಾಸ್ಥಿತಃ .. 12-2.. ಶಬ್ದ ಇತ್ಯಾದಿ ಬಾಹ್ಯ ವಿಷಯಗಳಿಗೇ ಪ್ರೀತಿಯ ಅಭಾವದಿಂದ, ಆತ್ಮವು ಅನುಭವಕ್ಕೆ ಸಿಗದು ಎಂಬ ಸತ್ಯವನ್ನು ಅರಿತು, ಮನಸ್ಸನ್ನು ಏಕಾಗ್ರವಾಗಿಸಿ ನಾನು ಈ ಸ್ಥಿತಿಯಲ್ಲಿ ಇದ್ದೇನೆ.  ಸಮಾಧ್ಯಾಸಾದಿವಿಕ್ಷಿಪ್ತೌ ವ್ಯವಹಾರಃ ಸಮಾಧಯೇ . ಏವಂ ವಿಲೋಕ್ಯ ನಿಯಮಮೇವಮೇವಾಹಮಾಸ್ಥಿತಃ .. 12-3.. . ಸಮಾಧಿ ಸ್ಥಿತಿ ಪಡೆಯಲು ಪ್ರಯತ್ನ ಪಡಬೇಕು ಯಾಕೆಂದರೆ ಬೇರೆ, ಬೇರೆ ಕವಚಗಳು ಮನಸ್ಸನ್ನು ಗೊಂದಲಗೊಳಿಸುತ್ತವೆ . (ನಾನು ಈ ಶರೀರ, ನಾನು ಈ ಮನಸ್ಸು ಇತ್ಯಾದಿ ಮಿಥ್ಯಾಕವಚಗಳು ಸಮಾಧಿ ಪಡೆಯಲು ಅಡ್ಡಿ ಉಂಟುಮಾಡುತ್ತವೆ). ಈ ನಿಯಮವನ್ನು ನೋಡಿ, ಅರಿತು, ನಾನು ಈ ಸ್ಥಿತಿಯಲ್ಲಿ ಇದ್ದೇನೆ.  ಹೇಯೋಪಾದೇಯವಿರಹಾದ್ ಏವಂ ಹರ್ಷವಿಷಾದಯೋಃ . ಅಭಾವಾ...

ಅಷ್ಟಾವಕ್ರಗೀತೆ - ೧೩

 ಜನಕನ ಸಂತೋಷ ಜನಕ ಉವಾಚ-  ಅಕಿಂಚನಭವಂ ಸ್ವಾಸ್ಥ್ಯಂ ಕೌಪೀನತ್ವೇಽಪಿ ದುರ್ಲಭಂ . ತ್ಯಾಗಾದಾನೇ ವಿಹಾಯಾಸ್ಮಾದಹಮಾಸೇ ಯಥಾಸುಖಂ .. ೧೩-೧..  ರಾಜಾ ಜನಕನು ತನ್ನ ಸ್ಥಿತಿಯನ್ನು ವಿವರಿಸುತ್ತ ಹೀಗೆ ಮುಂದುವರಿಸುತ್ತಾನೆ. (ಆತ್ಮದ ಹೊರತು)ಇನ್ನೇನೂ ಇಲ್ಲ ಎಂಬ ಭಾವನೆ, ಆ ವೈರಾಗ್ಯ, ಕೌಪೀನಧಾರಿಯಾದರೂ (ಎಲ್ಲ ತ್ಯಜಿಸಿ ಕೌಪೀನ ಮಾತ್ರ ಧರಿಸಿದರೂ) ದೊರಕುವದು ದುರ್ಲಭ. ಆದ್ದರಿಂದ ನಾನು ತ್ಯಾಗವನ್ನೂ, ಸ್ವೀಕರಿಸುವದನ್ನೂ ಎರಡನ್ನು ಬಿಟ್ಟು ಸುಖದಿಂದಿದ್ದೇನೆ. ಕುತ್ರಾಪಿ ಖೇದಃ ಕಾಯಸ್ಯ ಜಿಹ್ವಾ ಕುತ್ರಾಪಿ ಖಿದ್ಯತೇ . ಮನಃ ಕುತ್ರಾಪಿ ತತ್ತ್ಯಕ್ತ್ವಾ ಪುರುಷಾರ್ಥೇ ಸ್ಥಿತಃ ಸುಖಂ .. ೧೩-೨..  ಎಲ್ಲೋ ಒಂದೆಡೆ ಶರೀರದ ಬಾಧೆ (ಸಾಧನೆ ಮಾಡುವಾಗ), ಇನ್ನೆಲ್ಲೋ ಒಂದು ಕಡೆ ನಾಲಿಗೆಯ ಬಾಧೆ (ಶಾಸ್ತ್ರಗಳ ವಾಚನ ಮಾಡುವಾಗ), ಮತ್ತೆಲ್ಲೋ ಒಂದೆಡೆ ಮನಸ್ಸಿನ ಬಾಧೆ (ಧ್ಯಾನ ಮಾಡುವಾಗ), ಈ ಎಲ್ಲ ಬಾಧೆಗಳನ್ನೂ ತ್ಯಜಿಸಿ ನಾನು ಪುರುಷಾರ್ಥದಲ್ಲಿ ಸುಖವಾಗಿದ್ದೇನೆ. ಕೃತಂ ಕಿಮಪಿ ನೈವ ಸ್ಯಾದ್ ಇತಿ ಸಂಚಿಂತ್ಯ ತತ್ತ್ವತಃ . ಯದಾ ಯತ್ಕರ್ತುಮಾಯಾತಿ ತತ್ ಕೃತ್ವಾಸೇ ಯಥಾಸುಖಂ .. ೧೩-೩..  ತತ್ವಶ: ನೋಡಿದರೆ, ಯಾವ ಕರ್ಮವೂ ಆತ್ಮನಿಂದ ಕೃತವಲ್ಲ(ಎಲ್ಲ ಶರೀರ, ಮನ, ಬುದ್ಧಿಗಳಿಂದ ಕೃತ - ಆತ್ಮದಿಂದಲ್ಲ) ಎಂದು ಅರಿತು, ಯಾವುದು ಲಬ್ಧವೋ ಆ ಕಾರ್ಯವನ್ನು ಮಾಡಿಕೊಂಡು ಸುಖವಾಗಿದ್ದೇನೆ.  ಕರ್ಮನೈಷ್ಕರ್ಮ್ಯನಿರ್ಬಂಧಭಾವಾ ದೇಹಸ್ಥಯ...

ಅಷ್ಟಾವಕ್ರಗೀತೆ - ೧೪

 ಶಾಂತಿ ಜನಕ ಉವಾಚ-    ಪ್ರಕೃತ್ಯಾ ಶೂನ್ಯಚಿತ್ತೋ ಯಃ ಪ್ರಮಾದಾದ್ ಭಾವಭಾವನಃ . ನಿದ್ರಿತೋ ಬೋಧಿತ ಇವ ಕ್ಷೀಣಸಂಸ್ಮರಣೋ ಹಿ ಸಃ .. ೧೪-೧.. ಯಾರು ವಿಷಯಗಳಲ್ಲಿ ಸ್ವಭಾವತಃ ಶೂನ್ಯಚಿತ್ತನಾಗಿ, ರಾಗ-ದ್ವೇಷಗಳಿಂದ ಮುಕ್ತನಾಗಿರುತ್ತಾನೋ, ಅವನು ಪ್ರಮಾದವಶಾತ್ ವಿಷಯ ರಾಗ ದ್ವೇಷಗಳ ಬಗ್ಗೆ ಯೋಚಿಸಿದರೂ,   ನಿದ್ರಿತನಾದವನಾದರೂ ಜಾಗೃತನಂತೆ ಅವನು ಆ ರಾಗ-ದ್ವೇಷಗಳಿಂದ ಪರಿಣಾಮಿತನಾಗುವದಿಲ್ಲ. ಕ್ವ ಧನಾನಿ ಕ್ವ ಮಿತ್ರಾಣಿ ಕ್ವ ಮೇ ವಿಷಯದಸ್ಯವಃ . ಕ್ವ ಶಾಸ್ತ್ರಂ ಕ್ವ ಚ ವಿಜ್ಞಾನಂ ಯದಾ ಮೇ ಗಲಿತಾ ಸ್ಪೃಹಾ .. ೧೪-೨.. ನನ್ನಲ್ಲಿ ಆಸೆ ನಾಶವಾಗಿ ಹೋದ ಮೇಲೆ, ಧನವೆಲ್ಲಿ, ಮಿತ್ರರೆಲ್ಲಿ, ವಿಷಯ ರೂಪದ ಕಳ್ಳರೆಲ್ಲಿ, ಶಾಸ್ತ್ರವೆಲ್ಲಿ, ಜ್ಞಾನ-ವಿಜ್ಞಾನವೆಲ್ಲಿ? (ಆತ್ಮಸಾಕ್ಷಾತ್ಕಾರವಾದ ಮೇಲೆ ನನಗೆ ಇವು ಯಾವುದರಲ್ಲೂ ಆಸಕ್ತಿಯೇ ಉಳಿದಿಲ್ಲ.)  ವಿಜ್ಞಾತೇ ಸಾಕ್ಷಿಪುರುಷೇ ಪರಮಾತ್ಮನಿ ಚೇಶ್ವರೇ . ನೈರಾಶ್ಯೇ ಬಂಧಮೋಕ್ಷೇ ಚ ನ ಚಿಂತಾ ಮುಕ್ತಯೇ ಮಮ .. ೧೪-೩.. ಸಾಕ್ಷಿಪುರುಷನಾದ, ಪರಮಾತ್ಮನಾದ ಈಶ್ವರನನ್ನು ಅರಿತ ಮೇಲೆ, ನನಗೆ ಆಶಾರಾಹಿತ್ಯದಲ್ಲಿ, ಮೋಕ್ಷದಲ್ಲಿ ಆಸಕ್ತಿಯಿಲ್ಲ. ಮುಕ್ತಿ ದೊರಕಬೇಕೆಂಬ ಚಿಂತೆ ಕೂಡ ಇಲ್ಲ. ಅಂತರ್ವಿಕಲ್ಪಶೂನ್ಯಸ್ಯ ಬಹಿಃ ಸ್ವಚ್ಛಂದಚಾರಿಣಃ . ಭ್ರಾಂತಸ್ಯೇವ ದಶಾಸ್ತಾಸ್ತಾಸ್ತಾದೃಶಾ ಏವ ಜಾನತೇ .. ೧೪-೪.. ಅಂತರಂಗದಲ್ಲಿ ವಿಕಲ್ಪರಹಿತನಾದವನು, ಬಾಹ್ಯವಾಗಿ ಭ್ರಾಂತನಂತೆ ಸ್ವಚ್ಛಂದದಿಂದ ವ್ಯವಹರಿಸ...

ಅಷ್ಟಾವಕ್ರಗೀತೆ -೧೫

