.. ಶ್ರೀ ..
ಅಥ ಶ್ರೀಮದಷ್ಟಾವಕ್ರಗೀತಾ ಪ್ರಾರಭ್ಯತೇ .
ಜನಕ ಉವಾಚ ..
ಕಥಂ ಜ್ಞಾನಮವಾಪ್ನೋತಿ ಕಥಂ ಮುಕ್ತಿರ್ಭವಿಷ್ಯತಿ .
ವೈರಾಗ್ಯಂ ಚ ಕಥಂ ಪ್ರಾಪ್ತಮೇತದ್ ಬ್ರೂಹಿ ಮಮ ಪ್ರಭೋ .. 1-1..
ಕಥಂ ಜ್ಞಾನಮವಾಪ್ನೋತಿ ಕಥಂ ಮುಕ್ತಿರ್ಭವಿಷ್ಯತಿ .
ವೈರಾಗ್ಯಂ ಚ ಕಥಂ ಪ್ರಾಪ್ತಮೇತದ್ ಬ್ರೂಹಿ ಮಮ ಪ್ರಭೋ .. 1-1..
ಶಬ್ದಾರ್ಥ
ಪ್ರಾರಭ್ಯತೇ = ಆರಂಭವಾಗುತ್ತದೆ
ಜನಕ ಉವಾಚ = ಜನಕನು ಹೇಳಿದನು
ಕಥಂ = ಹೇಗೆ ಜ್ಞಾನಮ್+ಅವಾಪ್ನೋತಿ = ಜ್ಞಾನವನ್ನು ಪಡೆಯಬೇಕು ಮುಕ್ತಿ = ಮೋಕ್ಷ ಭವಿಷ್ಯತಿ = ಆಗುತ್ತದೆ ವೈರಾಗ್ಯ = ವೈರಾಗ್ಯ ಚ=ಮತ್ತು ಪ್ರಾಪ್ತಂ+ಏತತ್ = ಪಡೆಯತಕ್ಕದ್ದು , ಇದನ್ನು ಬ್ರೂಹಿ=ಹೇಳು ಮಮ=ನನ್ನ. ಪ್ರಭೋ = ಪ್ರಭುವೇ
ಅನುವಾದ
ಜನಕ ಹೇಳಿದನು.
ಜ್ಞಾನವನ್ನು ಹೇಗೆ ಸಂಪಾದಿಸಬೇಕು? ಮುಕ್ತಿಯನ್ನು ಹೇಗೆ ಪಡೆಯಬೇಕು? ವೈರಾಗ್ಯವನ್ನು ಪಡೆಯುವದು ಹೇಗೆ? ಪ್ರಭೂ, ಇದನ್ನು ನನಗೆ ತಿಳಿಸಿಕೊಡಿ.
ಜನಕನು ನಮ್ಮೆಲ್ಲರ ಮನಸ್ಸಿನಲ್ಲಿರುವ ಪ್ರಶ್ನೆಯನ್ನೇ ಕೇಳುತ್ತಿದ್ದಾನೆ - ಜ್ಞಾನ ಪಡೆಯುವದು ಹೇಗೆ - ಅಧ್ಯಾತ್ಮ ಜ್ಞಾನ - ಕಬ್ಬಿಣದ ಕಡಲೆ - ಅದನ್ನು ತಿಳಿಯುವದು ಹೇಗೆ? ನಂತರ ಮೋಕ್ಷ ಪಡೆಯುವದು ಹೇಗೆ? ಈ ಸುಖ-ದುಃಖಗಳಿಂದ, ಹುಟ್ಟು-ಸಾವುಗಳಿಂದ, ಜರಾ-ಮೃತ್ಯುಗಳಿಂದ ಹೇಗೆ ಪಾರಾಗುವದು? ನಾನು-ನನ್ನದು ಎಂಬ ಆಶಾ-ಪಾಶದಿಂದ ಹೊರ ಬರುವದು ಹೇಗೆ?
ಶಬ್ದಾರ್ಥ
ಮುಕ್ತಿಂ = ಮುಕ್ತಿಯನ್ನು ಇಚ್ಛಸಿ=ಇಚ್ಛಿಸುತ್ತೀಯ ಚೇತ್= ಒಂದು ವೇಳೆ ತಾತ=ಮಗುವೇ ವಿಷಯಾನ್=ವಿಷಯಗಳನ್ನು ವಿಷವತ್+ತ್ಯಜ = ವಿಷದಂತೆ ತ್ಯಜಿಸು ಕ್ಷಮಾ+ಆರ್ಜವ+ದಯಾ+ತೋಷ+ಸತ್ಯಂ=ಕ್ಷಮೆ, ಪ್ರಾಮಾಣಿಕತೆ, ದಯೆ, ತೃಪ್ತಿ , ಸತ್ಯ ಇವುಗಳನ್ನು ಪೀಯೂಷವತ್+ಭಜ = ಅಮೃತದಂತೆ ಭಜಿಸು.
ಅನುವಾದ
ಅಷ್ಟಾವಕ್ರ ಹೇಳಿದನು:
ನೀನು ಮುಕ್ತಿ ಪಡೆಯಬೇಕೆಂಬ ಆಸೆ ಇದ್ದರೆ ವಿಷಯಗಳನ್ನು(ಕಾಮ, ಕ್ರೋಧ ಇತ್ಯಾದಿ) ವಿಷದಂತೆ ತ್ಯಜಿಸು. ಕ್ಷಮೆ, ಪ್ರಾಮಾಣಿಕತೆ, ದಯೆ ಸತ್ಯ ಮತ್ತು ಸಮಾಧಾನಗಳನ್ನು ಅಮೃತದಂತೆ ಆರಾಧಿಸು.
ಅರಿ ಷಡ್ವರ್ಗಗಳು - ಕಾಮ, ಕ್ರೋಧ, ಮದ, ಮಾತ್ಸರ್ಯ, ಲೋಭ, ಮೋಹ ಈ ಶತ್ರುಗಳು ನಮ್ಮೆಲ್ಲ ಸಮಸ್ಯೆಗಳಿಗೆ, ನಮ್ಮೆಲ್ಲ ಬಂಧನಗಳಿಗೆ ಕಾರಣ. ಇವುಗಳ ಉಗಮ ಇಂದ್ರಿಯಗಳಿಂದ. ಈ ವಿಷಯೇಂದ್ರಿಯಗಳು ವಿಷದಷ್ಟು ಭಯಾನಕ. ವಿಷದಿಂದ ಮಾರು ದೂರ ಇರುವಂತೆ ಈ ಇಂದ್ರಿಯ ಸುಖಗಳನ್ನು ತ್ಯಜಿಸು. ಕ್ಷಮೆ, ಪ್ರಾಮಾಣಿಕತೆ, ದಯೆ, ತೃಪ್ತಿ , ಸತ್ಯ ಇವು ಅಮೃತ ಸಮಾನ ಎಂದು ತಿಳಿದು ಇವುಗಳ ಮೊರೆ ಹೋಗು. ಆಗ ಮುಕ್ತಿಯ ದಾರಿ ಸರಾಗವಾಗುತ್ತದೆ.
