Skip to main content

ಅಷ್ಟಾವಕ್ರಗೀತಾ - ೧೬

 ಅಷ್ಟಾವಕ್ರ ಉವಾಚ ..

ಆಚಕ್ಷ್ವ ಶೃಣು ವಾ ತಾತ ನಾನಾಶಾಸ್ತ್ರಾಣ್ಯನೇಕಶಃ .
ತಥಾಪಿ ನ ತವ ಸ್ವಾಸ್ಥ್ಯಂ ಸರ್ವವಿಸ್ಮರಣಾದ್ ಋತೇ .. ೧೬-೧..

ಮಗು, ನಾನಾ ಶಾಸ್ತ್ರಗಳನ್ನು, ಕೇಳಿದರೂ, ಹೇಳಿದರೂ ಸಹ,  ಎಲ್ಲವನ್ನೂ ಮರೆಯುವ ತನಕ ನಿನಗೆ ಶಾಂತಿ ಸಿಗದು.

ಭೋಗಂ ಕರ್ಮ ಸಮಾಧಿಂ ವಾ ಕುರು ವಿಜ್ಞ ತಥಾಪಿ ತೇ .
ಚಿತ್ತಂ ನಿರಸ್ತಸರ್ವಾಶಮತ್ಯರ್ಥಂ ರೋಚಯಿಷ್ಯತಿ .. ೧೬-೨..

ಓ ಜ್ಞಾನಿಯೇ, ನೀನು ಭೋಗವನ್ನು ಅಥವಾ ಕರ್ಮವನ್ನು ಅಥವಾ ಧ್ಯಾನವನ್ನೇ ಮಾಡುತ್ತಿರು. ಚಿತ್ತವು ಸಂತೋಷಗೊಳ್ಳುವದು ಸರ್ವ ಆಸೆಯನ್ನು ತ್ಯಜಿಸಿದಾಗ ಮಾತ್ರ.

ಆಯಾಸಾತ್ಸಕಲೋ ದುಃಖೀ ನೈನಂ ಜಾನಾತಿ ಕಶ್ಚನ .
ಅನೇನೈವೋಪದೇಶೇನ ಧನ್ಯಃ ಪ್ರಾಪ್ನೋತಿ ನಿರ್ವೃತಿಂ .. ೧೬-೩..

ಸತತ ಪ್ರಯತ್ನದಿಂದ ಎಲ್ಲರೂ ದುಃಖದಲ್ಲಿರುತ್ತಾರೆ. ಆದರೆ ಈ ಮಾತನ್ನು ಯಾರೂ ಅರಿತಿರುವದಿಲ್ಲ. ಈ ಉಪದೇಶವನ್ನು ಪಡೆದ ಧನ್ಯನು ಮುಕ್ತನಾಗುತ್ತಾನೆ.

ವ್ಯಾಪಾರೇ ಖಿದ್ಯತೇ ಯಸ್ತು ನಿಮೇಷೋನ್ಮೇಷಯೋರಪಿ .
ತಸ್ಯಾಲಸ್ಯ ಧುರೀಣಸ್ಯ ಸುಖಂ ನಾನ್ಯಸ್ಯ ಕಸ್ಯಚಿತ್ .. ೧೬-೪..

ಕಣ್ಣನ್ನು ಮುಚ್ಚಿ ತೆಗೆದು ಮಾಡಲೂ ಯಾರಿಗೆ ಆಲಸ್ಯವೋ ಅಂತಹ ಆಲಸಿ ಧುರೀಣನಿಗೆ ಸುಖ ಲಭ್ಯ - ಇನ್ಯಾರಿಗೂ ಅಲ್ಲ.

ಇದಂ ಕೃತಮಿದಂ ನೇತಿ ದ್ವಂದ್ವೈರ್ಮುಕ್ತಂ ಯದಾ ಮನಃ .
ಧರ್ಮಾರ್ಥಕಾಮಮೋಕ್ಷೇಷು ನಿರಪೇಕ್ಷಂ ತದಾ ಭವೇತ್ .. ೧೬-೫..

 ಇದು ಮಾಡಲಾಗಿದೆ - ಇದನ್ನು ಮಾಡಿ ಆಗಿಲ್ಲ ಎಂಬ ದ್ವಂದ್ವದಿಂದ ಯಾವಾಗ ಮನಸ್ಸು ಮುಕ್ತವಾಗುವದೋ, ಆಗ ಅದು ಧರ್ಮಾರ್ಥ ಕಾಮ ಮೋಕ್ಷಗಳಲ್ಲಿ ನಿರಾಸಕ್ತವಾಗುತ್ತದೆ.

ವಿರಕ್ತೋ ವಿಷಯದ್ವೇಷ್ಟಾ ರಾಗೀ ವಿಷಯಲೋಲುಪಃ .
ಗ್ರಹಮೋಕ್ಷವಿಹೀನಸ್ತು ನ ವಿರಕ್ತೋ ನ ರಾಗವಾನ್ .. ೧೬-೬..

ಯಾರು ವಿಷಯದ್ವೇಷಿಯೋ ಅವನು ವಿರಕ್ತನು, ಯಾರು ವಿಷಯಲೋಲುಪನೋ ಅವನು ರಾಗೋನ್ಮತ್ತ. ಯಾರಿಗೆ ನಂಟು ಅಥವಾ ನಿರ್ಲಿಪ್ತತೆ ಎರಡೂ ಇಲ್ಲವೋ, ಅವನು ವಿರಕ್ತನೂ ಅಲ್ಲ, ರಾಗವಾನನೂ ಅಲ್ಲ.

ಹೇಯೋಪಾದೇಯತಾ ತಾವತ್ಸಂಸಾರವಿಟಪಾಂಕುರಃ .
ಸ್ಪೃಹಾ ಜೀವತಿ ಯಾವದ್ ವೈ ನಿರ್ವಿಚಾರದಶಾಸ್ಪದಂ .. ೧೬-೭..

ಎಲ್ಲಿಯವರೆಗೆ ತೃಷ್ಣೆ ಜೀವಿತವಾಗಿರುವದೋ, ಎಲ್ಲಿಯವರೆಗೆ ವಿಚಾರರಹಿತವಾದ ದೆಸೆ ಇರುವದೋ, ಅಲ್ಲಿಯವರೆಗೆ ಸಂಸಾರ ವೃಕ್ಷದ ಚಿಗುರು ಬೆಳೆಯುತ್ತಲೇ ಇರುವದು ಹಾಗೂ ಸ್ವೀಕಾರ, ತಿರಸ್ಕಾರಗಳು ಕೂಡ ಇರುವವು. ತೃಷೆ ನಾಶವಾದ ಮೇಲೆ ಇವಾವೂ ಇರುವದಿಲ್ಲ.

ಪ್ರವೃತ್ತೌ ಜಾಯತೇ ರಾಗೋ ನಿರ್ವೃತ್ತೌ ದ್ವೇಷ ಏವ ಹಿ .
ನಿರ್ದ್ವಂದ್ವೋ ಬಾಲವದ್ ಧೀಮಾನ್ ಏವಮೇವ ವ್ಯವಸ್ಥಿತಃ .. ೧೬-೮..

ಮಾನವನು ಕಾರ್ಯ ಪ್ರವೃತ್ತನಾದಾಗ ರಾಗ ಉತ್ಪನ್ನವಾಗುತ್ತದೆ. ಅವನು ನಿಷ್ಕ್ರಿಯನಾಗಿ ಕುಳಿತಾಗ ದ್ವೇಷ ಉತ್ಪನ್ನವಾಗುತ್ತದೆ. (ಆತ್ಮಜ್ಞಾನಿಯು) ಜ್ಞಾನಿಯಾದವನು ಇವೆರಡರಿಂದಲೂ ದೂರವಾಗಿ, ಮಗುವಿನಂತೆ ನಿರ್ದ್ವಂದ್ವನಾಗಿ ಸ್ಥಿತನಾಗಿರುತ್ತಾನೆ.

