Skip to main content

ಅಷ್ಟಾವಕ್ರ ಗೀತಾ - ೧೦

 ಪ್ರಶಾಂತತೆ

ಅಷ್ಟಾವಕ್ರ  ಉವಾಚ-

ವಿಹಾಯ ವೈರಿಣಂ ಕಾಮಮರ್ಥಂ ಚಾನರ್ಥಸಂಕುಲಂ .
ಧರ್ಮಮಪ್ಯೇತಯೋರ್ಹೇತುಂ ಸರ್ವತ್ರಾನಾದರಂ ಕುರು .. 10-1.. 

ವೈರಿಗಳಾದ ಕಾಮ, ಅನರ್ಥಗಳ ಸಂಕುಲವಾದ ಅರ್ಥ(ಧನ-ಕನಕ) ಮತ್ತು ಇವೆರಡಕ್ಕೂ ಹೇತುವಾದ ಧರ್ಮ (ಸತ್ಕರ್ಮ) ಈ ಮೂರನ್ನೂ ತ್ಯಜಿಸಿ, ಎಲ್ಲದರಲ್ಲೂ ಉದಾಸೀನತೆ ತೋರಿಸು. 

(ನಾವು ಕರ್ಮ ಮಾಡುವದು ಸಂಪತ್ತು ಪಡೆಯಲು ಮತ್ತು ಸುಖ ಪಡೆಯಲು. ಆ ಕರ್ಮವೇ ಕಾಮ, ಅರ್ಥಗಳ ಗಳಿಕೆಗೆ  ಕಾರಣ. ಹಾಗಾಗಿ ಆ ಕರ್ಮವನ್ನೂ  ತ್ಯಜಿಸಬೇಕು. ಮೋಕ್ಷ ಪ್ರಾಪ್ತಿಗಾಗಿ ಧರ್ಮಾರ್ಥಕಾಮಗಳೆಲ್ಲವನ್ನೂ ತ್ಯಜಿಸಿ ಅವುಗಳ ಬಗ್ಗೆ ನಿರಾಸಕ್ತಿ ಹೊಂದಬೇಕು.)  

ಸ್ವಪ್ನೇಂದ್ರಜಾಲವತ್ ಪಶ್ಯ ದಿನಾನಿ ತ್ರೀಣಿ ಪಂಚ ವಾ .
ಮಿತ್ರಕ್ಷೇತ್ರಧನಾಗಾರದಾರದಾಯಾದಿಸಂಪದಃ .. 10-2.. 

ಮೂರು-ನಾಲ್ಕು ದಿನ ಬಾಳುವ ಮಿತ್ರ, ಭೂಮಿ, ಧನ, ಮನೆ, ಮಡದಿ ಈ ಐದೂ ಮೋಹಗಳನ್ನೂ ಸ್ವಪ್ನದಂತೆ, ಮಾಯಾಜಾಲದಂತೆ ನೋಡು (ಅವುಗಳನ್ನು ತ್ಯಜಿಸು). 

ಯತ್ರ ಯತ್ರ ಭವೇತ್ತೃಷ್ಣಾ ಸಂಸಾರಂ ವಿದ್ಧಿ ತತ್ರ ವೈ .
ಪ್ರೌಢವೈರಾಗ್ಯಮಾಶ್ರಿತ್ಯ ವೀತತೃಷ್ಣಃ ಸುಖೀ ಭವ .. 10-3.. 

ಎಲ್ಲೆಲ್ಲಿ ಕಾಮನೆಗಳು ಉಂಟಾಗುವದೋ, ಅಲ್ಲೆಲ್ಲ ಜಗದ ಮಾಯೆಯಿದೆ ಎಂದು ತಿಳಿ. ದೃಢ ವೈರಾಗ್ಯವನ್ನು ಅವಲಂಬಿಸಿ ಆಸೆಯಿಲ್ಲದವನಾಗಿ ಸುಖಿಯಾಗು. 

ತೃಷ್ಣಾಮಾತ್ರಾತ್ಮಕೋ ಬಂಧಸ್ತನ್ನಾಶೋ ಮೋಕ್ಷ ಉಚ್ಯತೇ .
ಭವಾಸಂಸಕ್ತಿಮಾತ್ರೇಣ ಪ್ರಾಪ್ತಿತುಷ್ಟಿರ್ಮುಹುರ್ಮುಹುಃ .. 10-4.. 