ಭವಾನ್=ನೀನು ನ=ಅಲ್ಲ ಪೃಥ್ವೀ=ಭೂಮಿ ಜಲಂ=ನೀರು ಅಗ್ನಿ=ಬೆಂಕಿ ವಾಯು=ವಾಯು ದ್ಯೌ=ಆಕಾಶ ವಾ = ಅಥವಾ ಏಷಾಂ=ಇವುಗಳ ಸಾಕ್ಷಿಣಂ+ಆತ್ಮಾನಂ=ಸಾಕ್ಷಿ ಆತ್ಮವನ್ನು ಚಿದ್ರೂಪಂ=ಚಿತ್+ರೂಪಂ=ಚಿತ್ ರೂಪವನ್ನು ವಿದ್ಧಿ = ತಿಳಿದುಕೋ
ಅನುವಾದ
ನೀನು ಭೂಮಿ, ನೀರು, ಬೆಂಕಿ, ಗಾಳಿ, ಆಕಾಶ ಈ ಪಂಚಭೂತಗಳಿಂದ ತುಂಬಿದವನಲ್ಲ. ಮುಕ್ತಿಯನ್ನು ಗಳಿಸಲು, ನೀನು ಇವೆಲ್ಲವುಗಳ ಸಾಕ್ಷಿ ಹಾಗೂ ಚಿತ್ (ಪ್ರಜ್ಞಾ) ರೂಪನು ಎಂಬ ಮಾತನ್ನು ತಿಳಿದುಕೋ .
ಈ ಶರೀರ ಪಂಚಭೂತಗಳಿಂದ ಮಾಡಲ್ಪಟ್ಟಿದೆ. ಆದರೆ ನಾವು ಶರೀರವೂ ಅಲ್ಲ - ಪಂಚಭೂತಗಳೂ ಅಲ್ಲ. ಈ ಶರೀರದ ಸಾಕ್ಷಿ ಮಾತ್ರ.
ಯದಿ: ಒಂದು ವೇಳೆ ದೇಹಂ=ದೇಹವನ್ನು ಪೃಥಕ್ ಕೃತ್ಯ = ಬೇರೆ ಮಾಡಿ ಚಿತಿ=ಚಿತ್ತದಲ್ಲಿ ವಿಶ್ರಾಮ್ಯ=ವಿಶ್ರಮಿಸಿ ತಿಷ್ಠಸಿ = ನಿಂತುಕೊಂಡರೆ ಅಧುನಾ+ಏವ = ಈಗಲೇ ಸುಖೀ=ಸುಖಿ ಶಾಂತಃ=ಶಾಂತನು ಬಂಧಮುಕ್ತಃ = ಬಂಧನದಿಂದ ಮುಕ್ತನು ಭವಿಷ್ಯಸಿ=ಆಗುತ್ತೀಯ
ಅನುವಾದ
ನಿನ್ನನ್ನು ನೀನು ದೇಹದಿಂದ ಬೇರ್ಪಡಿಸಿ ಚಿತ್ತದಲ್ಲಿ ಸ್ಥಾಪಿಸಿಕೊಂಡರೆ, ಈಗಿಂದೀಗಲೇ ನೀನು ಸುಖಿ, ಶಾಂತನು ಮತ್ತು ಬಂಧಮುಕ್ತನಾಗುತ್ತೀಯ.
ನೋಡಿ, ಎಷ್ಟು ಸರಳ ಮಾರ್ಗ - ನಾವು ಶರೀರವಲ್ಲ - ಅಹಂಕಾರವಲ್ಲ - ಬುದ್ಧಿ ಅಲ್ಲ - ಅವೆಲ್ಲವನ್ನು ನೋಡುತ್ತಿರುವವರು ಎಂದು ಅರಿತಾಗ, ಎಲ್ಲ ನೋವುಗಳು, ದುಃಖ ದುಮ್ಮಾನಗಳು ದೂರವಾಗ ಸುಖ-ಶಾಂತಿಯನ್ನು ಪಡೆಯತ್ತೇವೆ. ನಾವು ಪುಸ್ತಕ ಓದುವಾಗ ಅಥವಾ ಸಿನಿಮಾ ನೋಡುವಾಗ ಅಲ್ಲಿ ಆಗುವ ಸಾವು-ನೋವುಗಳು ನಮಗೆ ತಾಗುತ್ತವೆಯೇ? ಇಲ್ಲ ತಾನೇ, ಹಾಗೇ ಈ ಶರೀರವನ್ನೂ ನಾವು ಸಾಕ್ಷಿಯಂತೆ ವೀಕ್ಷಸಿದರೆ ಯಾವು ನೋವುಗಳಿಲ್ಲದೆ ಶಾಂತಿ ಹೊಂದುತ್ತೇವೆ.
ತ್ವಂ=ನೀನು ವಿಪ್ರ+ಆದಿಕ=ಬ್ರಾಹ್ಮಣ ಇತ್ಯಾದಿ ವರ್ಣಃ ನ =ವರ್ಣದವನಲ್ಲ ಆಶ್ರಮೀ ನ=ಆಶ್ರಮಿಯಲ್ಲ ಅಕ್ಷಗೋಚರಃ ನ=ಕಣ್ಣಿಗೆ ಗೋಚರನಲ್ಲ ಅಸಂಗಃ+ಅಸಿ=ನಿಸ್ಸಂಗನಾಗಿರುವೆ ನಿರಾಕಾರಃ=ನಿರಾಕಾರನು ಸುಖೀ ಭವ =ಸುಖಿಯಾಗು
ಅನುವಾದ:
ನೀನು ಬ್ರಾಹ್ಮಣನಲ್ಲ, ಅಥವಾ ಬೇರೆ ಯಾವುದೇ ಜಾತಿ ವರ್ಣದವನಲ್ಲ, ಯಾವುದೇ ಆಶ್ರಮದವನಲ್ಲ (ಬ್ರಹ್ಮಚರ್ಯ, ಗ್ರಹಸ್ಥ ಇತ್ಯಾದಿ). ನೀನು ಕಣ್ಣಿಗೆ ಕಾಣುವವನಲ್ಲ. ನೀನು ಅಸಂಗನು ಹಾಗೂ ನಿರಾಕಾರನು. ನೀನು ವಿಶ್ವದ - ಎಲ್ಲದರ ಸಾಕ್ಷಿ. (ಇದನ್ನು ತಿಳಿದು) ಸಂತೋಷದಿಂದಿರು.