ಹಾತುಮಿಚ್ಛತಿ ಸಂಸಾರಂ ರಾಗೀ ದುಃಖಜಿಹಾಸಯಾ .
ವೀತರಾಗೋ ಹಿ ನಿರ್ದುಃಖಸ್ತಸ್ಮಿನ್ನಪಿ ನ ಖಿದ್ಯತಿ .. ೧೬-೯..

ರಾಗಿಯಾದವನು ದುಃಖವನ್ನು ತಪ್ಪಿಸಿಕೊಳ್ಳಲು ಸಂಸಾರವನ್ನೇ ತ್ಯಜಿಸಲು ಇಚ್ಛಿಸುತ್ತಾನೆ. ಆದರೆ ರಾಗರಹಿತನಾದವನು ಸಂಸಾರದಲ್ಲಿದ್ದರೂ ಖೇದವನ್ನು ಹೊಂದುವದಿಲ್ಲ.

ಯಸ್ಯಾಭಿಮಾನೋ ಮೋಕ್ಷೇಽಪಿ ದೇಹೇಽಪಿ ಮಮತಾ ತಥಾ .
ನ ಚ ಜ್ಞಾನೀ ನ ವಾ ಯೋಗೀ ಕೇವಲಂ ದುಃಖಭಾಗಸೌ .. ೧೬-೧೦..

ಯಾರಿಗೆ ಮೋಕ್ಷದ ಬಗ್ಗೆ ಅಭಿಮಾನ-ಜಂಭವಿರುವದೋ, ದೇಹದ ಬಗ್ಗೆ ಮೋಹವಿರುವದೋ, ಅಂತವನು ಜ್ಞಾನಿಯೂ ಅಲ್ಲ, ಯೋಗಿಯೂ ಅಲ್ಲ. ಕೇವಲ ದುಃಖಿ ಮಾತ್ರ.

ಹರೋ ಯದ್ಯುಪದೇಷ್ಟಾ ತೇ ಹರಿಃ ಕಮಲಜೋಽಪಿ ವಾ .
ತಥಾಪಿ ನ ತವ ಸ್ವಾಥ್ಯಂ ಸರ್ವವಿಸ್ಮರಣಾದೃತೇ .. ೧೬-೧೧..

ಎಲ್ಲವನ್ನೂ (ರಾಗ-ಮೋಹ-ದ್ವೇಷಗಳನ್ನು) ತ್ಯಜಿಸುವತನಕ, ಮರೆಯುವತನಕ, ನಿನಗೆ ಹರನಾಗಲೀ, ಹರಿಯಾಗಲೀ, ಅಥವಾ ಕಮಲಜನಾಗಲೀ(ಬ್ರಹ್ಮ) ನಿನಗೆ ಉಪದೇಶಿಸಿದರೂ ಶಾಂತಿ ದೊರಕದು.

 

ಸಂಪೂರ್ಣ ಕೃತಿಯನ್ನು ಡೌನ್ ಲೋಡ್ ಮಾಡಿ. 