ಆತ್ಮ ಜ್ಞಾನ   ಅಷ್ಟಾವಕ್ರ ಉವಾಚ .. ಯಥಾತಥೋಪದೇಶೇನ ಕೃತಾರ್ಥಃ ಸತ್ತ್ವಬುದ್ಧಿಮಾನ್ . ಆಜೀವಮಪಿ ಜಿಜ್ಞಾಸುಃ ಪರಸ್ತತ್ರ ವಿಮುಹ್ಯತಿ .. ೧೫-೧.. ಶುದ್ಧ ಬುದ್ಧಿವಂತನು ಹೇಗೋ ಹೇಗೋ ಮಾಡಿದ ಅಲ್ಪ ಸ್ವಲ್ಪ ಉಪದೇಶದಿಂದಲಾದರೂ, ಆತ್ಮಸಾಕ್ಷಾತ್ಕಾರ ಪಡೆಯುತ್ತಾನೆ. ಆದರೆ (ರಜೋ-ತಮೋ ಗುಣಗಳಿಂದ ಪೀಡಿತನಾದ) ಇತರನು ಆಜೀವಪರ್ಯಂತ ಕಷ್ಟಪಟ್ಟರೂ ಅವನಿಗೆ ಆತ್ಮದ ತತ್ವ ತಿಳಿಯದೇ, ಬರಿದೇ ದಿಗ್ಭ್ರಮೆಗೊಳ್ಳುತ್ತಾನೆ. ಮೋಕ್ಷೋ ವಿಷಯವೈರಸ್ಯಂ ಬಂಧೋ ವೈಷಯಿಕೋ ರಸಃ . ಏತಾವದೇವ ವಿಜ್ಞಾನಂ ಯಥೇಚ್ಛಸಿ ತಥಾ ಕುರು .. ೧೫-೨.. ವಿಷಯಾಸಕ್ತಿ ಮೋಕ್ಷದ ಪರಮ ವೈರಿ. ಭೋಗಾಸಕ್ತಿಯೇ ಬಂಧನಕ್ಕೆ ಕಾರಣ. ಇದನ್ನು ತಿಳಿದು, ನಿನ್ನ ಇಚ್ಛೆಯಂತೆ ಮಾಡು. ವಾಗ್ಮಿಪ್ರಾಜ್ಞಾಮಹೋದ್ಯೋಗಂ ಜನಂ ಮೂಕಜಡಾಲಸಂ . ಕರೋತಿ ತತ್ತ್ವಬೋಧೋಽಯಮತಸ್ತ್ಯಕ್ತೋ ಬುಭುಕ್ಷಭಿಃ .. ೧೫-೩.. ಈ ತತ್ವಬೋಧವು ವಾಗ್ಮಿ, ಪ್ರಾಜ್ಞ, ಉದ್ಯಮಶೀಲ ಜನರನ್ನು ಮೌನಿಗಳಾಗಿ, ಜಡರನ್ನಾಗಿ, ನಿಷ್ಕ್ರಿಯರನ್ನಾಗಿ ಮಾಡುತ್ತದೆ. (ಆತ್ಮ ಸಾಕ್ಷಾತ್ಕಾರವಾದ ಮೇಲೆ ಇನ್ನೇನೂ ಸಾಧಿಸಲು,  ಮಾತನಾಡಲು, ಕ್ರಿಯೆ ಮಾಡಲು ಉಳಿಯುವದಿಲ್ಲ. ಅದಕ್ಕಾಗಿ ಅಂತಹ ಜ್ಞಾನಿಯು ಬಾಹ್ಯದಲ್ಲಿ ಮೂಕನಾಗಿ, ನಿಷ್ಕ್ರಿಯನಾಗಿ, ಜಡನಾಗುತ್ತಾನೆ). ಅದಕ್ಕಾಗಿಯೇ ಬುಭುಕ್ಷಗಳು (ಭೋಗಾಸಕ್ತರು) ಈ ಜ್ಞಾನವನ್ನು ದೂರವಿಡುತ್ತಾರೆ.  ನ ತ್ವಂ ದೇಹೋ ನ ತೇ ದೇಹೋ ಭೋಕ್ತಾ ಕರ್ತಾ ನ ವಾ ಭವಾನ್ . ಚಿದ್ರೂಪೋಽಸಿ ಸದಾ ಸಾಕ್ಷೀ...