ನಾವು ನಾಟಕದಲ್ಲಿ ರಾಜನ ಪಾತ್ರ ಮಾಡಿದಾಗ ರಾಜನಾಗುವೆವಾ? ಅಥಾವಾ ಭಿಕಾರಿಯ ಪಾತ್ರ ಮಾಡಿದಾಗ ಭಿಕಾರಿಯಾಗುತ್ತೇವಾ? ಚಿಕ್ಕ ಮಗುವಿನ ಪಾತ್ರ ಮಾಡಿದರ ಬಾಲಕರಾಗುತ್ತೇವಾ? ಹಾಗೆಯೇ ನಮ್ಮ ಉಪಾಧಿಗಳು ನಾವಲ್ಲ. ನಾವು ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರರಲ್ಲ, ಬಾಲಕ,ಯುವಕ, ಪ್ರೌಢ, ಮುದುಕರಲ್ಲ. ನಮಗೆ ಯಾವ ಸಂಗಗಳಿಲ್ಲ - ಆಕಾರಗಳಿಲ್ಲ.
"ನಾನು ಒಂದು ಕಾಲದಲ್ಲಿ ಬಾಲಕನ ಪಾತ್ರ ಮಾಡಿದ್ದೆ - ಆಗ ಬಹಳ ಕುಣಿದಾಡುತ್ತಿದ್ದೆ - ಆಗ ಸಂತೋಷದಲ್ಲಿದ್ದೆ" ಎಂದುಕೊಳ್ಳುತ್ತೇವಲ್ಲ - ಅದೇ ರೀತಿ ನಾನು ಈ ಶರೀರದ ಸಾಕ್ಷಿ - ಶರೀರಕ್ಕೆ ಈ ಸುಖ-ಸಂತೋಷ ದುಃಖ-ದುಮ್ಮಾನಗಳು. ಸಾಕ್ಷಿಯಾದ ನನಗಲ್ಲ - ಎಂಬ ಮಾತನ್ನು ತಿಳಿದು ಸಮಾಧಾನ ಹೊಂದು.
ಶಬ್ದಾರ್ಥ
ಧರ್ಮ+ಅಧರ್ಮಃ= ಧರ್ಮ ಅಧರ್ಮಗಳು ಸುಖಂ ದುಃಖಂ = ಸುಖ ದುಃಖಗಳು ಮಾನಸಾನಿ=ಮನಸ್ಸಿನವೇ ನ ತೇ =ನಿನ್ನವು ಅಲ್ಲ ನ ಕರ್ತಾಸಿ= ಕರ್ತನಲ್ಲ ಭೋಕ್ತಾಸಿ= ಭೋಗಿಸುವವನಲ್ಲ ಮುಕ್ತ=ಮುಕ್ತನು ಏವ+ಅಸಿ = ಆಗಿದ್ದೀಯ ಸರ್ವದಾ = ಯಾವಾಗಲೂ
ಜನಕ ಉವಾಚ = ಜನಕನು ಹೇಳಿದನು
ಕಥಂ = ಹೇಗೆ ಜ್ಞಾನಮ್+ಅವಾಪ್ನೋತಿ = ಜ್ಞಾನವನ್ನು ಪಡೆಯಬೇಕು ಮುಕ್ತಿ = ಮೋಕ್ಷ ಭವಿಷ್ಯತಿ = ಆಗುತ್ತದೆ ವೈರಾಗ್ಯ = ವೈರಾಗ್ಯ ಚ=ಮತ್ತು ಪ್ರಾಪ್ತಂ+ಏತತ್ = ಪಡೆಯತಕ್ಕದ್ದು , ಇದನ್ನು ಬ್ರೂಹಿ=ಹೇಳು ಮಮ=ನನ್ನ. ಪ್ರಭೋ = ಪ್ರಭುವೇ
ಅನುವಾದ
ಜನಕ ಹೇಳಿದನು.
ಜ್ಞಾನವನ್ನು ಹೇಗೆ ಸಂಪಾದಿಸಬೇಕು? ಮುಕ್ತಿಯನ್ನು ಹೇಗೆ ಪಡೆಯಬೇಕು? ವೈರಾಗ್ಯವನ್ನು ಪಡೆಯುವದು ಹೇಗೆ? ಪ್ರಭೂ, ಇದನ್ನು ನನಗೆ ತಿಳಿಸಿಕೊಡಿ.
ಜನಕನು ನಮ್ಮೆಲ್ಲರ ಮನಸ್ಸಿನಲ್ಲಿರುವ ಪ್ರಶ್ನೆಯನ್ನೇ ಕೇಳುತ್ತಿದ್ದಾನೆ - ಜ್ಞಾನ ಪಡೆಯುವದು ಹೇಗೆ - ಅಧ್ಯಾತ್ಮ ಜ್ಞಾನ - ಕಬ್ಬಿಣದ ಕಡಲೆ - ಅದನ್ನು ತಿಳಿಯುವದು ಹೇಗೆ? ನಂತರ ಮೋಕ್ಷ ಪಡೆಯುವದು ಹೇಗೆ? ಈ ಸುಖ-ದುಃಖಗಳಿಂದ, ಹುಟ್ಟು-ಸಾವುಗಳಿಂದ, ಜರಾ-ಮೃತ್ಯುಗಳಿಂದ ಹೇಗೆ ಪಾರಾಗುವದು? ನಾನು-ನನ್ನದು ಎಂಬ ಆಶಾ-ಪಾಶದಿಂದ ಹೊರ ಬರುವದು ಹೇಗೆ?
ಅಷ್ಟಾವಕ್ರ ಉವಾಚ ..
ಮುಕ್ತಿಮಿಚ್ಛಸಿ ಚೇತ್ತಾತ ವಿಷಯಾನ್ ವಿಷವತ್ತ್ಯಜ .
ಕ್ಷಮಾರ್ಜವದಯಾತೋಷಸತ್ಯಂ ಪೀಯೂಷವದ್ ಭಜ .. 1-2..
ಮುಕ್ತಿಮಿಚ್ಛಸಿ ಚೇತ್ತಾತ ವಿಷಯಾನ್ ವಿಷವತ್ತ್ಯಜ .
ಕ್ಷಮಾರ್ಜವದಯಾತೋಷಸತ್ಯಂ ಪೀಯೂಷವದ್ ಭಜ .. 1-2..