Comments

Popular posts from this blog

ಅಷ್ಟಾವಕ್ರಗೀತಾ - ೧

.. ಶ್ರೀ .. ಅಥ ಶ್ರೀಮದಷ್ಟಾವಕ್ರಗೀತಾ ಪ್ರಾರಭ್ಯತೇ . ಜನಕ ಉವಾಚ .. ಕಥಂ ಜ್ಞಾನಮವಾಪ್ನೋತಿ ಕಥಂ ಮುಕ್ತಿರ್ಭವಿಷ್ಯತಿ . ವೈರಾಗ್ಯಂ ಚ ಕಥಂ ಪ್ರಾಪ್ತಮೇತದ್ ಬ್ರೂಹಿ ಮಮ ಪ್ರಭೋ .. 1-1.. ಶಬ್ದಾರ್ಥ ಪ್ರಾರಭ್ಯತೇ = ಆರಂಭವಾಗುತ್ತದೆ ಜನಕ ಉವಾಚ = ಜನಕನು ಹೇಳಿದನು ಕಥಂ = ಹೇಗೆ ಜ್ಞಾನಮ್ + ಅವಾಪ್ನೋತಿ = ಜ್ಞಾನವನ್ನು ಪಡೆಯಬೇಕು ಮುಕ್ತಿ = ಮೋಕ್ಷ ಭವಿಷ್ಯತಿ = ಆಗುತ್ತದೆ ವೈರಾಗ್ಯ = ವೈರಾಗ್ಯ ಚ =ಮತ್ತು ಪ್ರಾಪ್ತಂ + ಏತತ್ = ಪಡೆಯತಕ್ಕದ್ದು , ಇದನ್ನು ಬ್ರೂಹಿ =ಹೇಳು ಮಮ =ನನ್ನ. ಪ್ರಭೋ = ಪ್ರಭುವೇ ಅನುವಾದ   ಜನಕ ಹೇಳಿದನು. ಜ್ಞಾನವನ್ನು ಹೇಗೆ ಸಂಪಾದಿಸಬೇಕು? ಮುಕ್ತಿಯನ್ನು ಹೇಗೆ ಪಡೆಯಬೇಕು? ವೈರಾಗ್ಯವನ್ನು ಪಡೆಯುವದು ಹೇಗೆ? ಪ್ರಭೂ, ಇದನ್ನು ನನಗೆ ತಿಳಿಸಿಕೊಡಿ. ಜನಕನು ನಮ್ಮೆಲ್ಲರ ಮನಸ್ಸಿನಲ್ಲಿರುವ ಪ್ರಶ್ನೆಯನ್ನೇ ಕೇಳುತ್ತಿದ್ದಾನೆ - ಜ್ಞಾನ ಪಡೆಯುವದು ಹೇಗೆ - ಅಧ್ಯಾತ್ಮ ಜ್ಞಾನ - ಕಬ್ಬಿಣದ ಕಡಲೆ - ಅದನ್ನು ತಿಳಿಯುವದು ಹೇಗೆ? ನಂತರ ಮೋಕ್ಷ ಪಡೆಯುವದು ಹೇಗೆ? ಈ ಸುಖ-ದುಃಖಗಳಿಂದ, ಹುಟ್ಟು-ಸಾವುಗಳಿಂದ, ಜರಾ-ಮೃತ್ಯುಗಳಿಂದ ಹೇಗೆ ಪಾರಾಗುವದು? ನಾನು-ನನ್ನದು ಎಂಬ ಆಶಾ-ಪಾಶದಿಂದ ಹೊರ ಬರುವದು ಹೇಗೆ? ಅಷ್ಟಾವಕ್ರ ಉವಾಚ .. ಮುಕ್ತಿಮಿಚ್ಛಸಿ ಚೇತ್ತಾತ ವಿಷಯಾನ್ ವಿಷವತ್ತ್ಯಜ . ಕ್ಷಮಾರ್ಜವದಯಾತೋಷಸತ್ಯಂ ಪೀಯೂಷವದ್ ಭಜ .. 1-2.. ಶಬ್ದಾರ್ಥ ಮುಕ್ತಿಂ = ಮು...