ಅಷ್ಟಾವಕ್ರಗೀತಾ - ೧೬

 ಅಷ್ಟಾವಕ್ರ ಉವಾಚ .. ಆಚಕ್ಷ್ವ ಶೃಣು ವಾ ತಾತ ನಾನಾಶಾಸ್ತ್ರಾಣ್ಯನೇಕಶಃ . ತಥಾಪಿ ನ ತವ ಸ್ವಾಸ್ಥ್ಯಂ ಸರ್ವವಿಸ್ಮರಣಾದ್ ಋತೇ .. ೧೬-೧.. ಮಗು, ನಾನಾ ಶಾಸ್ತ್ರಗಳನ್ನು, ಕೇಳಿದರೂ, ಹೇಳಿದರೂ ಸಹ,  ಎಲ್ಲವನ್ನೂ ಮರೆಯುವ ತನಕ ನಿನಗೆ ಶಾಂತಿ ಸಿಗದು. ಭೋಗಂ ಕರ್ಮ ಸಮಾಧಿಂ ವಾ ಕುರು ವಿಜ್ಞ ತಥಾಪಿ ತೇ . ಚಿತ್ತಂ ನಿರಸ್ತಸರ್ವಾಶಮತ್ಯರ್ಥಂ ರೋಚಯಿಷ್ಯತಿ .. ೧೬-೨.. ಓ ಜ್ಞಾನಿಯೇ, ನೀನು ಭೋಗವನ್ನು ಅಥವಾ ಕರ್ಮವನ್ನು ಅಥವಾ ಧ್ಯಾನವನ್ನೇ ಮಾಡುತ್ತಿರು. ಚಿತ್ತವು ಸಂತೋಷಗೊಳ್ಳುವದು ಸರ್ವ ಆಸೆಯನ್ನು ತ್ಯಜಿಸಿದಾಗ ಮಾತ್ರ. ಆಯಾಸಾತ್ಸಕಲೋ ದುಃಖೀ ನೈನಂ ಜಾನಾತಿ ಕಶ್ಚನ . ಅನೇನೈವೋಪದೇಶೇನ ಧನ್ಯಃ ಪ್ರಾಪ್ನೋತಿ ನಿರ್ವೃತಿಂ .. ೧೬-೩.. ಸತತ ಪ್ರಯತ್ನದಿಂದ ಎಲ್ಲರೂ ದುಃಖದಲ್ಲಿರುತ್ತಾರೆ. ಆದರೆ ಈ ಮಾತನ್ನು ಯಾರೂ ಅರಿತಿರುವದಿಲ್ಲ. ಈ ಉಪದೇಶವನ್ನು ಪಡೆದ ಧನ್ಯನು ಮುಕ್ತನಾಗುತ್ತಾನೆ. ವ್ಯಾಪಾರೇ ಖಿದ್ಯತೇ ಯಸ್ತು ನಿಮೇಷೋನ್ಮೇಷಯೋರಪಿ . ತಸ್ಯಾಲಸ್ಯ ಧುರೀಣಸ್ಯ ಸುಖಂ ನಾನ್ಯಸ್ಯ ಕಸ್ಯಚಿತ್ .. ೧೬-೪.. ಕಣ್ಣನ್ನು ಮುಚ್ಚಿ ತೆಗೆದು ಮಾಡಲೂ ಯಾರಿಗೆ ಆಲಸ್ಯವೋ ಅಂತಹ ಆಲಸಿ ಧುರೀಣನಿಗೆ ಸುಖ ಲಭ್ಯ - ಇನ್ಯಾರಿಗೂ ಅಲ್ಲ. ಇದಂ ಕೃತಮಿದಂ ನೇತಿ ದ್ವಂದ್ವೈರ್ಮುಕ್ತಂ ಯದಾ ಮನಃ . ಧರ್ಮಾರ್ಥಕಾಮಮೋಕ್ಷೇಷು ನಿರಪೇಕ್ಷಂ ತದಾ ಭವೇತ್ .. ೧೬-೫..  ಇದು ಮಾಡಲಾಗಿದೆ - ಇದನ್ನು ಮಾಡಿ ಆಗಿಲ್ಲ ಎಂಬ ದ್ವಂದ್ವದಿಂದ ಯಾವಾಗ ಮನಸ್ಸು ಮುಕ್ತವಾಗುವದೋ, ಆಗ ಅದ...