ಶಬ್ದಾರ್ಥ
ಮುಕ್ತಿಂ = ಮುಕ್ತಿಯನ್ನು ಇಚ್ಛಸಿ=ಇಚ್ಛಿಸುತ್ತೀಯ ಚೇತ್= ಒಂದು ವೇಳೆ ತಾತ=ಮಗುವೇ ವಿಷಯಾನ್=ವಿಷಯಗಳನ್ನು ವಿಷವತ್+ತ್ಯಜ = ವಿಷದಂತೆ ತ್ಯಜಿಸು ಕ್ಷಮಾ+ಆರ್ಜವ+ದಯಾ+ತೋಷ+ಸತ್ಯಂ=ಕ್ಷಮೆ, ಪ್ರಾಮಾಣಿಕತೆ, ದಯೆ, ತೃಪ್ತಿ , ಸತ್ಯ ಇವುಗಳನ್ನು ಪೀಯೂಷವತ್+ಭಜ = ಅಮೃತದಂತೆ ಭಜಿಸು.
ಅನುವಾದ
ಅಷ್ಟಾವಕ್ರ ಹೇಳಿದನು:
ನೀನು ಮುಕ್ತಿ ಪಡೆಯಬೇಕೆಂಬ ಆಸೆ ಇದ್ದರೆ ವಿಷಯಗಳನ್ನು(ಕಾಮ, ಕ್ರೋಧ ಇತ್ಯಾದಿ) ವಿಷದಂತೆ ತ್ಯಜಿಸು. ಕ್ಷಮೆ, ಪ್ರಾಮಾಣಿಕತೆ, ದಯೆ ಸತ್ಯ ಮತ್ತು ಸಮಾಧಾನಗಳನ್ನು ಅಮೃತದಂತೆ ಆರಾಧಿಸು.
ಅರಿ ಷಡ್ವರ್ಗಗಳು - ಕಾಮ, ಕ್ರೋಧ, ಮದ, ಮಾತ್ಸರ್ಯ, ಲೋಭ, ಮೋಹ ಈ ಶತ್ರುಗಳು ನಮ್ಮೆಲ್ಲ ಸಮಸ್ಯೆಗಳಿಗೆ, ನಮ್ಮೆಲ್ಲ ಬಂಧನಗಳಿಗೆ ಕಾರಣ. ಇವುಗಳ ಉಗಮ ಇಂದ್ರಿಯಗಳಿಂದ. ಈ ವಿಷಯೇಂದ್ರಿಯಗಳು ವಿಷದಷ್ಟು ಭಯಾನಕ. ವಿಷದಿಂದ ಮಾರು ದೂರ ಇರುವಂತೆ ಈ ಇಂದ್ರಿಯ ಸುಖಗಳನ್ನು ತ್ಯಜಿಸು. ಕ್ಷಮೆ, ಪ್ರಾಮಾಣಿಕತೆ, ದಯೆ, ತೃಪ್ತಿ , ಸತ್ಯ ಇವು ಅಮೃತ ಸಮಾನ ಎಂದು ತಿಳಿದು ಇವುಗಳ ಮೊರೆ ಹೋಗು. ಆಗ ಮುಕ್ತಿಯ ದಾರಿ ಸರಾಗವಾಗುತ್ತದೆ.
ನ ಪೃಥ್ವೀ ನ ಜಲಂ ನಾಗ್ನಿರ್ನ ವಾಯುರ್ದ್ಯೌರ್ನ ವಾ ಭವಾನ್ .
ಏಷಾಂ ಸಾಕ್ಷಿಣಮಾತ್ಮಾನಂ ಚಿದ್ರೂಪಂ ವಿದ್ಧಿ ಮುಕ್ತಯೇ .. 1-3..
ಶಬ್ದಾರ್ಥಏಷಾಂ ಸಾಕ್ಷಿಣಮಾತ್ಮಾನಂ ಚಿದ್ರೂಪಂ ವಿದ್ಧಿ ಮುಕ್ತಯೇ .. 1-3..
ಭವಾನ್=ನೀನು ನ=ಅಲ್ಲ ಪೃಥ್ವೀ=ಭೂಮಿ ಜಲಂ=ನೀರು ಅಗ್ನಿ=ಬೆಂಕಿ ವಾಯು=ವಾಯು ದ್ಯೌ=ಆಕಾಶ ವಾ = ಅಥವಾ ಏಷಾಂ=ಇವುಗಳ ಸಾಕ್ಷಿಣಂ+ಆತ್ಮಾನಂ=ಸಾಕ್ಷಿ ಆತ್ಮವನ್ನು ಚಿದ್ರೂಪಂ=ಚಿತ್+ರೂಪಂ=ಚಿತ್ ರೂಪವನ್ನು ವಿದ್ಧಿ = ತಿಳಿದುಕೋ
ಅನುವಾದ
ನೀನು ಭೂಮಿ, ನೀರು, ಬೆಂಕಿ, ಗಾಳಿ, ಆಕಾಶ ಈ ಪಂಚಭೂತಗಳಿಂದ ತುಂಬಿದವನಲ್ಲ. ಮುಕ್ತಿಯನ್ನು ಗಳಿಸಲು, ನೀನು ಇವೆಲ್ಲವುಗಳ ಸಾಕ್ಷಿ ಹಾಗೂ ಚಿತ್ (ಪ್ರಜ್ಞಾ) ರೂಪನು ಎಂಬ ಮಾತನ್ನು ತಿಳಿದುಕೋ .
ಈ ಶರೀರ ಪಂಚಭೂತಗಳಿಂದ ಮಾಡಲ್ಪಟ್ಟಿದೆ. ಆದರೆ ನಾವು ಶರೀರವೂ ಅಲ್ಲ - ಪಂಚಭೂತಗಳೂ ಅಲ್ಲ. ಈ ಶರೀರದ ಸಾಕ್ಷಿ ಮಾತ್ರ.
ಯದಿ ದೇಹಂ ಪೃಥಕ್ ಕೃತ್ಯ ಚಿತಿ ವಿಶ್ರಾಮ್ಯ ತಿಷ್ಠಸಿ .
ಅಧುನೈವ ಸುಖೀ ಶಾಂತೋ ಬಂಧಮುಕ್ತೋ ಭವಿಷ್ಯಸಿ .. 1-4..
ಶಬ್ದಾರ್ಥಅಧುನೈವ ಸುಖೀ ಶಾಂತೋ ಬಂಧಮುಕ್ತೋ ಭವಿಷ್ಯಸಿ .. 1-4..
