Skip to main content

ಅಷ್ಟಾವಕ್ರಗೀತಾ - ೨


ಆತ್ಮಸಾಕ್ಷಾತ್ಕಾರದ ಆನಂದ

ಅಷ್ಟಾವಕ್ರನಿಂದ ಆತ್ಮಜ್ಞಾನ ಪಡೆದ ಜನಕನು ತನ್ನ ಹರ್ಷವನ್ನು ಈ ಕೆಳಗಿನ ಸಾಲುಗಳಲ್ಲಿ ವ್ಯಕ್ತಪಡಿಸುತ್ತಾನೆ. 
ಜನಕ ಉವಾಚ ..
ಅಹೋ ನಿರಂಜನಃ ಶಾಂತೋ ಬೋಧೋಽಹಂ ಪ್ರಕೃತೇಃ ಪರಃ .
ಏತಾವಂತಮಹಂ ಕಾಲಂ ಮೋಹೇನೈವ ವಿಡಂಬಿತಃ .. 2-1..

ಶಬ್ದಾರ್ಥ: 

ಅಹೋ=ಓಹೋ   ನಿರಂಜನ=ನಿರ್ವಿಕಾರಿ   ಶಾಂತಃ=ಶಾಂತನು  ಬೋಧಃ+ಅಹಂ=ಪ್ರಜ್ಞೆ ನಾನು  ಪ್ರಕೃತೇಃ=ಪ್ರಕೃತಿಗಿಂತ  ಪರಃ=ಆಚೆ   ಏತಾವಂತಂ=ಇಷ್ಟು ಬಹಳ ಅಹಂ=ನಾನು ಕಾಲಂ=ಕಾಲ  ಮೋಹೇನ+ಏವ=ಮೋಹದಿಂದಲೇ  ವಿಡಂಬಿತಃ=ಮೋಸ ಹೋಗಿದ್ದೆ 
ಅನುವಾದ:
ಅಹೋ, ನಾನು ನಿಷ್ಕಳಂಕ, ಶಾಂತ ಮತ್ತು ಈ ಪ್ರಕೃತಿಯನ್ನು ಮೀರಿದ ಜ್ಞಾನವಾಗಿರುವೆ. (ಇದನ್ನು ತಿಳಿಯದೆ) ಇಷ್ಟು ದಿನ ಭ್ರಮೆಯಿಂದ ಮೋಸ ಹೋಗಿದ್ದೆ.

ಯಥಾ ಪ್ರಕಾಶಯಾಮ್ಯೇಕೋ ದೇಹಮೇನಂ ತಥಾ ಜಗತ್ .
ಅತೋ ಮಮ ಜಗತ್ಸರ್ವಮಥವಾ ನ ಚ ಕಿಂಚನ .. 2-2..

ಶಬ್ದಾರ್ಥ:
ಯಥಾ=ಹೇಗೆ ಪ್ರಕಾಶಯಾಮಿ+ಏಕಃ=ಒಬ್ಬನೇ ಪ್ರಕಾಶಿಸುತ್ತೇನೆ  ದೇಹಮ್+ಏನಂ=ಈ ದೇಹಮ್  ತಥಾ=ಹಾಗೇ ಜಗತ್=ಜಗತ್ತನ್ನು ಅತಃ=ಹಾಗಾಗಿ ಮಮ=ನನ್ನ ಜಗತ್+ಸರ್ವಂ=ಇಡೀ ಜಗತ್ತು  =ಅಲ್ಲ  =ಹಾಗೂ ಕಿಂಚನ=ಯಾವದೂ ಅಲ್ಲ

ಅನುವಾದ:
ಹೇಗೆ ನಾನು ಈ ಶರೀರವನ್ನು ಪ್ರಕಾಶಿಸುತ್ತೇನೋ - ಹಾಗೆಯೆ ನಾನು ಈ ಜಗತ್ತನ್ನೂ ಪ್ರಕಾಶಿಸುತ್ತೇನೆ. ಹಾಗಾಗಿ ಈ ಜಗತ್ತೆಲ್ಲ ನನ್ನದು. ಅಥವಾ ಯಾವುದೂ ನನ್ನದಲ್ಲ. (ಬೆಳಕಿಲ್ಲದೇ ಜಡ ಶರೀರ ಕಾಣಲಾರದು. ನಾನು ಶರೀರಕ್ಕೆ ಬೆಳಕು ನೀಡಿ ಅದನ್ನು ಪ್ರಕಟಿಸುವವನು).

ಸಶರೀರಮಹೋ ವಿಶ್ವಂ ಪರಿತ್ಯಜ್ಯ ಮಯಾಧುನಾ .
ಕುತಶ್ಚಿತ್ ಕೌಶಲಾದ್ ಏವ ಪರಮಾತ್ಮಾ ವಿಲೋಕ್ಯತೇ .. 2-3..

ಶಬ್ದಾರ್ಥ:
ಸಶರೀರಂ=ಶರೀರ ಸಹಿತವಾಗಿ  ಅಹೋ=ಓಹೋ   ವಿಶ್ವಂ=ವಿಶ್ವವನ್ನು   ಪರಿತ್ಯಜ್ಯ=ತ್ಯಜಿಸಿ   ಮಯಾ=ನನ್ನಿಂದ   ಅಧುನಾ=ಈಗಲೇ  ಕುತಶ್ಚಿತ್=ಯಾವುದೋ  ಕೌಶಲಾತ್ ಏವ= ಕೌಶಲ್ಯದಿಂದಲೇ   ಪರಮಾತ್ಮಾ=ಪರಮಾತ್ಮನು  ವಿಲೋಕ್ಯತೇ=ಕಾಣುತ್ತಾನೆ - ಸಾಕ್ಷಾತ್ಕಾರವಾಗುತ್ತಾನೆ

ಅನುವಾದ:
ಈಗಲೇ ಈ ಶರೀರವನ್ನು ಹಾಗು ವಿಶ್ವವನ್ನು ಪರಿತ್ಯಜಿಸಿ, ಹೇಗೋ ಕೌಶಲ್ಯದಿಂದ ಪರಮಾತ್ಮನನ್ನು ಕಲ್ಪಿಸಿಕೊಳ್ಳುತ್ತೇನೆ. (ಪರಮಾತ್ಮನ ರೂಪವನ್ನು ಅರಿಯುತ್ತೇನೆ.)

ಯಥಾ ನ ತೋಯತೋ ಭಿನ್ನಾಸ್ತರಂಗಾಃ ಫೇನಬುದ್ಬುದಾಃ .
ಆತ್ಮನೋ ನ ತಥಾ ಭಿನ್ನಂ ವಿಶ್ವಮಾತ್ಮವಿನಿರ್ಗತಂ .. 2-4..

ಶಬ್ದಾರ್ಥ:

ಯಥಾ=ಹೇಗೇ  =ಅಲ್ಲ  ತೋಯತಃ=ನೀರಿಗಿಂತ  ಭಿನ್ನಃ+ತರಂಗಾ=ಬೇರೆ+ ಅಲೆಗಳು   ಫೇನ=ನೊರೆ ಬುದ್ಬುದಾಃ=ಗುಳ್ಳೆಗಳು   ಆತ್ಮನೋ=ಆತ್ಮದಿಂದ  =ಅಲ್ಲ  ತಥಾ=ಹಾಗೆಯೇ  ಭಿನ್ನಂ=ಬೇರೆ  ವಿಶ್ವಮ್+ಆತ್ಮವಿನಿರ್ಗತಂ=ವಿಶ್ವವು+ಆತ್ಮದಿಂದ ಬಂದ

ಅನುವಾದ:
ಹೇಗೆ ಅಲೆ, ನೊರೆ, ನೀರಿನ ಗುಳ್ಳೆ ಇವೆಲ್ಲವೂ ನೀರಿಗಿಂತ ಬೇರೆಯಲ್ಲವೋ (ನೀರಿಂದಲೇ ಅದ ಇವೆಲ್ಲ), ಹಾಗೆಯೇ ಆತ್ಮದಿಂದಲೇ ಉತ್ಪನ್ನವಾದ ಈ ವಿಶ್ವವು ಆತ್ಮದಿಂದ ಭಿನ್ನವಲ್ಲ. 

ವಿವರಣೆ:

ಅಲೆ, ನೊರೆ, ನೀರಿನ ಗುಳ್ಳೆ ಇವೆಲ್ಲವೂ ನೀರಿನಿಂದಲೇ ಆಗಿವೆ. ನೀರಿನಲ್ಲೇ ಕರಗುತ್ತವೆ. ಹಾಗೆಯೇ, ಆತ್ಮದಿಂದ ಈ ವಿಶ್ವ ಮಾಡಲ್ಪಟ್ಟಿದೆ. ಹಾಗಾಗಿ ವಿಶ್ವವು ಆತ್ಮವೇ ಹೊರತು ಬೇರೇ ಏನೂ ಅಲ್ಲ.

ತಂತುಮಾತ್ರೋ ಭವೇದ್ ಏವ ಪಟೋ ಯದ್ವದ್ ವಿಚಾರಿತಃ .
ಆತ್ಮತನ್ಮಾತ್ರಮೇವೇದಂ ತದ್ವದ್ ವಿಶ್ವಂ ವಿಚಾರಿತಂ .. 2-5..

