ಅಷ್ಟಾವಕ್ರಗೀತಾ-೮

  ಬಂಧನ ಮತ್ತು ಮುಕ್ತಿ

ಅಷ್ಟಾವಕ್ರ ಉವಾಚ - 

ತದಾ ಬಂಧೋ ಯದಾ ಚಿತ್ತಂ ಕಿಂಚಿದ್ ವಾಂಛತಿ ಶೋಚತಿ .
ಕಿಂಚಿನ್ ಮುಂಚತಿ ಗೃಹ್ಣಾತಿ ಕಿಂಚಿದ್ಧೃಷ್ಯತಿ ಕುಪ್ಯತಿ .. 8-1..  

ಯಾವಾಗ ಮನಸ್ಸು ಏನನ್ನಾದರೂ ಆಸೆ ಪಡುವದೋ, ಏನನ್ನಾದರೂ ಕುರಿತು ಶೋಕ ಪಡುವದೋಏನನ್ನಾದರೂ ಪಡೆಯುವದೋ, ಏನನ್ನಾದರೂ ತ್ಯಜಿಸಿವದೋ, ಏನನ್ನಾದರೂ ಕುರಿತು ಸಂತೋಷ ಪಡುವದೋ, ಏನನ್ನಾದರೂ ಕುರಿತು ದುಃಖಿಸುವದೋ, ಆಗ ಆತ್ಮಕ್ಕೆ ಬಂಧನ ಉಂಟಾಗುತ್ತದೆ.  

ತದಾ ಮುಕ್ತಿರ್ಯದಾ ಚಿತ್ತಂ ನ ವಾಂಛತಿ ನ ಶೋಚತಿ .
ನ ಮುಂಚತಿ ನ ಗೃಹ್ಣಾತಿ ನ ಹೃಷ್ಯತಿ ನ ಕುಪ್ಯತಿ .. 8-2..  

ಯಾವಾಗ ಮನಸ್ಸು ಏನನ್ನೂ  ಆಸೆ ಪಡುವದಿಲ್ಲವೋ, ಏನನ್ನು  ಕುರಿತೂ ಶೋಕ ಪಡುವದಿಲ್ಲವೋಏನನ್ನೂ  ಪಡೆಯುವದಿಲ್ಲವೋ, ಏನನ್ನೂ  ತ್ಯಜಿಸಿವದಿಲ್ಲವೋ, ಏನನ್ನು ಕುರಿತು ಸಂತೋಷಪಡುವದಿಲ್ಲವೋ, ಏನನ್ನೂ  ಕುರಿತು ದುಃಖಿಸುವದಿಲ್ಲವೋ, ಆಗ ಆತ್ಮಕ್ಕೆ ಮುಕ್ತಿ  ದೊರೆಯುತ್ತದೆ.  

ತದಾ ಬಂಧೋ ಯದಾ ಚಿತ್ತಂ ಸಕ್ತಂ ಕಾಸ್ವಪಿ ದೃಷ್ಟಿಷು .
ತದಾ ಮೋಕ್ಷೋ ಯದಾ ಚಿತ್ತಮಸಕ್ತಂ ಸರ್ವದೃಷ್ಟಿಷು .. 8-3..  

ಯಾವಾಗ ಮನಸ್ಸು ಯಾವುದಾದರೂ ದೃಷ್ಟಿಯಲ್ಲಿ ಅಥವಾ ಜಡ ವಸ್ತುವಿನಲ್ಲಿ  ಆಸಕ್ತನಾಗುವದೋ, ಆಗ ಆತ್ಮ ಬಂಧನಕ್ಕೊಳಗಾಗುತ್ತದೆ. ಯಾವಾಗ ಮನಸ್ಸು ಎಲ್ಲದರಲ್ಲೂ ನಿರಾಸಕ್ತಿ ತಾಳುವದೋ, ಆಗ ಮೋಕ್ಷ ದೊರಕುತ್ತದೆ.  

ಯದಾ ನಾಹಂ ತದಾ ಮೋಕ್ಷೋ ಯದಾಹಂ ಬಂಧನಂ ತದಾ .
ಮತ್ವೇತಿ ಹೇಲಯಾ ಕಿಂಚಿನ್ಮಾ ಗೃಹಾಣ ವಿಮುಂಚ ಮಾ .. 8-4.. 

'ನಾನು' ಎಂಬ ಮೋಹವನ್ನು ಬಿಟ್ಟರೆ ಮೋಕ್ಷ, "ನಾನು" ಎಂಬ ಮೋಹವಿದ್ದರೆ ಬಂಧನ. ಇದನ್ನು ಯೋಚಿಸಿ (ಮನನ ಮಾಡಿಕೊಂಡು) ಸುಲಭವಾಗಿ ಯಾವುದನ್ನೂ ಗ್ರಹಣ ಮಾಡಬೇಡ ಅಥವಾ ಯಾವುದನ್ನೂ ತ್ಯಜಿಸಬೇಡ.

 

ಸಂಪೂರ್ಣ ಕೃತಿಯನ್ನು ಡೌನ್ ಲೋಡ್ ಮಾಡಿ.  



 

Comments

Popular posts from this blog

ಅಷ್ಟಾವಕ್ರಗೀತಾ - ೧

ಅಷ್ಟಾವಕ್ರಗೀತಾ - ೩

ಅಷ್ಟಾವಕ್ರಗೀತಾ - ೨