ಯದಿ: ಒಂದು ವೇಳೆ ದೇಹಂ=ದೇಹವನ್ನು ಪೃಥಕ್ ಕೃತ್ಯ = ಬೇರೆ ಮಾಡಿ ಚಿತಿ=ಚಿತ್ತದಲ್ಲಿ ವಿಶ್ರಾಮ್ಯ=ವಿಶ್ರಮಿಸಿ ತಿಷ್ಠಸಿ = ನಿಂತುಕೊಂಡರೆ ಅಧುನಾ+ಏವ = ಈಗಲೇ ಸುಖೀ=ಸುಖಿ ಶಾಂತಃ=ಶಾಂತನು ಬಂಧಮುಕ್ತಃ = ಬಂಧನದಿಂದ ಮುಕ್ತನು ಭವಿಷ್ಯಸಿ=ಆಗುತ್ತೀಯ
ಅನುವಾದ
ನಿನ್ನನ್ನು ನೀನು ದೇಹದಿಂದ ಬೇರ್ಪಡಿಸಿ ಚಿತ್ತದಲ್ಲಿ ಸ್ಥಾಪಿಸಿಕೊಂಡರೆ, ಈಗಿಂದೀಗಲೇ ನೀನು ಸುಖಿ, ಶಾಂತನು ಮತ್ತು ಬಂಧಮುಕ್ತನಾಗುತ್ತೀಯ.
ನೋಡಿ, ಎಷ್ಟು ಸರಳ ಮಾರ್ಗ - ನಾವು ಶರೀರವಲ್ಲ - ಅಹಂಕಾರವಲ್ಲ - ಬುದ್ಧಿ ಅಲ್ಲ - ಅವೆಲ್ಲವನ್ನು ನೋಡುತ್ತಿರುವವರು ಎಂದು ಅರಿತಾಗ, ಎಲ್ಲ ನೋವುಗಳು, ದುಃಖ ದುಮ್ಮಾನಗಳು ದೂರವಾಗ ಸುಖ-ಶಾಂತಿಯನ್ನು ಪಡೆಯತ್ತೇವೆ. ನಾವು ಪುಸ್ತಕ ಓದುವಾಗ ಅಥವಾ ಸಿನಿಮಾ ನೋಡುವಾಗ ಅಲ್ಲಿ ಆಗುವ ಸಾವು-ನೋವುಗಳು ನಮಗೆ ತಾಗುತ್ತವೆಯೇ? ಇಲ್ಲ ತಾನೇ, ಹಾಗೇ ಈ ಶರೀರವನ್ನೂ ನಾವು ಸಾಕ್ಷಿಯಂತೆ ವೀಕ್ಷಸಿದರೆ ಯಾವು ನೋವುಗಳಿಲ್ಲದೆ ಶಾಂತಿ ಹೊಂದುತ್ತೇವೆ.
ನ ತ್ವಂ ವಿಪ್ರಾದಿಕೋ ವರ್ಣೋ ನಾಶ್ರಮೀ ನಾಕ್ಷಗೋಚರಃ
.ಅಸಂಗೋಽಸಿ ನಿರಾಕಾರೋ ವಿಶ್ವಸಾಕ್ಷೀ ಸುಖೀ ಭವ .. 1-5..
ಶಬ್ದಾರ್ಥ.ಅಸಂಗೋಽಸಿ ನಿರಾಕಾರೋ ವಿಶ್ವಸಾಕ್ಷೀ ಸುಖೀ ಭವ .. 1-5..
ತ್ವಂ=ನೀನು ವಿಪ್ರ+ಆದಿಕ=ಬ್ರಾಹ್ಮಣ ಇತ್ಯಾದಿ ವರ್ಣಃ ನ =ವರ್ಣದವನಲ್ಲ ಆಶ್ರಮೀ ನ=ಆಶ್ರಮಿಯಲ್ಲ ಅಕ್ಷಗೋಚರಃ ನ=ಕಣ್ಣಿಗೆ ಗೋಚರನಲ್ಲ ಅಸಂಗಃ+ಅಸಿ=ನಿಸ್ಸಂಗನಾಗಿರುವೆ ನಿರಾಕಾರಃ=ನಿರಾಕಾರನು ಸುಖೀ ಭವ =ಸುಖಿಯಾಗು
ಅನುವಾದ:
ನೀನು ಬ್ರಾಹ್ಮಣನಲ್ಲ, ಅಥವಾ ಬೇರೆ ಯಾವುದೇ ಜಾತಿ ವರ್ಣದವನಲ್ಲ, ಯಾವುದೇ ಆಶ್ರಮದವನಲ್ಲ (ಬ್ರಹ್ಮಚರ್ಯ, ಗ್ರಹಸ್ಥ ಇತ್ಯಾದಿ). ನೀನು ಕಣ್ಣಿಗೆ ಕಾಣುವವನಲ್ಲ. ನೀನು ಅಸಂಗನು ಹಾಗೂ ನಿರಾಕಾರನು. ನೀನು ವಿಶ್ವದ - ಎಲ್ಲದರ ಸಾಕ್ಷಿ. (ಇದನ್ನು ತಿಳಿದು) ಸಂತೋಷದಿಂದಿರು.
ನಾವು ನಾಟಕದಲ್ಲಿ ರಾಜನ ಪಾತ್ರ ಮಾಡಿದಾಗ ರಾಜನಾಗುವೆವಾ? ಅಥಾವಾ ಭಿಕಾರಿಯ ಪಾತ್ರ ಮಾಡಿದಾಗ ಭಿಕಾರಿಯಾಗುತ್ತೇವಾ? ಚಿಕ್ಕ ಮಗುವಿನ ಪಾತ್ರ ಮಾಡಿದರ ಬಾಲಕರಾಗುತ್ತೇವಾ? ಹಾಗೆಯೇ ನಮ್ಮ ಉಪಾಧಿಗಳು ನಾವಲ್ಲ. ನಾವು ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರರಲ್ಲ, ಬಾಲಕ,ಯುವಕ, ಪ್ರೌಢ, ಮುದುಕರಲ್ಲ. ನಮಗೆ ಯಾವ ಸಂಗಗಳಿಲ್ಲ - ಆಕಾರಗಳಿಲ್ಲ.
"ನಾನು ಒಂದು ಕಾಲದಲ್ಲಿ ಬಾಲಕನ ಪಾತ್ರ ಮಾಡಿದ್ದೆ - ಆಗ ಬಹಳ ಕುಣಿದಾಡುತ್ತಿದ್ದೆ - ಆಗ ಸಂತೋಷದಲ್ಲಿದ್ದೆ" ಎಂದುಕೊಳ್ಳುತ್ತೇವಲ್ಲ - ಅದೇ ರೀತಿ ನಾನು ಈ ಶರೀರದ ಸಾಕ್ಷಿ - ಶರೀರಕ್ಕೆ ಈ ಸುಖ-ಸಂತೋಷ ದುಃಖ-ದುಮ್ಮಾನಗಳು. ಸಾಕ್ಷಿಯಾದ ನನಗಲ್ಲ - ಎಂಬ ಮಾತನ್ನು ತಿಳಿದು ಸಮಾಧಾನ ಹೊಂದು.