ಶಬ್ದಾರ್ಥ:

ತಂತು=ದಾರ,ನೂಲು ಮಾತ್ರಃ=ಮಾತ್ರ ಭವೇದ್=ಆಗುತ್ತದೆ ಪಟಃ=ಬಟ್ಟೆ ಯದ್ವತ್=ಹೇಗೆ  ವಿಚಾರಿತಃ=ವಿಚಾರಿಸಿ ನೋಡಿದರೆ  ಆತ್ಮ=ಆತ್ಮ  ತನ್ಮಾತ್ರ=ಕೇವಲ ಅದೇ  ಏವ+ಇದಂ=ಕೇವಲ ಇದು   ತದ್ವತ್=ಹಾಗೇ  ವಿಶ್ವಂ=ವಿಶ್ವವು
ಅನುವಾದ:

(ಇನ್ನೊಂದು ಉದಾಹರಣೆ) ನಾವು ಪರಿಶೀಲಿಸಿ ನೋಡಿದಾಗ, ಬಟ್ಟೆಯು ನೂಲಲ್ಲದೆ ಇನ್ನೇನೂ ಅಲ್ಲ. ಅದೇ ರೀತಿ ವಿಚಾರ ಮಾಡಿ ನೋಡಿದಾಗ ಈ ವಿಶ್ವವು ಆತ್ಮವಲ್ಲದೆ ಬೇರೇನೂ ಅಲ್ಲ.

ಯಥೈವೇಕ್ಷುರಸೇ ಕ್ಲೃಪ್ತಾ ತೇನ ವ್ಯಾಪ್ತೈವ ಶರ್ಕರಾ .
ತಥಾ ವಿಶ್ವಂ ಮಯಿ ಕ್ಲೃಪ್ತಂ ಮಯಾ ವ್ಯಾಪ್ತಂ ನಿರಂತರಂ .. 2-6..

ಶಬ್ದಾರ್ಥ: 

ಯಥಾ=ಹೇಗೆ ಏವ=ಹಾಗೆ ಇಕ್ಷುರಸೇ=ಕಬ್ಬಿನಹಾಲಿನಿಂದ   ಕ್ಲೃಪ್ತಾ=ತಯಾರಾದ  ತೇನ=ಅದರಿಂದ   ವ್ಯಾಪ್ತ+ಏವ=ವ್ಯಾಪಿಸಿಕೊಂಡ   ಶರ್ಕರಾ=ಸಕ್ಕರೆ  ತಥಾ=ಹಾಗೆಯೇ  ವಿಶ್ವಂ=ವಿಶ್ವವು  ಮಯಿ=ನನ್ನಲ್ಲಿ  ಕ್ಲೃಪ್ತಂ=ತಯಾರಾಗಿದೆ  ಮಯಾ=ನನ್ನಿಂದ  ವ್ಯಾಪ್ತಂ=ವ್ಯಾಪಿಸಿಕೊಂಡಿದೆ   ನಿರಂತರಂ=ನಿರಂತರವಾಗಿ
ಅನುವಾದ:
ಹೇಗೆ ಕಬ್ಬಿನಿಂದ ತಯಾರಾದ ಸಕ್ಕರೆಯು ಕಬ್ಬಿನಲ್ಲಿ ವ್ಯಾಪಿಸಿಕೊಂಡಿರುತ್ತದೆಯೋ, ಅದೇ ರೀತಿ ನನ್ನಿಂದ ಮಾಡಲ್ಪಟ್ಟ ವಿಶ್ವ ನನ್ನಿಂದಲೇ ವ್ಯಾಪಿಸಿಕೊಂಡಿದೆ.

 ಆತ್ಮಾಜ್ಞಾನಾಜ್ಜಗದ್ ಭಾತಿ ಆತ್ಮಜ್ಞಾನಾನ್ನ ಭಾಸತೇ .
ರಜ್ಜ್ವಜ್ಞಾನಾದಹಿರ್ಭಾತಿ ತತ್ ಜ್ಞಾನಾದ್ ಭಾಸತೇ ನ ಹಿ .. 2-7..

ಶಬ್ದಾರ್ಥ:
ಆತ್ಮ+ಅಜ್ಞಾನಾತ್=ಆತ್ಮದ ಕುರಿತು ತಿಳಿಯದೇ ಇರುವದರಿಂದ  ಜಗತ್=ವಿಶ್ವ  ಭಾತಿ=ತೋರಿಬರುತ್ತದೆ  ಆತ್ಮ ಜ್ಞಾನಾತ್+ ಭಾಸತೇ=ಆತ್ಮ ಜ್ಞಾನದಿಂದ  ಕಾಣಿಸುವದಿಲ್ಲ  ರಜ್ಜು+ಅಜ್ಞಾನಾತ್=ಹಗ್ಗ ಎಂಬ ಅಜ್ಞಾನದಿಂದ ಅಹಿಃ+ಭಾತಿ=ಸರ್ಪ ಕಾಣಿಸುತ್ತದೆ ತತ್=ಅದರ ಜ್ಞಾನಾತ್=ಜ್ಞಾನದಿಂದ ಭಾಸತೇ=ಕಾಣಿಸುವದಿಲ್ಲ
ನಿಜದ ಅಜ್ಞಾನದಿಂದ ಹಗ್ಗವೂ ಹಾವಾಗಿ ಕಾಣುತ್ತದೆ. ಅದು ಹಗ್ಗ ಎಂದು ನಮಗೆ ತಿಳಿದಾಗಿ ಹಾವು ಮಾಯವಾಗಿ ಬಿಡುತ್ತದೆ. ಅದೇ ರೀತಿಯಲ್ಲಿ ಆತ್ಮದ ಬಗ್ಗೆ ಇರುವ ನಮ್ಮ ಅಜ್ಞಾನದಿಂದ ಜಗತ್ತು ಕಾಣಿಸುತ್ತದೆ. ಆತ್ಮ ಜ್ಞಾನ ಪ್ರಾಪ್ತಿಯಾದಾಗ ಜಗತ್ತು ಮಾಯವಾಗುತ್ತದೆ.
ಪ್ರಕಾಶೋ ಮೇ ನಿಜಂ ರೂಪಂ ನಾತಿರಿಕ್ತೋಽಸ್ಮ್ಯಹಂ ತತಃ .
ಯದಾ ಪ್ರಕಾಶತೇ ವಿಶ್ವಂ ತದಾಹಂ ಭಾಸ ಏವ ಹಿ .. 2-8..

ಶಬ್ದಾರ್ಥ:

ಪ್ರಕಾಶಃ=ಬೆಳಕು ಮೇ=ನನ್ನ ನಿಜಂ=ನಿಜವಾದ ರೂಪಂ=ರೂಪ +ಅತಿರಿಕ್ತಃ+ಅಸ್ಮಿ+ಅಹಂ=ನಾನು ಬೇರೇನೂ ಅಲ್ಲ  ತತಃ=ಅದರಿಂದ  ಯದಾ=ಯಾವಾಗ ಪ್ರಕಾಶತೇ=ಬೆಳಗುತ್ತದೆ  ವಿಶ್ವಂ=ವಿಶ್ವವು ತದಾ+ಅಹಂ=ಆಗ+ನಾನು  ಭಾಸಃ=ಬೆಳಕು ಏವ ಹಿ=ಅದೇ 
ಅನುವಾದ:
ಪ್ರಕಾಶವೇ ನನ್ನ (ಆತ್ಮದ) ನಿಜ ಸ್ವರೂಪ. ನಾನು (ಆತ್ಮ) ಪ್ರಕಾಶಕ್ಕಿಂತ ಭಿನ್ನವಲ್ಲ. ವಿಶ್ವವು ಪ್ರಕಾಶಿಸುತ್ತಿರುವಾಗ ಅದು - ಆ ಬೆಳಕು ನಾನೇ (ಆತ್ಮವೇ). 

ವಿವರಣೆ:

ಬೆಳಕು ನಮ್ಮ ಕಣ್ಣಿಗೆ ಸುತ್ತ ಮುತ್ತ ಇರುವದೆಲ್ಲವನ್ನು ತೋರಿಸುವಂತೆ ನಮ್ಮ ಪ್ರಜ್ಞೆ ಕೂಡ ನಮಗೆ ಸುತ್ತ ಮುತ್ತಲಿರುವದನ್ನೆಲ್ಲವನ್ನೂ ಪ್ರಚುರಪಡಿಸುತ್ತದೆ. ಹಾಗೆ ನೋಡಿದಾಗ ನಮ್ಮ ಪ್ರಜ್ಞೆ - ನಮ್ಮ ಆತ್ಮ ಬೆಳಕಿನಂತೆ - ಎಲ್ಲವನ್ನೂ ಬೆಳಗುತ್ತದೆ.  

ಅಹೋ ವಿಕಲ್ಪಿತಂ ವಿಶ್ವಮಜ್ಞಾನಾನ್ಮಯಿ ಭಾಸತೇ .
ರೂಪ್ಯಂ ಶುಕ್ತೌ ಫಣೀ ರಜ್ಜೌ ವಾರಿ ಸೂರ್ಯಕರೇ ಯಥಾ .. 2-9..