ಆಸೆಯಿಂದಲೇ ಬಂಧನ ಉಂಟಾಗುತ್ತದೆ. ಅದು ನಾಶವಾದಾಗ ಮೋಕ್ಷ ದೊರೆಯುತ್ತದೆ. ಈ ಜಗತ್ತಿನ ಬಂಧನಗಳಿಂದ ಹೊರಬಂದಾಗ ಮಾತ್ರ ನಿರಂತರವಾದ ತೃಪ್ತಿ ಸಿಗುತ್ತದೆ. 

ತ್ವಮೇಕಶ್ಚೇತನಃ ಶುದ್ಧೋ ಜಡಂ ವಿಶ್ವಮಸತ್ತಥಾ .
ಅವಿದ್ಯಾಪಿ ನ ಕಿಂಚಿತ್ಸಾ ಕಾ ಬುಭುತ್ಸಾ ತಥಾಪಿ ತೇ .. 10-5.. 

ನೀನೇ ಶುದ್ಧ ಚೈತನ್ಯವಾಗಿರುವೆ. ಈ ಜಗತ್ತು ಮಿಥ್ಯೆ ಹಾಗೂ ಜಡ ಹಾಗೂ ಬುದ್ಧಿವಿಹೀನವಾಗಿದೆ. ಅಜ್ಞಾನವೂ ಇಲ್ಲ. ಹಾಗಾಗಿ ನಿನಗೆ ಯಾವ ಜ್ಞಾನದ ಆಸೆ ಇದೆ? 

(ಎಲ್ಲಾ ಆಸೆಗಳೂ ಬಂಧನ. ಜ್ಞಾನದ ಆಸೆಯೂ ಬಂಧನವೇ. ಹಾಗಾಗಿ ಜ್ಞಾನದ ಆಸೆಯನ್ನೂ ತ್ಯಜಿಸಬೇಕು ಎಂದು ಅಷ್ಟಾವಕ್ರ ಹೇಳುತ್ತಾನೆ.) 

ರಾಜ್ಯಂ ಸುತಾಃ ಕಲತ್ರಾಣಿ ಶರೀರಾಣಿ ಸುಖಾನಿ ಚ .
ಸಂಸಕ್ತಸ್ಯಾಪಿ ನಷ್ಟಾನಿ ತವ ಜನ್ಮನಿ ಜನ್ಮನಿ .. 10-6.. 

ನೀನು ರಾಜ್ಯ, ಮಕ್ಕಳು, ಪತ್ನಿಯರು, ಸುಖ ಇವೆಲ್ಲವುಗಳ ಬಂಧನಕ್ಕೊಳಗಾಗಿದ್ದರೂ, ಇವೆಲ್ಲವನ್ನು  ಪ್ರತಿ ಜನ್ಮದಲ್ಲಿ ನೀನು ಕಳೆದುಕೊಳ್ಳುತ್ತಾ ಬಂದಿದ್ದೀಯಾ.  

ಅಲಮರ್ಥೇನ ಕಾಮೇನ ಸುಕೃತೇನಾಪಿ ಕರ್ಮಣಾ .
ಏಭ್ಯಃ ಸಂಸಾರಕಾಂತಾರೇ ನ ವಿಶ್ರಾಂತಮಭೂನ್ ಮನಃ .. 10-7.. 

ಅರ್ಥ, ಕಾಮ, ಸುಕರ್ಮ ಇವೆಲ್ಲ ಇನ್ನು ಸಾಕು. ಇವುಗಳಿಂದ ಸಂಸಾರ ಅರಣ್ಯದಲ್ಲಿ ಎಂದಿಗೂ ಮನಸ್ಸಿನ ನೆಮ್ಮದಿ ಸಿಗಲಿಲ್ಲ.

ಕೃತಂ ನ ಕತಿ ಜನ್ಮಾನಿ ಕಾಯೇನ ಮನಸಾ ಗಿರಾ .
ದುಃಖಮಾಯಾಸದಂ ಕರ್ಮ ತದದ್ಯಾಪ್ಯುಪರಮ್ಯತಾಂ .. 10-8.. 