ಧರ್ಮಾಧರ್ಮೌ ಸುಖಂ ದುಃಖಂ ಮಾನಸಾನಿ ನ ತೇ ವಿಭೋ.
ನ ಕರ್ತಾಸಿ ನ ಭೋಕ್ತಾಸಿ ಮುಕ್ತ ಏವಾಸಿ ಸರ್ವದಾ .. 1-6..
ನ ಕರ್ತಾಸಿ ನ ಭೋಕ್ತಾಸಿ ಮುಕ್ತ ಏವಾಸಿ ಸರ್ವದಾ .. 1-6..
ಶಬ್ದಾರ್ಥ
ಧರ್ಮ+ಅಧರ್ಮಃ= ಧರ್ಮ ಅಧರ್ಮಗಳು ಸುಖಂ ದುಃಖಂ = ಸುಖ ದುಃಖಗಳು ಮಾನಸಾನಿ=ಮನಸ್ಸಿನವೇ ನ ತೇ =ನಿನ್ನವು ಅಲ್ಲ ನ ಕರ್ತಾಸಿ= ಕರ್ತನಲ್ಲ ಭೋಕ್ತಾಸಿ= ಭೋಗಿಸುವವನಲ್ಲ ಮುಕ್ತ=ಮುಕ್ತನು ಏವ+ಅಸಿ = ಆಗಿದ್ದೀಯ ಸರ್ವದಾ = ಯಾವಾಗಲೂ
ಅನುವಾದ
ಧರ್ಮ ಅಧರ್ಮಗಳು ಸುಖ ದುಃಖಗಳು ಬರಿ ಮನಸ್ಸಿಗೆ(ತಾಗುತ್ತವೆ), ನಿನಗಲ್ಲ. ಯಾಕೆಂದರೆ ನೀನು ಕರ್ಮಗಳ ಕರ್ತೃವೂ ಅಲ್ಲ, ಅವುಗಳ ಫಲವನ್ನು ಅನುಭವಿಸುವವನೂ ಅಲ್ಲ. ನೀನು ಸದಾ ಮುಕ್ತನೇ ಆಗಿದ್ದೀಯ.
ಇದು ಧರ್ಮ, ಇದು ಅಧರ್ಮ ಎಂಬುದು ಕರ್ಮಗಳನ್ನು ಮಾಡುವವನಿಗೆ ಸಂಬಂಧಿಸಿವೆ. ಹಾಗೆಯೇ ಸುಖ-ದುಃಖಗಳು ಆ ಕರ್ಮಫಲಗಳನ್ನು ಅನುಭವವಿಸುವವನಿಗೆ ಸಂಬಂಧಿಸಿವೆ. ಕರ್ಮಗಳ ಕರ್ತೃ ಶರೀರ, ಭೋಗಿಸುವದು ಶರೀರ, ಮನಸ್ಸು. ನಾವಲ್ಲ. ಹಾಗಾಗಿ ನಮಗೆ ಧರ್ಮಾಧರ್ಮಗಳು ಸುಖ-ದುಃಖಗಳು ಅಂಟಿಕೊಳ್ಳುವದೇ ಇಲ್ಲ.
ಏಕಃ = ಒಬ್ಬನೇ ದ್ರಷ್ಟ+ಅಸಿ = ಸಾಕ್ಷಿ ಇದ್ದೀಯ ಸರ್ವಸ್ಯ = ಎಲ್ಲದರ ಮುಕ್ತ+ಪ್ರಾಯಃ= ಮುಕ್ತ +ಬಹಳ ಮಟ್ಟಿಗೆ ಸರ್ವದಾ = ಯಾವಾಗಲೂ
ಅಯಮ್+ಏವ = ಇದು+ಕೇವಲ = ಇದೇ ತೇ =ನಿನ್ನ ಬಂಧಃ= ಬಂಧನ (ಕ್ಕೆ ಕಾರಣ) ದ್ರಷ್ಟಾರಂ = ಸಾಕ್ಷಿಯನ್ನು ಪಶ್ಯಸಿ+ಇತರಂ= ನೋಡುತ್ತೀಯ + ಬೇರೆಯವನಾಗಿ
ಅನುವಾದ
ನೀನು ಎಲ್ಲವನ್ನು ನೋಡುವವ ಏಕಮಾತ್ರ ಸಾಕ್ಷಿ. (ಹಾಗಾಗಿ ) ನೀನು ಎಲ್ಲವುಗಳಿಂದ ಮುಕ್ತನು. ನಿನ್ನ ದಾಸ್ಯಕ್ಕೆ ಕಾರಣ ನೀನು ನೋಡುವವನನ್ನು(ಸಾಕ್ಷಿಯನ್ನು) ಬೇರೆಯವನು ಎಂದು ತಿಳಿದುಕೊಳ್ಳುವವದು.
ನಿನ್ನನ್ನು ನೀನು ನಾನು ಸಾಕ್ಷಿ ಎಂದು ತಿಳಿದುಕೊಳ್ಳದೇ, ನಾನು ಕರ್ತೃ, ನಾನು ಭೋಗಿಸುವವನು ಎಂಬ ಭ್ರಮೆಯಿಂದ ಸಂಸಾರ ಬಂಧನಕ್ಕೊಳಗಾಗುತ್ತೀಯ.
ಶಬ್ದಾರ್ಥ
ಅಹಂ=ನಾನು ಕರ್ತೇತಿ = ಕರ್ತ+ಇತಿ = ಕರ್ತನೆಂದು ಅಹಂಮಾನಂ=ನಾನು ಎಂಬ ಹೆಮ್ಮೆ ಮಹಾಕೃಷ್ಣಾಹಿ=ಮಹಾಕೃಷ್ಣ+ಅಹಿ=ಮಹಾಕೃಷ್ಣಸರ್ಪ ದಂಶಿತಃ=ಕಚ್ಚಿಸಿಕೊಂಡವನು
ನಾಹಂ=ನ+ಅಹಂ=ನಾನಲ್ಲ ಕರ್ತೇತಿ=ಕರ್ತನೆಂದು ವಿಶ್ವಾಸ+ಅಮೃತಂ=ವಿಶ್ವಾಸದ ಅಮೃತವನ್ನು ಪೀತ್ವಾ=ಕುಡಿದು ಸುಖೀ=ಸುಖಿ ಭವ=ಆಗು
ಅನುವಾದ
ನಾನೇ ಎಲ್ಲದರ ಕರ್ತೃ ಎಂಬ ಭ್ರಮೆ ನಿನ್ನನ್ನು ಕಾಳಸರ್ಪದಂತೆ ಕಚ್ಚುತ್ತಿದೆ. ನಾನು ಕರ್ತೃವಲ್ಲ ಎಂಬ ವಿಶ್ವಾಸದ ಅಮೃತವನ್ನು ಕುಡಿದು ಸಂತೋಷದಿಂದಿರು.