ಅಷ್ಟಾವಕ್ರಗೀತಾ - ೧೭

 ಅಷ್ಟಾವಕ್ರ ಉವಾಚ .. ತೇನ ಜ್ಞಾನಫಲಂ ಪ್ರಾಪ್ತಂ ಯೋಗಾಭ್ಯಾಸಫಲಂ ತಥಾ . ತೃಪ್ತಃ ಸ್ವಚ್ಛೇಂದ್ರಿಯೋ ನಿತ್ಯಮೇಕಾಕೀ ರಮತೇ ತು ಯಃ .. ೧೭-೧.. ಯಾರು ಸ್ವಚ್ಛೇಂದ್ರಿಯನೋ, ನಿತ್ಯ ತೃಪ್ತನೋ, ನಿತ್ಯ ಏಕಾಕಿಯಾಗಿ ಸಂತೋಷದಲ್ಲಿರುವನೋ, ಅವನು  ತನ್ನ ಯೋಗಾಭ್ಯಾಸಫಲವನ್ನೂ ಹಾಗೂ ಜ್ಞಾನವನ್ನೂ ಪಡೆಯುತ್ತಾನೆ. ನ ಕದಾಚಿಜ್ಜಗತ್ಯಸ್ಮಿನ್ ತತ್ತ್ವಜ್ಞೋ ಹಂತ ಖಿದ್ಯತಿ . ಯತ ಏಕೇನ ತೇನೇದಂ ಪೂರ್ಣಂ ಬ್ರಹ್ಮಾಂಡಮಂಡಲಂ .. ೧೭-೨.. ಆಹಾ, ತತ್ವಜ್ಞನಾದವನು ಎಂದೂ ದುಃಖಿಸುವದಿಲ್ಲ ಯಾಕೆಂದರೆ ಈ ಪ್ರಪಂಚವೆಲ್ಲಾ 'ಅವನಿಂದ' ಆವೃತವಾಗಿದೆ . ನ ಜಾತು ವಿಷಯಾಃ ಕೇಽಪಿ ಸ್ವಾರಾಮಂ ಹರ್ಷಯಂತ್ಯಮೀ . ಸಲ್ಲಕೀಪಲ್ಲವಪ್ರೀತಮಿವೇಭಂ ನಿಂಬಪಲ್ಲವಾಃ .. ೧೭-೩.. ಸಲ್ಲಕಿ ಗಿಡದ ಎಲೆಗಳನ್ನು ಪ್ರಿತಿಸುವ ಆನೆ ಬೇವಿನ ಎಲೆಯನ್ನು ಇಷ್ಟಪಡದೆ ಇರುವಂತೆ, ಸ್ವಯಂ ಸಂತುಷ್ಟನಾದವನಿಗೆ ವಿಷಯ ಸುಖಗಳು ಹರ್ಷ ತರುವದಿಲ್ಲ. ಯಸ್ತು ಭೋಗೇಷು ಭುಕ್ತೇಷು ನ ಭವತ್ಯಧಿವಾಸಿತಃ . ಅಭುಕ್ತೇಷು ನಿರಾಕಾಂಕ್ಷೀ ತಾದೃಶೋ ಭವದುರ್ಲಭಃ .. ೧೭-೪.. ಯಾರು ಭೋಗಿಸಿಯೂ ಅದರಲ್ಲಿ ನಿರ್ಲಿಪ್ತನೋ, ತಾನು ಭೋಗಿಸದ ವಸ್ತುಗಳಲ್ಲಿ ನಿರಾಸಕ್ತನೋ, ಅಂತಹ ಮನುಷ್ಯನು ಸಿಗುವದು ದುರ್ಲಭ. ಬುಭುಕ್ಷುರಿಹ ಸಂಸಾರೇ ಮುಮುಕ್ಷುರಪಿ ದೃಶ್ಯತೇ . ಭೋಗಮೋಕ್ಷನಿರಾಕಾಂಕ್ಷೀ ವಿರಲೋ ಹಿ ಮಹಾಶಯಃ .. ೧೭-೫.. ಈ ಜಗದಲ್ಲಿ ಭುಭುಕ್ಷಗಳೂ ಸಿಗುತ್ತಾರೆ, ಮುಮುಕ್ಷುಗಳೂ ಸಿಗುತ್ತಾರೆ. ಆದರೆ ಯಾರಿಗೆ ಭೋಗದಲ್ಲೂ ನಿರಾಸಕ್ತಿ,...