ಅಷ್ಟಾವಕ್ರಗೀತಾ - ೩

ಆತ್ಮಜ್ಞಾನದ ಅವಲೋಕನ ಅಷ್ಟಾವಕ್ರ ಉವಾಚ .. ಅವಿನಾಶಿನಮಾತ್ಮಾನಮೇಕಂ ವಿಜ್ಞಾಯ ತತ್ತ್ವತಃ . ತವಾತ್ಮಜ್ಞಾನಸ್ಯ ಧೀರಸ್ಯ ಕಥಮರ್ಥಾರ್ಜನೇ ರತಿಃ .. 3-1..  ಶಬ್ದಾರ್ಥ: ಅವಿನಾಶಿನಂ =ವಿನಾಶವಿಲ್ಲದವನನ್ನು;   ಆತ್ಮಾನಂ =ಆತ್ಮನನ್ನು;   ಏಕಂ =ಏಕೈಕನನ್ನು;  ವಿಜ್ಞಾಯ =ತಿಳಿದು;  ತತ್ತ್ವತಃ =ನಿಜ ಸ್ವರೂಪದಲ್ಲಿ;  ತವ =ನಿನ್ನ;  ಆತ್ಮಜ್ಞಾನಸ್ಯ =ಆತ್ಮಜ್ಞಾನಿಯ;  ಧೀರಸ್ಯ =ಧೀರನ;  ಕಥಂ =ಹೇಗೆ;  ಅರ್ಥಾರ್ಜನೇ =ಹಣದ(ಅರ್ಥ) ಗಳಿಕೆಯಲ್ಲಿ(ಅರ್ಜನೇ);  ರತಿಃ =ಮೋಹ ಅನುವಾದ: ಅವಿನಾಶಿಯಾದ, ಅದ್ವೈತವಾದ ಆತ್ಮವನ್ನು ಅರಿತುಕೊಂಡಮೇಲೆ ಆತ್ಮಜ್ಞಾನಿಯಾದ ಧೀರನು, ಸಂಪತ್ತನ್ನು ಗಳಿಸುವದಲ್ಲಿ ಆಸಕ್ತಿಯನ್ನು ಹೇಗೆ ಇರಿಸಿಕೊಳ್ಳುತ್ತಾನೆ? ವಿವರಣೆ: ಆತ್ಮಜ್ಞಾನವನ್ನು ಹುಡುಕುತ್ತ ಜನಕನು ಅದರ ಜೊತೆಗೇ ರಾಜ್ಯಭಾರವನ್ನೂ ಮಾಡುತ್ತಿದ್ದಾನೆ. ಅದಕ್ಕಾಗಿ ಅಷ್ಟಾವಕ್ರ ಮುನಿಯು ಅವನನ್ನು ಪರೀಕ್ಷಿಸುತ್ತ ಕೇಳುತ್ತಾನೆ - ಆತ್ಮಜ್ಞಾನವನ್ನು ಪಡೆದ ಮೇಲೆಯೂ ಹೇಗೆ ಧನಸಂಪಾದನೆಯಲ್ಲಿ ಆಸಕ್ತಿ ಇರುತ್ತದೆ.  ಆತ್ಮಾಜ್ಞಾನಾದಹೋ ಪ್ರೀತಿರ್ವಿಷಯಭ್ರಮಗೋಚರೇ . ಶುಕ್ತೇರಜ್ಞಾನತೋ ಲೋಭೋ ಯಥಾ ರಜತವಿಭ್ರಮೇ .. 3-2.. ಶಬ್ದಾರ್ಥ: ಆತ್ಮ + ಅಜ್ಞಾನಾತ್ =ಆತ್ಮದ ಅಜ್ಞಾನದಿಂದ; ಅಹೋ =ಅಹೋ; ಪ್ರೀತಿಃ =ಪ್ರೀತಿ; ವಿಷಯಭ್ರಮಗೋಚರೇ =ಭ್ರಮೆಯಾದ ವಿಷಯಗಳಲ್ಲಿ; ಶುಕ್ತೇ + ಅಜ್ಞಾನತಃ =ಚಿಪ್...