ಆತ್ಮಾಭಿಮಾನ, ಅಹಂಕಾರ ಎಂಬುದು ಕಾಳಸರ್ಪದ ರೀತಿಯಲ್ಲಿ ನಮ್ಮನ್ನು ಕಚ್ಚಿ ನಮ್ಮನ್ನು ನಿರ್ಜೀವವಾಗಿಸುತ್ತಿದೆ. ಅದನ್ನು ತ್ಯಜಿಸಿ ನಾನು ಕರ್ತೃವಲ್ಲ ಕೇವಲ ಸಾಕ್ಷಿ ಎಂಬ ವಿಶ್ವಾಸದ ಅಮೃತ ಕುಡಿದಾಗ ಪುನಃ ಸುಖಿಗಳಾಗುತ್ತೇವೆ.
ಶಬ್ದಾರ್ಥ
ಏಕಃ=ಒಬ್ಬನು ವಿಶುದ್ಧ=ಪರಿಶುದ್ಧ ಬೋಧಃ+ಅಹಂ+ಇತಿ= ಪ್ರಜ್ಞೆ +ನಾನು+ಎಂದು ವಹ್ನಿನಾ=ಅಗ್ನಿಯಿಂದ ಪ್ರಜ್ವಾಲ್ಯ=ದಹಿಸಿ,ಸುಟ್ಟು ಅಜ್ಞಾನಗಹನಂ=ಗಹನವಾದ ಅಜ್ಞಾನದ ಅರಣ್ಯವನ್ನು ವೀತಶೋಕಃ=ಶೋಕರಹಿತನಾಗಿ ಸುಖೀ ಭವ = ಸುಖಿಯಾಗು
ಅನುವಾದ
ನಾನು ಪರಿಶುದ್ಧ ಪ್ರಜ್ಞೆ ಮಾತ್ರ ಎಂಬ ತಿಳುವಳಿಕೆಯ ಅಗ್ನಿಯಿಂದ ಅಜ್ಞಾನದ ಅರಣ್ಯವನ್ನು ದಹಿಸಿಬಿಡು ಮತ್ತು ಶೋಕವನ್ನು ಬಿಟ್ಟು ಸುಖಿಯಾಗು.
ಶಬ್ದಾರ್ಥ
ಯತ್ರ=ಎಲ್ಲಿ ವಿಶ್ವಮ್+ಇದಂ=ಈ ವಿಶ್ವವು ಭಾತಿ=ತೋರುತ್ತದೆ ಕಲ್ಪಿತಂ=ಕಲ್ಪನೆ ಮಾಡಿಕೊಂಡ ರಜ್ಜುಸರ್ಪವತ್= ಹಗ್ಗವು(ರಜ್ಜು=ಹಗ್ಗ) ಹಾವಿನಂತೆ ಆನಂದಪರಮಾನಂದ=ಪರಮಾನಂದ ಸ್ವರೂಪ ಸಃ = ಆ ಸ್ವರೂಪ ಬೋಧಃ+ತ್ವಂ = ಪ್ರಜ್ಞೆ ನೀನು ಸುಖಂ ಭವ=ಸುಖಿಯಾಗು
ಅನುವಾದ
ಯಾವುದರಲ್ಲಿ ಈ ವಿಶ್ವವು ಹಗ್ಗದಲ್ಲಿ ಹಾವಿನಂತೆ ಕಲ್ಪಿತವಾಗಿದೆಯೋ ಆ ಆನಂದ-ಪರಮಾನಂದವಾದ ಪ್ರಜ್ಞೆಯು ನೀನು ಎಂಬುದನ್ನು ತಿಳಿದು ಸುಖದಿಂದಿರು.
ಕತ್ತಲೆಯಲ್ಲಿ ಹಗ್ಗವನ್ನು ನೋಡಿ ಹಾವೆಂದು ಭಯದಿಂದ ನಡುಗುವ ಅದು ಬರೀ ಭ್ರಮೆ ಎಂದು ತಿಳಿದಾಗ ನಿರಾಳವಾಗುವಂತೆ, ಈ ವಿಶ್ವ, ಅದರ ಸುಖ-ದುಃಖಗಳು ಬರೀ ಭ್ರಮೆ. ನೀನು ಆನಂದರೂಪಿ ಪ್ರಜ್ಞೆ ಮಾತ್ರ ಎಂದು ತಿಳಿದು ನಿರಾಳವಾಗಿ ಸುಖಿಯಾಗು.
ಮುಕ್ತ+ಅಭಿಮಾನಿ=ತಾನು ಮುಕ್ತನೆಂದು ಭಾವಿಸುವವನು ಮುಕ್ತಃ=ಮುಕ್ತ, ಸ್ವತಂತ್ರ ಬದ್ಧಃ = ಬಂಧಿತನು ಬದ್ಧ+ಅಭಿಮಾನಿ+ಅಪಿ=ತಾನು ಬಂಧಿತನು ಎಂದು ತಿಳಿದವನು ಕೂಡ (ಅಪಿ=ಕೂಡ) ಕಿಂವದಂತಿ =ನುಡಿಗಟ್ಟು ಇಹ = ಇಲ್ಲಿ, ಈ ಜಗತ್ತಿನಲ್ಲಿ. ಸತ್ಯ+ಇಯಂ=ಸತ್ಯ ಇದು ಯಾ=ಹೇಗೆ ಮತಿ=ಮನಸ್ಸು. ಸಾ=ಹಾಗೆ ಗತಿಃ+ಭವೇತ್=ಗತಿ ಆಗುತ್ತದೆ
ಅನುವಾದ
ಯಾರು ತಾನು ಮುಕ್ತನೆಂದು ತಿಳಿದುಕೊಳ್ಳುತ್ತಾನೋ, ಅವನು ಮುಕ್ತನು. ಯಾರು ತಾನು ಬಂಧಿತನು ಎಂದು ಯೋಚಿಸುತ್ತಾನೋ, ಅವನು ಬಂಧಿತನು. “ಹೇಗೆ ಮತಿಯೋ, ಹಾಗೇ ಗತಿ” ಎಂಬ ಹೇಳಿಕೆಯು ನಿಜ.