ಶಬ್ದಾರ್ಥ:

ಅಹೋ=ಓಹೋ  ವಿಕಲ್ಪಿತಂ=ಕಲ್ಪಿತವಾದ ವಿಶ್ವಂ=ವಿಶ್ವವು ಅಜ್ಞಾನಾತ್=ಅಜ್ಞಾನದಿಂದ ಮಯಿ=ನನ್ನಲ್ಲಿ  ಭಾಸತೇ=ತೋರುತ್ತದೆ   ಶುಕ್ತೌ=ಚಿಪ್ಪಿನಲ್ಲಿ    ರೂಪ್ಯಂ=ಮುತ್ತು  ಫಣಿ=ಹಾವು ರಜ್ಜೌ=ಹಗ್ಗದಲ್ಲಿ  ವಾರಿ=ನೀರು  ಸೂರ್ಯಕರೇ=ಸೂರ್ಯಕಿರಣದಲ್ಲಿ  ಯಥಾ=ಹೇಗೆ
ಅನುವಾದ:
ಅಜ್ಞಾನದಿಂದ ಹಗ್ಗ ಹಾವಾಗಿ, ಮರೀಚಿಕೆಯು ನೀರಾಗಿ, ಚಿಪ್ಪು ಬೆಳ್ಳಿಯಾಗಿ ಕಾಣುವಂತೆ, ಅಜ್ಞಾನದಿಂದ ವಿಶ್ವವು ನನ್ನಲ್ಲಿ ಕಲ್ಪಿತವಾಗಿದೆ.

ಮತ್ತೋ ವಿನಿರ್ಗತಂ ವಿಶ್ವಂ ಮಯ್ಯೇವ ಲಯಮೇಷ್ಯತಿ .
ಮೃದಿ ಕುಂಭೋ ಜಲೇ ವೀಚಿಃ ಕನಕೇ ಕಟಕಂ ಯಥಾ .. 2-10..

ಶಬ್ದಾರ್ಥ:

ಮತ್ತಃ=ನನ್ನಿಂದ  ವಿನಿರ್ಗತಃ=ಹೊರಹೊಮ್ಮಿದ  ವಿಶ್ವಂ=ವಿಶ್ವವು  ಮಯಿ+ಏವ=ನನ್ನಲ್ಲೇ ಲಯಂ+ಏಷ್ಯತಿ=ಲಯವಾಗುತ್ತದೆ ಮೃದಿ=ಮಣ್ಣಿನಲ್ಲಿ  ಕುಂಭಃ=ಮಡಿಕೆ  ಜಲೇ=ನೀರಿನಲ್ಲಿ  ವೀಚಿ=ಅಲೆ   ಕನಕೇ=ಚಿನ್ನದಲ್ಲಿ ಕಟಕಂ=ಬಳೆ ಯಥಾ=ಹೇಗೆ

ಅನುವಾದ:
ಮಡಿಕೆಯು ಮಣ್ಣಲ್ಲಿ, ಅಲೆಯು ನೀರಿನಲ್ಲಿ, ಬಳೆಯು ಸ್ವರ್ಣದಲ್ಲಿ ಲಯವಾಗುವಂತೆ, ನನ್ನಿಂದ ಉತ್ಪನ್ನವಾದ ಈ ವಿಶ್ವವು ನನ್ನಲ್ಲೇ ಲೀನವಾಗುತ್ತದೆ. 

ವಿವರಣೆ

ಮಣ್ಣಿಂದ ತಯಾರಾದ ಮಡಿಕೆ ಮಣ್ಣಲ್ಲೇ ಲೀನವಾಗುತ್ತದೆ. ನೀರಿನಿಂದ ಏಳುವ ಅಲೆ ನೀರಿನಲ್ಲೇ ಅಡಗುತ್ತದೆ. ಚಿನ್ನದಿಂದ ಮಾಡಿದ ಬಳೆ ಕರಗಿಸಿದರೆ ಚಿನ್ನವೇ ಆಗತ್ತದೆ. 

 ನಮ್ಮ ಕಣ್ಣು ನೋಡಿ, ಕಿವಿ ಕೇಳಿ, ಮೂಗು ವಾಸನೆ ನೋಡಿ ಬುದ್ಧಿ ಇವೆಲ್ಲವುಗಳನ್ನು ಮೊತ್ತವಾಗಿ ನಮ್ಮ ಸುತ್ತಲಿನ ಪರಿಸರದ ಒಂದು ಚಿತ್ರ ತಯಾರಿಸುತ್ತದೆ. ನಾವು ಇನ್ನೊಂದು ಜಾಗಕ್ಕೆ ಹೋದರೆ, ಹಳೆಯ ಚಿತ್ರವನ್ನು ಅಳಿಸಿ ನಮ್ಮ ಬುದ್ಧಿ ಇಂದ್ರಿಯಗಳ ಸಹಾಯದಿಂದ ಇನ್ನೊಂದು ಚಿತ್ರ ತಯಾರಿಸುತ್ತದೆ. ಇವೆರಡೂ ಚಿತ್ರಗಳು ನಮ್ಮಿಂದಲೇ ಸೃಷ್ಟಿಯಾಗಿವೆ, ನಮ್ಮಿಂದಲೇ ಅಳಿಸಲ್ಪಟ್ಟಿವೆ, ಅಲ್ಲವೇ. ಹಾಗಾಗಿ ಈ ವಿಶ್ವ ನನ್ನ ಸೃಷ್ಟಿ, ನನ್ನಿಂದಲೇೆ ಲಯವಾಗುತ್ತದೆ.

ಅಹೋ ಅಹಂ ನಮೋ ಮಹ್ಯಂ ವಿನಾಶೋ ಯಸ್ಯ ನಾಸ್ತಿ ಮೇ .
ಬ್ರಹ್ಮಾದಿಸ್ತಂಬಪರ್ಯಂತಂ ಜಗನ್ನಾಶೋಽಪಿ ತಿಷ್ಠತಃ .. 2-11..

ಶಬ್ದಾರ್ಥ:

ಅಹೋ=ಓಹೋ  ಅಹಂ=ನಾನು ನಮೋ=ನಮಿಸುತ್ತೇನೆ  ಮಹ್ಯಂ=ನನಗೆ  ವಿನಾಶಃ=ವಿನಾಶ ಯಸ್ಯ=ಯಾರಿಗೆ +ಅಸ್ತಿ=ಇರುವದಿಲ್ಲ ಮೇ=ನನಗೆ   ಬ್ರಹ್ಮಾದಿಸ್ತಂಬಪರ್ಯಂತಂ=ಬ್ರಹ್ಮನಿಂದ ಗಿಡದ ಪೊದೆಯ ತನಕ   ಜಗತ್+ನಾಶಃ+ಅಪಿ=ಜಗತ್ತು ನಾಶವಾದರೂ ಸಹ  ತಿಷ್ಠತಃ=ಇರುತ್ತೇನೆ

ಅಹೋ, ವಿನಾಶವಿಲ್ಲದ ನನಗೆ ನಮಿಸುತ್ತೇನೆ. ಬ್ರಹ್ಮನಿಂದ ಆರಂಭವಾಗಿ ತೃಣಕಾಷ್ಠದವರೆಗೆ ಎಲ್ಲವು ನಾಶವಾದರೂ ನಾನು (ಆತ್ಮ) ನಾಶವಾಗದೇ ಇರುತ್ತೇನೆ. 

ವಿವರಣೆ:

ಆತ್ಮಕ್ಕೆ ಹುಟ್ಟು ಸಾವುಗಳಿಲ್ಲ. ಆ ಶರೀರ ನಾಶವಾದ ಮೇಲೆ ಆತ್ಮ ಇನ್ನೊಂದು ಶರೀರದಲ್ಲಿ ವಾಸವಾಗುತ್ತದೆ. ನಂತರ ಇನ್ನೊಂದು. ಹಾಗಾಗಿ ಆತ್ಮ ಅವಿನಾಶಿ. 

ಅಹೋ ಅಹಂ ನಮೋ ಮಹ್ಯಮೇಕೋಽಹಂ ದೇಹವಾನಪಿ .
ಕ್ವಚಿನ್ನ ಗಂತಾ ನಾಗಂತಾ ವ್ಯಾಪ್ಯ ವಿಶ್ವಮವಸ್ಥಿತಃ .. 2-12..

ಶಬ್ದಾರ್ಥ:

ಅಹೋ=ಓಹೋ  ಅಹಂ=ನಾನು   ನಮೋ=ನಮಿಸುತ್ತೇನೆ  ಮಹ್ಯಂ+ಏಕಃ+ಅಹಂ=ನನಗೇ ಏಕನು ನಾನು ದೇಹವಾನ್+ಅಪಿ = ದೇಹ ಹೊಂದಿದವನಾದರೂ  ಕ್ವಚಿತ್+=ಎಲ್ಲಿಯೂ+ಅಲ್ಲ  ಗಂತಾ=ಹೋಗಿ ಆಗಂತಾ=ಬಂದು   ವ್ಯಾಪ್ಯ=ವ್ಯಾಪಿಸಿ  ವಿಶ್ವಂ=ವಿಶ್ವವನ್ನು  ಅವಸ್ಥಿತಃ=ನೆಲೆಸಿದ್ದೇನೆ

ಅನುವಾದ:

ಅಹೋ, ನನಗೆ ನಾನು ವಂದಿಸುತ್ತೇನೆ. ಏಕನಾದ ನಾನು, ದೇಹ ಹೊಂದಿದವನಾದರೂ, ಎಲ್ಲೂ ಹೋಗದೇ, ಎಲ್ಲೂ ಬಾರದೇ, ವಿಶ್ವನ್ನೆಲ್ಲ ವ್ಯಾಪಿಸಿ, ಎಲ್ಲೆಲ್ಲೂ ವಾಸಿಸುತ್ತೇನೆ.  

ವಿವರಣೆ:

ಶರೀರ, ಮನ, ಬುದ್ಧಿಗಳು ಒಂದು ಸ್ಥಳದಿಂದ ಇನ್ನೊಂದೆಡೆಗೆ ಹೋಗುತ್ತವೆ. ಆದರೆ ಆತ್ಮ ಸ್ಥಿರ - ಅದು ಎಲ್ಲೂ ಹೋಗುವದಿಲ್ಲ, ಬರುವದೂ ಇಲ್ಲ. 