ಎಷ್ಟು ಜನ್ಮಗಳಿಂದ ಕಾಯ, ವಾಕ್, ಮನಸ್ಸಿನಿಂದ ನೋವಿನಿಂದ ತುಂಬಿದ, ಕಷ್ಟಕರವಾದ ಕರ್ಮಗಳನ್ನು ಮಾಡುತ್ತಾ ಬಂದಿದ್ದೀಯಾ.ಈಗಲಾದರೂ ಅವನ್ನು ನಿಲ್ಲಿಸು.  

 

ಸಂಪೂರ್ಣ ಕೃತಿಯನ್ನು ಡೌನ್ ಲೋಡ್ ಮಾಡಿ. 

Comments

Popular posts from this blog

ಅಷ್ಟಾವಕ್ರಗೀತಾ - ೧

.. ಶ್ರೀ .. ಅಥ ಶ್ರೀಮದಷ್ಟಾವಕ್ರಗೀತಾ ಪ್ರಾರಭ್ಯತೇ . ಜನಕ ಉವಾಚ .. ಕಥಂ ಜ್ಞಾನಮವಾಪ್ನೋತಿ ಕಥಂ ಮುಕ್ತಿರ್ಭವಿಷ್ಯತಿ . ವೈರಾಗ್ಯಂ ಚ ಕಥಂ ಪ್ರಾಪ್ತಮೇತದ್ ಬ್ರೂಹಿ ಮಮ ಪ್ರಭೋ .. 1-1.. ಶಬ್ದಾರ್ಥ ಪ್ರಾರಭ್ಯತೇ = ಆರಂಭವಾಗುತ್ತದೆ ಜನಕ ಉವಾಚ = ಜನಕನು ಹೇಳಿದನು ಕಥಂ = ಹೇಗೆ ಜ್ಞಾನಮ್ + ಅವಾಪ್ನೋತಿ = ಜ್ಞಾನವನ್ನು ಪಡೆಯಬೇಕು ಮುಕ್ತಿ = ಮೋಕ್ಷ ಭವಿಷ್ಯತಿ = ಆಗುತ್ತದೆ ವೈರಾಗ್ಯ = ವೈರಾಗ್ಯ ಚ =ಮತ್ತು ಪ್ರಾಪ್ತಂ + ಏತತ್ = ಪಡೆಯತಕ್ಕದ್ದು , ಇದನ್ನು ಬ್ರೂಹಿ =ಹೇಳು ಮಮ =ನನ್ನ. ಪ್ರಭೋ = ಪ್ರಭುವೇ ಅನುವಾದ   ಜನಕ ಹೇಳಿದನು. ಜ್ಞಾನವನ್ನು ಹೇಗೆ ಸಂಪಾದಿಸಬೇಕು? ಮುಕ್ತಿಯನ್ನು ಹೇಗೆ ಪಡೆಯಬೇಕು? ವೈರಾಗ್ಯವನ್ನು ಪಡೆಯುವದು ಹೇಗೆ? ಪ್ರಭೂ, ಇದನ್ನು ನನಗೆ ತಿಳಿಸಿಕೊಡಿ. ಜನಕನು ನಮ್ಮೆಲ್ಲರ ಮನಸ್ಸಿನಲ್ಲಿರುವ ಪ್ರಶ್ನೆಯನ್ನೇ ಕೇಳುತ್ತಿದ್ದಾನೆ - ಜ್ಞಾನ ಪಡೆಯುವದು ಹೇಗೆ - ಅಧ್ಯಾತ್ಮ ಜ್ಞಾನ - ಕಬ್ಬಿಣದ ಕಡಲೆ - ಅದನ್ನು ತಿಳಿಯುವದು ಹೇಗೆ? ನಂತರ ಮೋಕ್ಷ ಪಡೆಯುವದು ಹೇಗೆ? ಈ ಸುಖ-ದುಃಖಗಳಿಂದ, ಹುಟ್ಟು-ಸಾವುಗಳಿಂದ, ಜರಾ-ಮೃತ್ಯುಗಳಿಂದ ಹೇಗೆ ಪಾರಾಗುವದು? ನಾನು-ನನ್ನದು ಎಂಬ ಆಶಾ-ಪಾಶದಿಂದ ಹೊರ ಬರುವದು ಹೇಗೆ? ಅಷ್ಟಾವಕ್ರ ಉವಾಚ .. ಮುಕ್ತಿಮಿಚ್ಛಸಿ ಚೇತ್ತಾತ ವಿಷಯಾನ್ ವಿಷವತ್ತ್ಯಜ . ಕ್ಷಮಾರ್ಜವದಯಾತೋಷಸತ್ಯಂ ಪೀಯೂಷವದ್ ಭಜ .. 1-2.. ಶಬ್ದಾರ್ಥ ಮುಕ್ತಿಂ = ಮು...