ಅಷ್ಟಾವಕ್ರ ಗೀತಾ - ೫

ಲಯದ ಉಪದೇಶ ಅಷ್ಟಾವಕ್ರ ಉವಾಚ .. ನ ತೇ ಸಂಗೋಽಸ್ತಿ ಕೇನಾಪಿ ಕಿಂ ಶುದ್ಧಸ್ತ್ಯಕ್ತುಮಿಚ್ಛಸಿ . ಸಂಘಾತವಿಲಯಂ ಕುರ್ವನ್ನೇವಮೇವ ಲಯಂ ವ್ರಜ .. 5-1.. ಅಷ್ಟಾವಕ್ರನು ಜನಕನಿಗೆ ಮೋಕ್ಷದ ಮಾರ್ಗವನ್ನು ತಿಳಿಸಿ ಹೇಳುತ್ತಾ ಹೀಗೆ ಹೇಳುತ್ತಾನೆ- ನೀನು ಶುದ್ಧನು, ನಿನಗೆ ಯಾವುದರ ಸಂಗವೂ ಇಲ್ಲ   ಹೀಗಿರುವಾಗ ಏನನ್ನು ತಾನೇ ತ್ಯಜಿಸಲು ಇಚ್ಛಿಸುವೆ? ನೀನು ಶರೀರ-ಮನ-ಅಹಂಕಾರಗಳ ಮೋಹವನ್ನು ನಾಶವಾಗಿಸಿ ಲಯವನ್ನು, ಮುಕ್ತಿಯನ್ನು ಹೊಂದು ಉದೇತಿ ಭವತೋ ವಿಶ್ವಂ ವಾರಿಧೇರಿವ ಬುದ್ಬುದಃ . ಇತಿ ಜ್ಞಾತ್ವೈಕಮಾತ್ಮಾನಮೇವಮೇವ ಲಯಂ ವ್ರಜ .. 5-2.. ಸಾಗರದಿಂದ ಅಲೆಗಳು ಉದಯಿಸಿದಂತೆ, ಈ ವಿಶ್ವವೆಲ್ಲ ನಿನ್ನಿಂದಲೇ ಉದ್ಭವವಾಗುತ್ತದೆ. ಇದನ್ನು ತಿಳಿದು, ನೀನೇ ಆತ್ಮನೆಂದು ತಿಳಿದು, ಲಯವನ್ನು (ಮೋಕ್ಷವನ್ನು) ಹೊಂದು. ಪ್ರತ್ಯಕ್ಷಮಪ್ಯವಸ್ತುತ್ವಾದ್ ವಿಶ್ವಂ ನಾಸ್ತ್ಯಮಲೇ ತ್ವಯಿ . ರಜ್ಜುಸರ್ಪ ಇವ ವ್ಯಕ್ತಮೇವಮೇವ ಲಯಂ ವ್ರಜ .. 5-3.. ಹಗ್ಗ ಸರ್ಪದಂತೆ ಕಾಣುವಂತೆ, ಪ್ರತ್ಯಕ್ಷವೆನಿಸಿದರೂ ಅವಸ್ತುವಾದದ್ದರಿಂದ (ಮಿಥ್ಯೆಯಾದದ್ದರಿಂದ) ಈ ವಿಶ್ವವು ಅಮಲನಾದ(ಶುದ್ಧನಾದ) ನಿನ್ನೊಳಗೆ ಇಲ್ಲ. ಇದನ್ನು ಅರಿತು ಲಯವನ್ನು ಹೊಂದು. ಸಮದುಃಖಸುಖಃ ಪೂರ್ಣ ಆಶಾನೈರಾಶ್ಯಯೋಃ ಸಮಃ . ಸಮಜೀವಿತಮೃತ್ಯುಃ ಸನ್ನೇವಮೇವ ಲಯಂ ವ್ರಜ .. 5-4.. ನೀನಗೆ ಸುಖ-ದುಃಖಗಳು ಸಮಾನ. ಆಶಾ-ನಿರಾಶೆಗಳು ಸಮಾನ. ಜೀವನ-ಮೃತ್ಯುಗಳು ಸಮಾನ. ಈ ರೀತಿಯವನಾಗಿರುವ ನೀನು ಆತ್ಮದಲ್ಲಿ ಲಯವನ್ನು ಹೊಂದು....