ಆತ್ಮ ಪರಮಾತ್ಮರು ಬೇರೆಯಲ್ಲ. ಅದಕ್ಕಾಗಿ ಆತ್ಮವೂ ಸಹ ವಿಶ್ವ ವ್ಯಾಪಿ. ಎಲ್ಲೆಡೆಗೆ ಆವರಿಸಿಕೊಂಡಿದೆ.

ಅಹೋ ಅಹಂ ನಮೋ ಮಹ್ಯಂ ದಕ್ಷೋ ನಾಸ್ತೀಹ ಮತ್ಸಮಃ .
ಅಸಂಸ್ಪೃಶ್ಯ ಶರೀರೇಣ ಯೇನ ವಿಶ್ವಂ ಚಿರಂ ಧೃತಂ .. 2-13..

ಶಬ್ದಾರ್ಥ:

ದಕ್ಷಃ=ದಕ್ಷ, ನಿಪುಣ +ಅಸ್ತಿ+ಇಹ=ಇಲ್ಲಿ(ಇಹ) ಯಾರೂ ಇಲ್ಲ(ನ ಅಸ್ತಿ)  ಮತ್+ಸಮಃ=ನನ್ನ ಸಮಾನರು  ಅಸಂಸ್ಪೃಶ್ಯ=ಸ್ಪರ್ಶಿಸದೇ   ಶರೀರೇಣ=ಶರೀರದಿಂದ  ಯೇನ=ಯಾರಿಂದ  ವಿಶ್ವಂ=ವಿಶ್ವವು ಚಿರಂ=ಚಿರಕಾಲದಿಂದ ಧೃತಂ=ಹಿಡಿಯಲ್ಪಟ್ಟದೆ 

ಅನುವಾದ:

ನಾನು ನನಗೆ ವಂದಿಸುತ್ತೇನೆ. ನನ್ನಷ್ಟು ದಕ್ಷರು ಬೇರೆ ಯಾರೂ ಇಲ್ಲ. ಶರೀರದಿಂದ ಸ್ಪರ್ಶವನ್ನೇ ಮಾಡದೇ ನಾನು ಈ ವಿಶ್ವವನ್ನೇ ಚಿರಕಾಲದಿಂದ ಹಿಡಿದುಕೊಂಡಿದ್ದೇನೆ.

ವಿವರಣೆ:

ನಾವು ಏನನ್ನಾದರೂ ಹಿಡಿಯಲು ಕೈ ಅಥವಾ ಇತರ ಶರೀರದ ಭಾಗಗಳನ್ನು ಉಪಯೋಗಿಸುತ್ತೇವೆ. ಆದರೆ ಆತ್ಮವು ಶರೀರವನ್ನೇ ಉಪಯೋಗಿಸದೆ - ಶರೀರದಿಂದ ಸ್ಪರ್ಶಿಸದೇ ಇಡೀ ವಿಶ್ವವನ್ನು ಹಿಡಿದುಕೊಂಡಿದೆ. ಅದಕ್ಕಾಗಿ ಅದರಷ್ಟು ಸಮರ್ಥರು ಇನ್ಯಾರೂ ಇಲ್ಲ. 

ಹೇಗೆ - ನಾವು ಕನಸು ಕಾಣುತ್ತೇವೆ. ಕನಸಿನಲ್ಲಿ ನಮಗೆ ಬಿದ್ದು ಗಾಯವಾದರೆ ನಾವು ಆ ಗಾಯಕ್ಕೆ ಮುಲಾಮು ಹಚ್ಚಲು ಸಾಧ್ಯವೇ, ಇಲ್ಲ! ಕನಸಿನಲ್ಲಿ ಕಾಣುವದೆಲ್ಲ ನಮ್ಮ ಸ್ಪರ್ಶಕ್ಕೆ ಸಿಗುವದಿಲ್ಲ. ಹಾಗೆಯೇ ಈ ವಿಶ್ವವನ್ನೂ ಆತ್ಮ ಸ್ಪರ್ಶಿಸದೇ ಹಿಡಿದುಕೊಂಡಿದೆ.

ಅಹೋ ಅಹಂ ನಮೋ ಮಹ್ಯಂ ಯಸ್ಯ ಮೇ ನಾಸ್ತಿ ಕಿಂಚನ .
ಅಥವಾ ಯಸ್ಯ ಮೇ ಸರ್ವಂ ಯದ್ ವಾಙ್ಮನಸಗೋಚರಂ .. 2-14..

ಶಬ್ದಾರ್ಥ:

ಯಸ್ಯ=ಯಾರ  ಮೇ=ನನ್ನ +ಆಸ್ತಿ=ಇಲ್ಲ  ಕಿಂಚನ=ಯಾವುದೂ ಅಥವಾ=ಅಥವಾ  ಸರ್ವಂ=ಎಲ್ಲವೂ  ಯತ್=ಯಾವುದು ವಾಕ್+ಮನಸ್+ಗೋಚರಂ= ಮಾತು ಹಾಗೂ ಮನಸ್ಸಿಗೆ ಕಾಣುವಂತಹದು 

ಅನುವಾದ:

ನನ್ನದು ಯಾವುದು ಅಲ್ಲ. ಅಥವಾ ವಾಕ್ ಹಾಗೂ ಮನಸ್ಸಿಗೆ ಗೋಚರಿಸುವದೆಲ್ಲವೂ ನನ್ನದೇ ಆಗಿದೆ. ಅಂತಹ ನನಗೆ ನಾನು ನಮಸ್ಕರಿಸುತ್ತೇನೆ.
ವಿವರಣೆ:

ಈ ವಿಶ್ವ ಬರೀ ಮಿಥ್ಯೆ - ಆತ್ಮದಿಂದ ಕಲ್ಪಿತವಾದ ಸುಂದರ ಸುಳ್ಳು. ಹಾಗಾಗಿ ನನ್ನದು ಏನೂ ಅಲ್ಲ. ಆದರೆ ಇನ್ನೊಂದು ವಿಧದಿಂದ ನೋಡಿದರೆ ಆತ್ಮವೇ ಕಲ್ಪಿಸಿರುವ ಈ ಜಗತ್ತು ಸಂಪೂರ್ಣವಾಗಿ ನನ್ನದೇ - ಆತ್ಮದ್ದೇ. ಮಾತಿಗೆ, ಮನಸ್ಸಿಗೆ, ದೃಷ್ಟಿಗೆ ನಿಲುಕುವ ಸರ್ವವೂ ನನ್ನದೇ. 

ಈ ಜಗವೆಲ್ಲವೂ ಆತ್ಮದ್ದೇ ಸೃಷ್ಟಿಯಾಗಿರುವಾಗ ಸರ್ವಸ್ವವೂ ಆತ್ಮದ್ದೇ ಆಗಿದೆ. ಆದರೆ ಈ ಮಾಯಾ-ಮಿಥ್ಯಾ ಜಗತ್ತು ಬರೀ ಕಲ್ಪನೆಯಾದುದರಿಂದ ಆತ್ಮದ್ದು ಇದು ಯಾವುದೂ ಅಲ್ಲ.

ಜ್ಞಾನಂ ಜ್ಞೇಯಂ ತಥಾ ಜ್ಞಾತಾ ತ್ರಿತಯಂ ನಾಸ್ತಿ ವಾಸ್ತವಂ .
ಅಜ್ಞಾನಾದ್ ಭಾತಿ ಯತ್ರೇದಂ ಸೋಽಹಮಸ್ಮಿ ನಿರಂಜನಃ .. 2-15..

ಶಬ್ದಾರ್ಥ: 

ಜ್ಞಾನಂ=ಜ್ಞಾನ    ಜ್ಞೇಯ=ತಿಳಿಯತಕ್ಕದ್ದು   ಜ್ಞಾತಾ=ತಿಳಿದವನು, ಜ್ಞಾನಿ   ತ್ರಿತಯಂ=ತ್ರಿಕೂಟ +ಅಸ್ತಿ=ಇಲ್ಲ  ವಾಸ್ತವಂ=ನಿಜವಾಗಿ   ಅಜ್ಞಾನಾತ್=ಅಜ್ಞಾನದಿಂದ  ಭಾತಿ=ಕಂಡುಬರುತ್ತದೆ  ಯತ್ರ=ಎಲ್ಲಿ +ಇದಂ=ಇದು  +ಅಹಮ್+ಅಸ್ಮಿ=ಅವನು ನಾನು ಇದ್ದೇನೆ  ನಿರಂಜನಃ=ನಿಷ್ಕಳಂಕನು 

ಅನುವಾದ: 
ವಾಸ್ತವವಾಗಿ ನೋಡಿದರೆ ಜ್ಞಾನ, ಜ್ಞೇಯ (ತಿಳಿಯಬೇಕಾದದ್ದು ) ಮತ್ತು ಜ್ಞಾನಿ ಈ ಮೂರೂ ಇಲ್ಲವೇ ಇಲ್ಲ. ಅಜ್ಞಾನದಿಂದ ನಿಷ್ಕಳಂಕನಾದ ನನ್ನಲ್ಲಿ ಈ ಮೂರೂ (ಜ್ಞಾನ, ಜ್ಞೇಯ ಮತ್ತು ಜ್ಞಾನಿ ) ಇದ್ದಂತೆ ಕಂಡು ಬರುತ್ತವೆ. 