ಅಷ್ಟಾವಕ್ರಗೀತಾ - ೩

ಆತ್ಮಜ್ಞಾನದ ಅವಲೋಕನ ಅಷ್ಟಾವಕ್ರ ಉವಾಚ .. ಅವಿನಾಶಿನಮಾತ್ಮಾನಮೇಕಂ ವಿಜ್ಞಾಯ ತತ್ತ್ವತಃ . ತವಾತ್ಮಜ್ಞಾನಸ್ಯ ಧೀರಸ್ಯ ಕಥಮರ್ಥಾರ್ಜನೇ ರತಿಃ .. 3-1..  ಶಬ್ದಾರ್ಥ: ಅವಿನಾಶಿನಂ =ವಿನಾಶವಿಲ್ಲದವನನ್ನು;   ಆತ್ಮಾನಂ =ಆತ್ಮನನ್ನು;   ಏಕಂ =ಏಕೈಕನನ್ನು;  ವಿಜ್ಞಾಯ =ತಿಳಿದು;  ತತ್ತ್ವತಃ =ನಿಜ ಸ್ವರೂಪದಲ್ಲಿ;  ತವ =ನಿನ್ನ;  ಆತ್ಮಜ್ಞಾನಸ್ಯ =ಆತ್ಮಜ್ಞಾನಿಯ;  ಧೀರಸ್ಯ =ಧೀರನ;  ಕಥಂ =ಹೇಗೆ;  ಅರ್ಥಾರ್ಜನೇ =ಹಣದ(ಅರ್ಥ) ಗಳಿಕೆಯಲ್ಲಿ(ಅರ್ಜನೇ);  ರತಿಃ =ಮೋಹ ಅನುವಾದ: ಅವಿನಾಶಿಯಾದ, ಅದ್ವೈತವಾದ ಆತ್ಮವನ್ನು ಅರಿತುಕೊಂಡಮೇಲೆ ಆತ್ಮಜ್ಞಾನಿಯಾದ ಧೀರನು, ಸಂಪತ್ತನ್ನು ಗಳಿಸುವದಲ್ಲಿ ಆಸಕ್ತಿಯನ್ನು ಹೇಗೆ ಇರಿಸಿಕೊಳ್ಳುತ್ತಾನೆ? ವಿವರಣೆ: ಆತ್ಮಜ್ಞಾನವನ್ನು ಹುಡುಕುತ್ತ ಜನಕನು ಅದರ ಜೊತೆಗೇ ರಾಜ್ಯಭಾರವನ್ನೂ ಮಾಡುತ್ತಿದ್ದಾನೆ. ಅದಕ್ಕಾಗಿ ಅಷ್ಟಾವಕ್ರ ಮುನಿಯು ಅವನನ್ನು ಪರೀಕ್ಷಿಸುತ್ತ ಕೇಳುತ್ತಾನೆ - ಆತ್ಮಜ್ಞಾನವನ್ನು ಪಡೆದ ಮೇಲೆಯೂ ಹೇಗೆ ಧನಸಂಪಾದನೆಯಲ್ಲಿ ಆಸಕ್ತಿ ಇರುತ್ತದೆ.  ಆತ್ಮಾಜ್ಞಾನಾದಹೋ ಪ್ರೀತಿರ್ವಿಷಯಭ್ರಮಗೋಚರೇ . ಶುಕ್ತೇರಜ್ಞಾನತೋ ಲೋಭೋ ಯಥಾ ರಜತವಿಭ್ರಮೇ .. 3-2.. ಶಬ್ದಾರ್ಥ: ಆತ್ಮ + ಅಜ್ಞಾನಾತ್ =ಆತ್ಮದ ಅಜ್ಞಾನದಿಂದ; ಅಹೋ =ಅಹೋ; ಪ್ರೀತಿಃ =ಪ್ರೀತಿ; ವಿಷಯಭ್ರಮಗೋಚರೇ =ಭ್ರಮೆಯಾದ ವಿಷಯಗಳಲ್ಲಿ; ಶುಕ್ತೇ + ಅಜ್ಞಾನತಃ =ಚಿಪ್...