ಅಷ್ಟಾವಕ್ರಗೀತಾ - ೧೮

 ಅಷ್ಟಾವಕ್ರ ಉವಾಚ .. ಯಸ್ಯ ಬೋಧೋದಯೇ ತಾವತ್ಸ್ವಪ್ನವದ್ ಭವತಿ ಭ್ರಮಃ . ತಸ್ಮೈ ಸುಖೈಕರೂಪಾಯ ನಮಃ ಶಾಂತಾಯ ತೇಜಸೇ .. ೧೮-೧.. ಯಾರಿಗೆ ಜ್ಞಾನೋದಯದಿಂದ ಮಾಯಾ-ಮೋಹಗಳು ಸ್ವಪ್ನದಂತಾಗುವವೋ (ಸ್ವಪ್ನದಂತೆ ಮಿಥ್ಯೆಯಾಗುವವೋ), ಅಂತಹ ಸುಖ ಏಕರೂಪಿ, ಶಾಂತರೂಪಿ ತೇಜಸ್ವಿಗೆ ನಮಸ್ಕಾರಗಳು. ಅರ್ಜಯಿತ್ವಾಖಿಲಾನ್ ಅರ್ಥಾನ್ ಭೋಗಾನಾಪ್ನೋತಿ ಪುಷ್ಕಲಾನ್ . ನ ಹಿ ಸರ್ವಪರಿತ್ಯಾಗಮಂತರೇಣ ಸುಖೀ ಭವೇತ್ .. ೧೮-೨.. ಮನುಷ್ಯನು ಅಖಿಲ ಧನ-ಸಂಪತ್ತುಗಳನ್ನು ಗಳಿಸಿದಾಗ ಪುಷ್ಕಳ ಭೋಗವನ್ನು ಅನುಭವಿಸುತ್ತಾನೆ. ಆದರೆ ಸರ್ವವನ್ನೂ ತ್ಯಾಗ ಮಾಡುವತನಕ ಅವನು ಸುಖಿಯಾಗುವದಿಲ್ಲ. (ಭರ್ತ್ರಹರಿಯ ಒಂದು ಶ್ಲೋಕ ಹೀಗೆ ಹೇಳುತ್ತದೆ " ಸುಖದಲ್ಲಿ ರೋಗದ ಭಯವಿದೆ;  ಗೌರವಾನ್ವಿತ ಸಾಮಾಜಿಕ ಸ್ಥಾನದಲ್ಲಿ, ಅದನ್ನು ಕಳೆದುಕೊಳ್ಳುವ ಭಯವಿದೆ; ಸಂಪತ್ತಿನಲ್ಲಿ  ರಾಜರ (ತೆರಿಗೆಯ) ಭಯವಿದೆ; ಗೌರವದಲ್ಲಿ ಅವಮಾನದ ಭಯವಿದೆ; ಅಧಿಕಾರದಲ್ಲಿ, ಶತ್ರುಗಳ ಭಯವಿದೆ; ಸೌಂದರ್ಯದಲ್ಲಿ ವೃದ್ಧಾಪ್ಯದ ಭಯವಿದೆ; ಪಾಂಡಿತ್ಯದಲ್ಲಿ, ವಿರೋಧಿಗಳ ಭಯವಿದೆ; ದೇಹದಲ್ಲಿ, ಮರಣದ ಭಯವಿದೆ. ಮನುಷ್ಯರಿಗೆ ಸಂಬಂಧಿಸಿದ ಎಲ್ಲಾ ಐಹಿಕ ವಿಷಯಗಳು ಭಯದಿಂದ ಕೂಡಿರುತ್ತವೆ; ಸರ್ವ ಪರಿತ್ಯಾಗ ಮಾತ್ರ ಎಲ್ಲಾ ಭಯವನ್ನು ನಾಶ ಮಾಡುತ್ತದೆ.") ಕರ್ತವ್ಯದುಃಖಮಾರ್ತಂಡಜ್ವಾಲಾದಗ್ಧಾಂತರಾತ್ಮನಃ . ಕುತಃ ಪ್ರಶಮಪೀಯೂಷಧಾರಾಸಾರಮೃತೇ ಸುಖಂ .. ೧೮-೩.. ಅಂತರಾತ್ಮನು ಕರ್ತವ್ಯ ಮತ್ತು ದುಃಖಗಳ ಸೂರ್ಯಸಮಾನ ಜ್ವಾ...