ವಿವರಣೆ:
ನಮ್ಮ ಜ್ಞಾನ ನಮಗೆ ಜ್ಞಾನೇಂದ್ರಿಯಗಳ ಹಾಗೂ ಬುದ್ಧಿಯ ಸಹಾಯದಿಂದ ಸಿಗುತ್ತದೆ. ಆದರೆ ಅವು ಎಷ್ಟು ನಂಬಿಕೆಗೆ ಅರ್ಹ. ನಾವು ಕತ್ತಲೆಯಲ್ಲಿ ನೋಡಿದಾಗ ದೂರದಲ್ಲಿ ಒಂದು ದೆವ್ವ ನಿಂತಂತೆ ಕಾಣುತ್ತದೆ. ನಮ್ಮ ಬುದ್ಧಿ ಆ ಚಿಂತನೆಗೆ ಬೇಕಾದಷ್ಟು ಸಬಲೀಕರಣವನ್ನು ಕೊಡುತ್ತದೆ. ಆದರೆ ಬೆಳಕಾದಾಗ ನೋಡಿದರೆ ಅಲ್ಲಿ ಇರುವದು ಒಂದು ಕಂಬ ಮಾತ್ರ.
ನಾವೂ ಕೆಂಪು ಬಣ್ಣದ ಕನ್ನಡಕ ಹಾಕಿಕೊಂಡರೆ ಎದುರಿಗಿರುವ ಬಿಳೀ ಗೋಡೆ ಕೆಂಪಾಗೇ ಕಾಣಿಸುತ್ತದೆ. ನಮ್ಮ ಕನ್ನಡಕ ಮಬ್ಬಾಗಿದ್ದರೆ, ಗೀರಾಗಿದ್ದರೆ ನಮಗೆ ಕಾಣಿಸುವದೆಲ್ಲ ಮಬ್ಬು ಮಬ್ಬಾಗೇ ಕಾಣಿಸುತ್ತದೆ. ನಮ್ಮ ಜ್ಞಾನ - ಕೆಂಪು ಗೋಡೆ, ದೂರದಲ್ಲಿನ ದೆವ್ವ, ಮಬ್ಬಾದ ವಸ್ತುಗಳು ಇವೆಲ್ಲವೂ ಸುಳ್ಳು.
 
ಹೀಗೆ ನೋಡಿದಾಗ ಜ್ಞಾನ, ಜ್ಞಾನಿ, ಜ್ಞೇಯ ಎಲ್ಲವೂ ಬರೀ ಸುಳ್ಳು. ಆತ್ಮವೊಂದೇ ಸತ್ಯ.
 
ದ್ವೈತಮೂಲಮಹೋ ದುಃಖಂ ನಾನ್ಯತ್ತಸ್ಯಾಽಸ್ತಿ ಭೇಷಜಂ .
ದೃಶ್ಯಮೇತನ್ ಮೃಷಾ ಸರ್ವಮೇಕೋಽಹಂ ಚಿದ್ರಸೋಮಲಃ .. 2-16..

ಶಬ್ದಾರ್ಥ:

ದ್ವೈತ=ದೇವರು ಹಾಗೂ ಆತ್ಮ ಬೇರೆ ಬೇರೆ ಎನ್ನುವ ಸಿದ್ಧಾಂತ ಮೂಲಂ+ಅಹೋ=ಮೂಲ, ಬೇರು  ದುಃಖಂ=ದುಃಖ +ಅನ್ಯತ್+ತಸ್ಯ+ಅಸ್ತಿ =ಬೇರೆ+ ಅದರ+ ಇಲ್ಲ (ನ ಅಸ್ತಿ)   ಭೇಷಜಂ=ಪರಿಹಾರ  ದೃಶ್ಯಂ+ಏತತ್ = ಈ ದೃಶ್ಯ ಮೃಷಾ=ತಪ್ಪಾದ ಸರ್ವಂ+ಏಕಃ+ಅಹಂ=ಎಲ್ಲ+ಏಕ+ನಾನು  ಚಿತ್+ರಸಃ+ಅಮಲ=ಪ್ರಜ್ಞೆ+ಸಾರ+ಶುದ್ಧ

ಅನುವಾದ:
ಎಲ್ಲಾ ದುಃಖಕ್ಕೆ ಮೂಲ ಕಾರಣ ದ್ವೈತ. ಅದರ ಏಕೈಕ ಪರಿಹಾರವೆಂದರೆ,"ನಮಗೆ ಕಣ್ಣಿಗೆ ಕಾಣುವದೆಲ್ಲವು ಮಿಥ್ಯೆ, ನಾನೇ (ಆತ್ಮನೇ) ನಿಷ್ಕಳಂಕನು,ಅದ್ವಿತೀಯನು ಮತ್ತು ಚಿನ್ಮಾತ್ರನು" ಎಂಬ ಸತ್ಯವನ್ನು ಅರಿಯುವದು. 

ವಿವರಣೆ:

ನಾನು ಆತ್ಮವಲ್ಲ - ನಾನು ಶರೀರ ಎಂಬ ಭ್ರಮೆಯಿಂದ ಕಾಮ, ಕ್ರೋಧ ಇತ್ಯಾದಿ ಭಾವನೆಗಳು ಉಂಟಾಗುತ್ರವೆ. ನಾನು ಆತ್ಮ - ಏಕೈಕನು, ಶರೀರ, ಮನ, ಬುದ್ಧಿಗಳ ಸಾಕ್ಷಿ ಮಾತ್ರ ಎಂಬ ಜ್ಞಾನ ಉಂಟಾದಾಗ ಆಸೆ ನಾಶವಾಗುತ್ತದೆ. ಆಸೆಯೇ ಇಲ್ಲದಾದಾಗ ಯಾವ ರೀತಿಯ ದುಃಖಗಳೂ ಇರುವದಿಲ್ಲ. 

ಬೋಧಮಾತ್ರೋಽಹಮಜ್ಞಾನಾದ್ ಉಪಾಧಿಃ ಕಲ್ಪಿತೋ ಮಯಾ .
ಏವಂ ವಿಮೃಶತೋ ನಿತ್ಯಂ ನಿರ್ವಿಕಲ್ಪೇ ಸ್ಥಿತಿರ್ಮಮ .. 2-17..

ಶಬ್ದಾರ್ಥ:

ಬೋಧ+ಮಾತ್ರಃ+ಅಹಂ+ಅಜ್ಞಾನಾತ್=ಪ್ರಜ್ಞೆ+ಕೇವಲ+ನಾನು+ಅಜ್ಞಾನದಿಂದ  ಉಪಾಧಿ=ಬಿರುದು,ಉಪನಾಮ  ಕಲ್ಪತಃ=ಕಲ್ಪಿಸಲ್ಪಟ್ಟಿದೆ ಮಯಾ=ನನ್ನಿಂದ  ವಿಮೃಶತಃ=ಚಿಂತಿಸುತ್ತ ನಿತ್ಯಂ=ಸದಾ  ನಿರ್ವಿಕಲ್ಪೇ=ನಿರ್ವಿಕಲ್ಪದಲ್ಲಿ  ಸ್ಥಿತಿಃ+ಮಮ = ನನ್ನ ಸ್ಥಿತಿ

ಅನುವಾದ:
ನಾನು ಶುದ್ಧ ಜ್ಞಾನಸ್ವರೂಪನು. ಅಜ್ಞಾನದಿಂದ ನನ್ನಿಂದ ಈ ಎಲ್ಲ ಉಪಾಧಿಗಳು (ಪದವಿಗಳು) (ನಾನು ಶರೀರ, ನಾನು ಅಂತವನು ಇತ್ಯಾದಿ) ಕಲ್ಪಿತವಾಗಿವೆ. ಈ ಸತ್ಯವನ್ನು ನಿತ್ಯ ಮನನ ಮಾಡಿಕೊಳ್ಳುತ್ತ ನಾನು ನಿರ್ವಿಕಲ್ಪ ಸ್ಥಿತಿ ಅಂದರೆ ಬ್ರಹ್ಮ ಸ್ವರೂಪವನ್ನು ಹೊಂದುತ್ತೇನೆ. 

ವಿವರಣೆ:

ನಾನು ಅವನು, ಆಫೀಸಿನಲ್ಲಿ ದುಡಯುವ ಅಧಿಕಾರಿ, ಕ್ಲಾರ್ಕ್, ಇನ್ಯಾವುದೋ ಉದ್ಯೋಗಿ, ಗೃಹಿಣಿ ಇತ್ಯಾದಿ, ಇತ್ಯಾದಿ ಬಿರುದುಗಳನ್ನು ನಮಗೆ ನಾವೇ ಕೊಟ್ಟಕೊಳ್ಳುತ್ತೇವೆ. ಉದ್ಯೋಗದಿಂದ ನಿವೃತ್ತರಾದ ಮೇಲೆ ನಾವು ಇರುವದಿಲ್ಲವೇ - ಖಂಡಿತ ಇರುತ್ತೇವೆ - ಈಗ ನಾವು ಯಾರು? ಹಾಗೆಯೇ ನಾನು ಸುಂದರ ಯುವಕ, ಯುವತಿ ಎಂದು ಜಂಭ ಪಡುತ್ತೇವೆ. ಸೌಂದರ್ಯ, ಯೌವನ ನಾಶವಾದ ಮೇಲೆ ಆಕಾಶ ತಲೆಯ ಮೇಲೆ ಬಿದ್ದಂತೆ ದುಃಖಿಸುತ್ತೇವೆ. 