ಅಷ್ಟಾವಕ್ರ ಗೀತಾ - ೫

ಲಯದ ಉಪದೇಶ ಅಷ್ಟಾವಕ್ರ ಉವಾಚ .. ನ ತೇ ಸಂಗೋಽಸ್ತಿ ಕೇನಾಪಿ ಕಿಂ ಶುದ್ಧಸ್ತ್ಯಕ್ತುಮಿಚ್ಛಸಿ . ಸಂಘಾತವಿಲಯಂ ಕುರ್ವನ್ನೇವಮೇವ ಲಯಂ ವ್ರಜ .. 5-1.. ಅಷ್ಟಾವಕ್ರನು ಜನಕನಿಗೆ ಮೋಕ್ಷದ ಮಾರ್ಗವನ್ನು ತಿಳಿಸಿ ಹೇಳುತ್ತಾ ಹೀಗೆ ಹೇಳುತ್ತಾನೆ- ನೀನು ಶುದ್ಧನು, ನಿನಗೆ ಯಾವುದರ ಸಂಗವೂ ಇಲ್ಲ   ಹೀಗಿರುವಾಗ ಏನನ್ನು ತಾನೇ ತ್ಯಜಿಸಲು ಇಚ್ಛಿಸುವೆ? ನೀನು ಶರೀರ-ಮನ-ಅಹಂಕಾರಗಳ ಮೋಹವನ್ನು ನಾಶವಾಗಿಸಿ ಲಯವನ್ನು, ಮುಕ್ತಿಯನ್ನು ಹೊಂದು ಉದೇತಿ ಭವತೋ ವಿಶ್ವಂ ವಾರಿಧೇರಿವ ಬುದ್ಬುದಃ . ಇತಿ ಜ್ಞಾತ್ವೈಕಮಾತ್ಮಾನಮೇವಮೇವ ಲಯಂ ವ್ರಜ .. 5-2.. ಸಾಗರದಿಂದ ಅಲೆಗಳು ಉದಯಿಸಿದಂತೆ, ಈ ವಿಶ್ವವೆಲ್ಲ ನಿನ್ನಿಂದಲೇ ಉದ್ಭವವಾಗುತ್ತದೆ. ಇದನ್ನು ತಿಳಿದು, ನೀನೇ ಆತ್ಮನೆಂದು ತಿಳಿದು, ಲಯವನ್ನು (ಮೋಕ್ಷವನ್ನು) ಹೊಂದು. ಪ್ರತ್ಯಕ್ಷಮಪ್ಯವಸ್ತುತ್ವಾದ್ ವಿಶ್ವಂ ನಾಸ್ತ್ಯಮಲೇ ತ್ವಯಿ . ರಜ್ಜುಸರ್ಪ ಇವ ವ್ಯಕ್ತಮೇವಮೇವ ಲಯಂ ವ್ರಜ .. 5-3.. ಹಗ್ಗ ಸರ್ಪದಂತೆ ಕಾಣುವಂತೆ, ಪ್ರತ್ಯಕ್ಷವೆನಿಸಿದರೂ ಅವಸ್ತುವಾದದ್ದರಿಂದ (ಮಿಥ್ಯೆಯಾದದ್ದರಿಂದ) ಈ ವಿಶ್ವವು ಅಮಲನಾದ(ಶುದ್ಧನಾದ) ನಿನ್ನೊಳಗೆ ಇಲ್ಲ. ಇದನ್ನು ಅರಿತು ಲಯವನ್ನು ಹೊಂದು. ಸಮದುಃಖಸುಖಃ ಪೂರ್ಣ ಆಶಾನೈರಾಶ್ಯಯೋಃ ಸಮಃ . ಸಮಜೀವಿತಮೃತ್ಯುಃ ಸನ್ನೇವಮೇವ ಲಯಂ ವ್ರಜ .. 5-4.. ನೀನಗೆ ಸುಖ-ದುಃಖಗಳು ಸಮಾನ. ಆಶಾ-ನಿರಾಶೆಗಳು ಸಮಾನ. ಜೀವನ-ಮೃತ್ಯುಗಳು ಸಮಾನ. ಈ ರೀತಿಯವನಾಗಿರುವ ನೀನು ಆತ್ಮದಲ್ಲಿ ಲಯವನ್ನು ಹೊಂದು....