ಅದರ ಬದಲು ನಾನು ಸಾಕ್ಷಿ ಮಾತ್ರ - ಈ ಶರೀರ ಒಮ್ಮೆ ಸುಂದರವಾಗಿತ್ತು - ಈಗ ಜರ್ಜರಿತವಾಗಿದೆ - ಆದರೆ ನಾನು ಆತ್ಮ ನನಗೆ ಮುಪ್ಪು-ಸಾವುಗಳಿಲ್ಲ. ನಾನು ಪರಿಪೂರ್ಣ - ನನಗೆ ಬೇಕಾಗಿರುವದು ಏನೂ ಇಲ್ಲ. ಈ ಮಾತುಗಳನ್ನು ಮನನ ಮಾಡಿಕೊಂಡರೆ ಸುಖ-ದುಃಖಗಳಿಂದ ಮುಕ್ತರಾಗುತ್ತೇವೆ. 

ನ ಮೇ ಬಂಧೋಽಸ್ತಿ ಮೋಕ್ಷೋ ವಾ ಭ್ರಾಂತಿಃ ಶಾಂತಾ ನಿರಾಶ್ರಯಾ .
ಅಹೋ ಮಯಿ ಸ್ಥಿತಂ ವಿಶ್ವಂ ವಸ್ತುತೋ ನ ಮಯಿ ಸ್ಥಿತಂ .. 2-18..

ಶಬ್ದಾರ್ಥ:

=ಇಲ್ಲ ಮೇ=ನನಗೆ ಬಂಧಃ=ಬಂಧನ ಅಸ್ತಿ=ಇದೆ  ಮೋಕ್ಷಃ=ಮೋಕ್ಷ  ವಾ=ಅಥವಾ ಭ್ರಾಂತಿಃ=ಭ್ರಮೆ ಶಾಂತಃ=ಶಾಂತವಾಗಿದೆ  ನಿರಾಶ್ರಯಾ=ಆಧಾರ ಕಳೆದುಕೊಂಡು  ಅಹೋ=ಓಹೋ ಮಯಿ=ನನ್ನಲ್ಲಿ   ಸ್ಥಿತಂ=ಸ್ಥಿತವಾಗಿದೆ ವಿಶ್ವಂ=ವಿಶ್ವವು  ವಸ್ತುತಃ=ನಿಜವಾಗಿ  ನ ಮಯಿ ಸ್ಥಿತಂ=ನನ್ನಲ್ಲಿ ಸ್ಥಿತವಾಗಿಲ್ಲ 


ಅನುವಾದ:
ನನಗೆ ಬಂಧನವೂ ಇಲ್ಲ ಬಂಧನದಿಂದ ಮುಕ್ತಿಯೂ ಇಲ್ಲ. ಈ ಭ್ರಾಂತಿ ಅದರ ಆಧಾರ ಕಳೆದುಕೊಂಡು ಸ್ತಬ್ಧವಾಗಿದೆ. ಈ ವಿಶ್ವವು ನನ್ನಲ್ಲೇ ಸ್ಥಿತವಾಗಿದ್ದರೂ. ವಾಸ್ತವವಾಗಿ ನೋಡಿದರೆ ಅದು ಇಲ್ಲ. 

ಸಶರೀರಮಿದಂ ವಿಶ್ವಂ ನ ಕಿಂಚಿದಿತಿ ನಿಶ್ಚಿತಂ .
ಶುದ್ಧಚಿನ್ಮಾತ್ರ ಆತ್ಮಾ ಚ ತತ್ಕಸ್ಮಿನ್ ಕಲ್ಪನಾಧುನಾ .. 2-19..

ಶಬ್ದಾರ್ಥ:

ಸಶರೀರಂ=ಶರೀರ ಸಹಿತವಾಗಿ   ಇದಂ=ಇದು   ವಿಶ್ವಂ=ವಿಶ್ವವು  =ಇಲ್ಲ  ಕಿಂಚಿತ್=ಸ್ವಲ್ಪವೂ  ಇತಿ=ಇದು ನಿಶ್ಚಿತಂ=ನಿಶ್ಚಯವಾಗಿ  ಶುದ್ಧಚಿನ್ಮಾತ್ರ=ಶುದ್ಧ ಪ್ರಜ್ಞೆ ಮಾತ್ರ  ಆತ್ಮಃ=ಆತ್ಮ  =ಹಾಗೂ ತತ್=ಅದು ಕಸ್ಮಿನ್=ಯಾವ ಕಲ್ಪನಾ=ಕಲ್ಪನೆ ಅಧುನಾ=ಈಗ 

ಅನುವಾದ:
ಈ ಶರೀರ, ಈ ವಿಶ್ವ ಇವೆಲ್ಲ ಏನೂ ಅಲ್ಲ - ಬರಿ ಮಿಥ್ಯೆ. ಈ ಆತ್ಮವು ಶುದ್ಧ ಚಿತ್ಸ್ವರೂಪವೆಂದು ಅರಿತಾದ ಮೇಲೆ, ಇನ್ನು ಬೇರೆ ವಿಶ್ವದ ಕಲ್ಪನೆ ಎಲ್ಲಿ ತಾನೇ ಇರುತ್ತದೆ? 

ಶರೀರಂ ಸ್ವರ್ಗನರಕೌ ಬಂಧಮೋಕ್ಷೌ ಭಯಂ ತಥಾ .
ಕಲ್ಪನಾಮಾತ್ರಮೇವೈತತ್ ಕಿಂ ಮೇ ಕಾರ್ಯಂ ಚಿದಾತ್ಮನಃ .. 2-20..

ಶಬ್ದಾರ್ಥ:

ಶರೀರಂ=ಶರೀರ ಸ್ವರ್ಗನರಕಃ=ಸ್ವರ್ಗನರಕಗಳು  ಬಂಧಮೋಕ್ಷಃ=ಬಂಧನ ಹಾಗೂ ಮುಕ್ತಿಗಳು ತಥಾ=ಹಾಗೇ ಕಲ್ಪನಾಮಾತ್ರಂ=ಕೇವಲ ಕಲ್ಪನೆ ಏವಂ=ಕೇವಲ ಏತತ್=ಇದು ಮೇ=ನನ್ನ ಕಿಂ=ಯಾವ ಕಾರ್ಯಂ=ಕೆಲಸ ಚಿದಾತ್ಮನಃ=ಚಿದಾತ್ಮನ

ಅನುವಾದ:
ಶರೀರ, ಸ್ವರ್ಗ, ನರಕ, ಬಂಧನ, ಮೋಕ್ಷ, ಭಯ ಇವೆಲ್ಲವೂ ಬರಿ ಕಲ್ಪನೆಗಳೇ ಹೊರತು ಇನ್ನೇನೂ ಅಲ್ಲ. ನನ್ನ ನಿಜ ಸ್ವರೂಪವೇ ಚಿದಾತ್ಮವಾದಾಗ, ಇವೆಲ್ಲದಕ್ಕೂ ನನಗೂ ಏನು ಸಂಬಂಧ?

ಅಹೋ ಜನಸಮೂಹೇಽಪಿ ನ ದ್ವೈತಂ ಪಶ್ಯತೋ ಮಮ .
ಅರಣ್ಯಮಿವ ಸಂವೃತ್ತಂ ಕ್ವ ರತಿಂ ಕರವಾಣ್ಯಹಂ .. 2-21..

ಶಬ್ದಾರ್ಥ:

ಅಹೋ=ಓಹ್ ಜನಸಮೂಹೇ=ಜನಸಮೂಹದಲ್ಲಿ ಅಪಿ=ಸಹ,ಕೂಡ  =ಅಲ್ಲ ದ್ವೈತಂ=ದ್ವೈತವನ್ನು ಪಶ್ಯತಃ=ನೋಡವ ಮಮ=ನನ್ನ   ಅರಣ್ಯಂ=ಕಾಡು ಇವ=ಹಾಗೆ ಸಂವೃತ್ತಂ=ಆಗಿದೆ ಕ್ವ=ಎಲ್ಲಿ  ರತಿಂ=ಬಾಂಧವ್ಯ  ಕರವಾಣಿ=ಮಾಡಬೇಕು ಅಹಂ=ನಾನು

ಅನುವಾದ:

ನಾನು ಜನಸಮೂಹದಲ್ಲೂ ದ್ವೈತವನ್ನು ನೋಡುವದಿಲ್ಲ. ಜನ ಸಮೂಹದಲ್ಲಿದ್ದು ಅರಣ್ಯದಲ್ಲಿದ್ದಂತೆ ಭಾಸವಾಗುವಾಗ ನಾನು ಯಾವುದಕ್ಕೆ ಅಂಟಿಕೊಳ್ಳಲಿ? 

ನಾಹಂ ದೇಹೋ ನ ಮೇ ದೇಹೋ ಜೀವೋ ನಾಹಮಹಂ ಹಿ ಚಿತ್ .
ಅಯಮೇವ ಹಿ ಮೇ ಬಂಧ ಆಸೀದ್ಯಾ ಜೀವಿತೇ ಸ್ಪೃಹಾ .. 2-22..

ಶಬ್ದಾರ್ಥ:

=ಅಲ್ಲ  ಅಹಂ=ನಾನು  ದೇಹಃ=ದೇಹ  ಮೇ=ನನ್ನ  ಜೀವಃ=ಜೀವ  ನ+ಅಹಂ+ಅಹಂ=ನಾಹಮಹಂ  ಹಿ=ನಿಜವಾಗಿ ಚಿತ್=ಪ್ರಜ್ಞೆ  ಅಯಮ್=ಇದೇ   ಮೇ=ನನ್ನ  ಬಂಧ=ಬಂಧನ ಆಸೀತ್=ಆಗಿತ್ತು  ಯಃ=ಅದು ಜೀವಿತೇ=ಜೀವನದಲ್ಲಿ   ಸ್ಪೃಹ=ಆಸೆ 

ಅನುವಾದ:

ನಾನು ದೇಹವಲ್ಲ. ಈ ದೇಹ ನನ್ನದಲ್ಲ. ನಾನು ಜೀವವಲ್ಲ. ನಾನು ಬರಿ ಚೈತನ್ಯ. ನನ್ನ ಜೀವನದ ಜೊತೆಗಿನ ನಂಟೇ ನನ್ನ ಬಂಧನದ ಕಾರಣವಾಗಿತ್ತು. 

ಅಹೋ ಭುವನಕಲ್ಲೋಲೈರ್ವಿಚಿತ್ರೈರ್ದ್ರಾಕ್ ಸಮುತ್ಥಿತಂ .
ಮಯ್ಯನಂತಮಹಾಂಭೋಧೌ ಚಿತ್ತವಾತೇ ಸಮುದ್ಯತೇ .. 2-23..

ಶಬ್ದಾರ್ಥ:

ಭುವನ=ಭೂಮಿ ಕಲ್ಲೋಲೈ=ಅಲೆಗಳು  ವಿಚಿತ್ರೈಃ=ವಿಧವಿಧದ  ದ್ರಾಕ್=ಬೇಗ ಸಮುತ್ಥಿತಂ=ಸೃಷ್ಠಿಯಾಗುತ್ತವೆ  ಮಯಿ=ನನ್ನಲ್ಲಿ  ಅನಂತ=ಅಂತ್ಯವಿಲ್ಲದ  ಮಹಾಂಬೋಧೌ=ಮಹಾಸಾಗರದಲ್ಲಿ  ಚಿತ್ತವಾತೇ=ಮನಸ್ಸಿನ ವಾಯುವಿನಲ್ಲಿ  ಸಮುದ್ಯತೇ=ಹುಟ್ಟುತ್ತವೆ

ಅನುವಾದ:
ಏನದ್ಭುತ, ನನ್ನ ಮನಸ್ಸಿನ ಮಹಾಸಾಗರದಲ್ಲಿ ಅಲೆಗಳು ಹುಟ್ಟಿದಾಗ ನಾನಾ ವಿಧದ ವಿಶ್ವಗಳು ಸ್ರಷ್ಟಿಯಾಗುತ್ತವೆ. 

ಮಯ್ಯನಂತಮಹಾಂಭೋಧೌ ಚಿತ್ತವಾತೇ ಪ್ರಶಾಮ್ಯತಿ .
ಅಭಾಗ್ಯಾಜ್ಜೀವವಣಿಜೋ ಜಗತ್ಪೋತೋ ವಿನಶ್ವರಃ .. 2-24..

ಶಬ್ದಾರ್ಥ:

ಪ್ರಶಾಮ್ಯತಿ=ಶಾಂತವಾಗುತ್ತವೆ  ಅಭಾಗ್ಯಾತ್=ದೌರ್ಭಾಗ್ಯದಿಂದ  ಜೀವವಣಿಜಃ=ಜೀವನದ ವ್ಯಾಪಾರಿಗಳು ಜಗತ್+ಪೋತಃ=ಜಗತ್ತಿನ ಹಡಗು  ವಿನಶ್ವರಃ=ನಾಶವಾಗುತ್ತದೆ 

ಅನುವಾದ:

ದೌರ್ಭಗ್ಯದಿಂದ ನನ್ನ ಚಿತ್ತದ ಅನಂತ ಮಹಾಸಾಗರದಲ್ಲಿ ಚಿತ್ತವಾತಗಳು ಪ್ರಶಾಂತವಾದಾಗ ಜೀವನದ ವ್ಯಾಪಾರಿಗಳ ಜಗತ್ತು ವಿನಾಶಿಸುತ್ತದೆ.
ವಿವರಣೆ:

ಜೀವಾತ್ಮ ಒಬ್ಬ ವ್ಯಾಪಾರಿಯಂತೆ. ಅವನು ತನ್ನ ಶಾಂತ ನಿರಾಕಾರಿ ಆತ್ಮ ಸ್ವರೂಪವನ್ನು ಕೊಟ್ಟು ಕ್ಷಣಿಕ ಲೌಕಿಕ ಸುಖಗಳನ್ನು ಕೊಳ್ಳುತ್ತಾನೆ.

ಮನಸ್ಸು ಶಾಂತವಾಗಿಸಿ ಧ್ಯಾನದಲ್ಲಿ ಲೀನವಾಗಿ ಆತ್ಮ ಸಾಕ್ಷಾತ್ಕಾರವಾದಾಗ ನಮ್ಮ ಕಣ್ಮುಂದಿರುವ ಜೀವಾತ್ಮ ರಚಿಸಿದ ಮಾಯಾ ಜಗತ್ತು ನಾಶವಾಗುವದು. 

ಮಯ್ಯನಂತಮಹಾಂಭೋಧಾವಾಶ್ಚರ್ಯಂ ಜೀವವೀಚಯಃ .
ಉದ್ಯಂತಿ ಘ್ನಂತಿ ಖೇಲಂತಿ ಪ್ರವಿಶಂತಿ ಸ್ವಭಾವತಃ .. 2-25..

ಶಬ್ದಾರ್ಥ:

ಆಶ್ಚರ್ಯಂ=ಆಶ್ಚರ್ಯ  ಜೀವವೀಚಯಃ=ಜೀವಿಗಳೆಂಬ ಅಲೆಗಳು ಉದ್ಯಂತಿ=ಏಳುತ್ತವೆ  ಘ್ನಂತಿ=ಹೊಡೆದಾಡುತ್ತವೆ  ಖೇಲಂತಿ=ಆಡುತ್ತವೆ  ಪ್ರವಿಶಂತಿ=ಪ್ರವೇಶಿಸುತ್ತವೆ  ಸ್ವಭಾವತಃ=ಸ್ವಭಾವದಂತೆ 

ಅನುವಾದ: 

ಎಷ್ಟು ಅದ್ಭುತ! ನನ್ನೆಂಬ ಅಪರಿಮಿತ ಸಾಗರದಲ್ಲಿ, ಜೀವಿಗಳ ಅಲೆಗಳು ಅವುಗಳ ಸ್ವಭಾವದಂತೆ ಏಳುತ್ತವೆ, ಡಿಕ್ಕಿ ಹೊಡೆಯುತ್ತವೆ, ಸ್ವಲ್ಪ ಸಮಯದವರೆಗೆ ಆಟವಾಡುತ್ತವೆ, ನಂತರ ಕಣ್ಮರೆಯಾಗುತ್ತವೆ .

 

Comments

Popular posts from this blog

ಅಷ್ಟಾವಕ್ರಗೀತಾ - ೧

.. ಶ್ರೀ .. ಅಥ ಶ್ರೀಮದಷ್ಟಾವಕ್ರಗೀತಾ ಪ್ರಾರಭ್ಯತೇ . ಜನಕ ಉವಾಚ .. ಕಥಂ ಜ್ಞಾನಮವಾಪ್ನೋತಿ ಕಥಂ ಮುಕ್ತಿರ್ಭವಿಷ್ಯತಿ . ವೈರಾಗ್ಯಂ ಚ ಕಥಂ ಪ್ರಾಪ್ತಮೇತದ್ ಬ್ರೂಹಿ ಮಮ ಪ್ರಭೋ .. 1-1.. ಶಬ್ದಾರ್ಥ ಪ್ರಾರಭ್ಯತೇ = ಆರಂಭವಾಗುತ್ತದೆ ಜನಕ ಉವಾಚ = ಜನಕನು ಹೇಳಿದನು ಕಥಂ = ಹೇಗೆ ಜ್ಞಾನಮ್ + ಅವಾಪ್ನೋತಿ = ಜ್ಞಾನವನ್ನು ಪಡೆಯಬೇಕು ಮುಕ್ತಿ = ಮೋಕ್ಷ ಭವಿಷ್ಯತಿ = ಆಗುತ್ತದೆ ವೈರಾಗ್ಯ = ವೈರಾಗ್ಯ ಚ =ಮತ್ತು ಪ್ರಾಪ್ತಂ + ಏತತ್ = ಪಡೆಯತಕ್ಕದ್ದು , ಇದನ್ನು ಬ್ರೂಹಿ =ಹೇಳು ಮಮ =ನನ್ನ. ಪ್ರಭೋ = ಪ್ರಭುವೇ ಅನುವಾದ   ಜನಕ ಹೇಳಿದನು. ಜ್ಞಾನವನ್ನು ಹೇಗೆ ಸಂಪಾದಿಸಬೇಕು? ಮುಕ್ತಿಯನ್ನು ಹೇಗೆ ಪಡೆಯಬೇಕು? ವೈರಾಗ್ಯವನ್ನು ಪಡೆಯುವದು ಹೇಗೆ? ಪ್ರಭೂ, ಇದನ್ನು ನನಗೆ ತಿಳಿಸಿಕೊಡಿ. ಜನಕನು ನಮ್ಮೆಲ್ಲರ ಮನಸ್ಸಿನಲ್ಲಿರುವ ಪ್ರಶ್ನೆಯನ್ನೇ ಕೇಳುತ್ತಿದ್ದಾನೆ - ಜ್ಞಾನ ಪಡೆಯುವದು ಹೇಗೆ - ಅಧ್ಯಾತ್ಮ ಜ್ಞಾನ - ಕಬ್ಬಿಣದ ಕಡಲೆ - ಅದನ್ನು ತಿಳಿಯುವದು ಹೇಗೆ? ನಂತರ ಮೋಕ್ಷ ಪಡೆಯುವದು ಹೇಗೆ? ಈ ಸುಖ-ದುಃಖಗಳಿಂದ, ಹುಟ್ಟು-ಸಾವುಗಳಿಂದ, ಜರಾ-ಮೃತ್ಯುಗಳಿಂದ ಹೇಗೆ ಪಾರಾಗುವದು? ನಾನು-ನನ್ನದು ಎಂಬ ಆಶಾ-ಪಾಶದಿಂದ ಹೊರ ಬರುವದು ಹೇಗೆ? ಅಷ್ಟಾವಕ್ರ ಉವಾಚ .. ಮುಕ್ತಿಮಿಚ್ಛಸಿ ಚೇತ್ತಾತ ವಿಷಯಾನ್ ವಿಷವತ್ತ್ಯಜ . ಕ್ಷಮಾರ್ಜವದಯಾತೋಷಸತ್ಯಂ ಪೀಯೂಷವದ್ ಭಜ .. 1-2.. ಶಬ್ದಾರ್ಥ ಮುಕ್ತಿಂ = ಮು...

ಅಷ್ಟಾವಕ್ರಗೀತಾ - ೩

ಆತ್ಮಜ್ಞಾನದ ಅವಲೋಕನ ಅಷ್ಟಾವಕ್ರ ಉವಾಚ .. ಅವಿನಾಶಿನಮಾತ್ಮಾನಮೇಕಂ ವಿಜ್ಞಾಯ ತತ್ತ್ವತಃ . ತವಾತ್ಮಜ್ಞಾನಸ್ಯ ಧೀರಸ್ಯ ಕಥಮರ್ಥಾರ್ಜನೇ ರತಿಃ .. 3-1..  ಶಬ್ದಾರ್ಥ: ಅವಿನಾಶಿನಂ =ವಿನಾಶವಿಲ್ಲದವನನ್ನು;   ಆತ್ಮಾನಂ =ಆತ್ಮನನ್ನು;   ಏಕಂ =ಏಕೈಕನನ್ನು;  ವಿಜ್ಞಾಯ =ತಿಳಿದು;  ತತ್ತ್ವತಃ =ನಿಜ ಸ್ವರೂಪದಲ್ಲಿ;  ತವ =ನಿನ್ನ;  ಆತ್ಮಜ್ಞಾನಸ್ಯ =ಆತ್ಮಜ್ಞಾನಿಯ;  ಧೀರಸ್ಯ =ಧೀರನ;  ಕಥಂ =ಹೇಗೆ;  ಅರ್ಥಾರ್ಜನೇ =ಹಣದ(ಅರ್ಥ) ಗಳಿಕೆಯಲ್ಲಿ(ಅರ್ಜನೇ);  ರತಿಃ =ಮೋಹ ಅನುವಾದ: ಅವಿನಾಶಿಯಾದ, ಅದ್ವೈತವಾದ ಆತ್ಮವನ್ನು ಅರಿತುಕೊಂಡಮೇಲೆ ಆತ್ಮಜ್ಞಾನಿಯಾದ ಧೀರನು, ಸಂಪತ್ತನ್ನು ಗಳಿಸುವದಲ್ಲಿ ಆಸಕ್ತಿಯನ್ನು ಹೇಗೆ ಇರಿಸಿಕೊಳ್ಳುತ್ತಾನೆ? ವಿವರಣೆ: ಆತ್ಮಜ್ಞಾನವನ್ನು ಹುಡುಕುತ್ತ ಜನಕನು ಅದರ ಜೊತೆಗೇ ರಾಜ್ಯಭಾರವನ್ನೂ ಮಾಡುತ್ತಿದ್ದಾನೆ. ಅದಕ್ಕಾಗಿ ಅಷ್ಟಾವಕ್ರ ಮುನಿಯು ಅವನನ್ನು ಪರೀಕ್ಷಿಸುತ್ತ ಕೇಳುತ್ತಾನೆ - ಆತ್ಮಜ್ಞಾನವನ್ನು ಪಡೆದ ಮೇಲೆಯೂ ಹೇಗೆ ಧನಸಂಪಾದನೆಯಲ್ಲಿ ಆಸಕ್ತಿ ಇರುತ್ತದೆ.  ಆತ್ಮಾಜ್ಞಾನಾದಹೋ ಪ್ರೀತಿರ್ವಿಷಯಭ್ರಮಗೋಚರೇ . ಶುಕ್ತೇರಜ್ಞಾನತೋ ಲೋಭೋ ಯಥಾ ರಜತವಿಭ್ರಮೇ .. 3-2.. ಶಬ್ದಾರ್ಥ: ಆತ್ಮ + ಅಜ್ಞಾನಾತ್ =ಆತ್ಮದ ಅಜ್ಞಾನದಿಂದ; ಅಹೋ =ಅಹೋ; ಪ್ರೀತಿಃ =ಪ್ರೀತಿ; ವಿಷಯಭ್ರಮಗೋಚರೇ =ಭ್ರಮೆಯಾದ ವಿಷಯಗಳಲ್ಲಿ; ಶುಕ್ತೇ + ಅಜ್ಞಾನತಃ =ಚಿಪ್...

ಅಷ್ಟಾವಕ್ರ ಗೀತಾ - ೫

ಲಯದ ಉಪದೇಶ ಅಷ್ಟಾವಕ್ರ ಉವಾಚ .. ನ ತೇ ಸಂಗೋಽಸ್ತಿ ಕೇನಾಪಿ ಕಿಂ ಶುದ್ಧಸ್ತ್ಯಕ್ತುಮಿಚ್ಛಸಿ . ಸಂಘಾತವಿಲಯಂ ಕುರ್ವನ್ನೇವಮೇವ ಲಯಂ ವ್ರಜ .. 5-1.. ಅಷ್ಟಾವಕ್ರನು ಜನಕನಿಗೆ ಮೋಕ್ಷದ ಮಾರ್ಗವನ್ನು ತಿಳಿಸಿ ಹೇಳುತ್ತಾ ಹೀಗೆ ಹೇಳುತ್ತಾನೆ- ನೀನು ಶುದ್ಧನು, ನಿನಗೆ ಯಾವುದರ ಸಂಗವೂ ಇಲ್ಲ   ಹೀಗಿರುವಾಗ ಏನನ್ನು ತಾನೇ ತ್ಯಜಿಸಲು ಇಚ್ಛಿಸುವೆ? ನೀನು ಶರೀರ-ಮನ-ಅಹಂಕಾರಗಳ ಮೋಹವನ್ನು ನಾಶವಾಗಿಸಿ ಲಯವನ್ನು, ಮುಕ್ತಿಯನ್ನು ಹೊಂದು ಉದೇತಿ ಭವತೋ ವಿಶ್ವಂ ವಾರಿಧೇರಿವ ಬುದ್ಬುದಃ . ಇತಿ ಜ್ಞಾತ್ವೈಕಮಾತ್ಮಾನಮೇವಮೇವ ಲಯಂ ವ್ರಜ .. 5-2.. ಸಾಗರದಿಂದ ಅಲೆಗಳು ಉದಯಿಸಿದಂತೆ, ಈ ವಿಶ್ವವೆಲ್ಲ ನಿನ್ನಿಂದಲೇ ಉದ್ಭವವಾಗುತ್ತದೆ. ಇದನ್ನು ತಿಳಿದು, ನೀನೇ ಆತ್ಮನೆಂದು ತಿಳಿದು, ಲಯವನ್ನು (ಮೋಕ್ಷವನ್ನು) ಹೊಂದು. ಪ್ರತ್ಯಕ್ಷಮಪ್ಯವಸ್ತುತ್ವಾದ್ ವಿಶ್ವಂ ನಾಸ್ತ್ಯಮಲೇ ತ್ವಯಿ . ರಜ್ಜುಸರ್ಪ ಇವ ವ್ಯಕ್ತಮೇವಮೇವ ಲಯಂ ವ್ರಜ .. 5-3.. ಹಗ್ಗ ಸರ್ಪದಂತೆ ಕಾಣುವಂತೆ, ಪ್ರತ್ಯಕ್ಷವೆನಿಸಿದರೂ ಅವಸ್ತುವಾದದ್ದರಿಂದ (ಮಿಥ್ಯೆಯಾದದ್ದರಿಂದ) ಈ ವಿಶ್ವವು ಅಮಲನಾದ(ಶುದ್ಧನಾದ) ನಿನ್ನೊಳಗೆ ಇಲ್ಲ. ಇದನ್ನು ಅರಿತು ಲಯವನ್ನು ಹೊಂದು. ಸಮದುಃಖಸುಖಃ ಪೂರ್ಣ ಆಶಾನೈರಾಶ್ಯಯೋಃ ಸಮಃ . ಸಮಜೀವಿತಮೃತ್ಯುಃ ಸನ್ನೇವಮೇವ ಲಯಂ ವ್ರಜ .. 5-4.. ನೀನಗೆ ಸುಖ-ದುಃಖಗಳು ಸಮಾನ. ಆಶಾ-ನಿರಾಶೆಗಳು ಸಮಾನ. ಜೀವನ-ಮೃತ್ಯುಗಳು ಸಮಾನ. ಈ ರೀತಿಯವನಾಗಿರುವ ನೀನು ಆತ್ಮದಲ್ಲಿ ಲಯವನ್ನು ಹೊಂದು....