ಧರ್ಮ ಅಧರ್ಮಗಳು ಸುಖ ದುಃಖಗಳು ಬರಿ ಮನಸ್ಸಿಗೆ(ತಾಗುತ್ತವೆ), ನಿನಗಲ್ಲ. ಯಾಕೆಂದರೆ ನೀನು ಕರ್ಮಗಳ ಕರ್ತೃವೂ ಅಲ್ಲ, ಅವುಗಳ ಫಲವನ್ನು ಅನುಭವಿಸುವವನೂ ಅಲ್ಲ. ನೀನು ಸದಾ ಮುಕ್ತನೇ ಆಗಿದ್ದೀಯ.
ಇದು ಧರ್ಮ, ಇದು ಅಧರ್ಮ ಎಂಬುದು ಕರ್ಮಗಳನ್ನು ಮಾಡುವವನಿಗೆ ಸಂಬಂಧಿಸಿವೆ. ಹಾಗೆಯೇ ಸುಖ-ದುಃಖಗಳು ಆ ಕರ್ಮಫಲಗಳನ್ನು ಅನುಭವವಿಸುವವನಿಗೆ ಸಂಬಂಧಿಸಿವೆ. ಕರ್ಮಗಳ ಕರ್ತೃ ಶರೀರ, ಭೋಗಿಸುವದು ಶರೀರ, ಮನಸ್ಸು. ನಾವಲ್ಲ. ಹಾಗಾಗಿ ನಮಗೆ ಧರ್ಮಾಧರ್ಮಗಳು ಸುಖ-ದುಃಖಗಳು ಅಂಟಿಕೊಳ್ಳುವದೇ ಇಲ್ಲ.
ಏಕೋ ದ್ರಷ್ಟಾಸಿ ಸರ್ವಸ್ಯ ಮುಕ್ತಪ್ರಾಯೋಽಸಿ ಸರ್ವದಾ .
ಅಯಮೇವ ಹಿ ತೇ ಬಂಧೋ ದ್ರಷ್ಟಾರಂ ಪಶ್ಯಸೀತರಂ .. 1-7..
ಶಬ್ದಾರ್ಥಅಯಮೇವ ಹಿ ತೇ ಬಂಧೋ ದ್ರಷ್ಟಾರಂ ಪಶ್ಯಸೀತರಂ .. 1-7..
ಏಕಃ = ಒಬ್ಬನೇ ದ್ರಷ್ಟ+ಅಸಿ = ಸಾಕ್ಷಿ ಇದ್ದೀಯ ಸರ್ವಸ್ಯ = ಎಲ್ಲದರ ಮುಕ್ತ+ಪ್ರಾಯಃ= ಮುಕ್ತ +ಬಹಳ ಮಟ್ಟಿಗೆ ಸರ್ವದಾ = ಯಾವಾಗಲೂ
ಅಯಮ್+ಏವ = ಇದು+ಕೇವಲ = ಇದೇ ತೇ =ನಿನ್ನ ಬಂಧಃ= ಬಂಧನ (ಕ್ಕೆ ಕಾರಣ) ದ್ರಷ್ಟಾರಂ = ಸಾಕ್ಷಿಯನ್ನು ಪಶ್ಯಸಿ+ಇತರಂ= ನೋಡುತ್ತೀಯ + ಬೇರೆಯವನಾಗಿ
ಅನುವಾದ
ನೀನು ಎಲ್ಲವನ್ನು ನೋಡುವವ ಏಕಮಾತ್ರ ಸಾಕ್ಷಿ. (ಹಾಗಾಗಿ ) ನೀನು ಎಲ್ಲವುಗಳಿಂದ ಮುಕ್ತನು. ನಿನ್ನ ದಾಸ್ಯಕ್ಕೆ ಕಾರಣ ನೀನು ನೋಡುವವನನ್ನು(ಸಾಕ್ಷಿಯನ್ನು) ಬೇರೆಯವನು ಎಂದು ತಿಳಿದುಕೊಳ್ಳುವವದು.
ನಿನ್ನನ್ನು ನೀನು ನಾನು ಸಾಕ್ಷಿ ಎಂದು ತಿಳಿದುಕೊಳ್ಳದೇ, ನಾನು ಕರ್ತೃ, ನಾನು ಭೋಗಿಸುವವನು ಎಂಬ ಭ್ರಮೆಯಿಂದ ಸಂಸಾರ ಬಂಧನಕ್ಕೊಳಗಾಗುತ್ತೀಯ.
ಅಹಂ ಕರ್ತೇತ್ಯಹಂಮಾನಮಹಾಕೃಷ್ಣಾಹಿದಂಶಿತಃ .
ನಾಹಂ ಕರ್ತೇತಿ ವಿಶ್ವಾಸಾಮೃತಂ ಪೀತ್ವಾ ಸುಖೀ ಭವ .. 1-8..
ನಾಹಂ ಕರ್ತೇತಿ ವಿಶ್ವಾಸಾಮೃತಂ ಪೀತ್ವಾ ಸುಖೀ ಭವ .. 1-8..
ಶಬ್ದಾರ್ಥ
ಅಹಂ=ನಾನು ಕರ್ತೇತಿ = ಕರ್ತ+ಇತಿ = ಕರ್ತನೆಂದು ಅಹಂಮಾನಂ=ನಾನು ಎಂಬ ಹೆಮ್ಮೆ ಮಹಾಕೃಷ್ಣಾಹಿ=ಮಹಾಕೃಷ್ಣ+ಅಹಿ=ಮಹಾಕೃಷ್ಣಸರ್ಪ ದಂಶಿತಃ=ಕಚ್ಚಿಸಿಕೊಂಡವನು
ನಾಹಂ=ನ+ಅಹಂ=ನಾನಲ್ಲ ಕರ್ತೇತಿ=ಕರ್ತನೆಂದು ವಿಶ್ವಾಸ+ಅಮೃತಂ=ವಿಶ್ವಾಸದ ಅಮೃತವನ್ನು ಪೀತ್ವಾ=ಕುಡಿದು ಸುಖೀ=ಸುಖಿ ಭವ=ಆಗು
ಅನುವಾದ
ನಾನೇ ಎಲ್ಲದರ ಕರ್ತೃ ಎಂಬ ಭ್ರಮೆ ನಿನ್ನನ್ನು ಕಾಳಸರ್ಪದಂತೆ ಕಚ್ಚುತ್ತಿದೆ. ನಾನು ಕರ್ತೃವಲ್ಲ ಎಂಬ ವಿಶ್ವಾಸದ ಅಮೃತವನ್ನು ಕುಡಿದು ಸಂತೋಷದಿಂದಿರು.
ಆತ್ಮಾಭಿಮಾನ, ಅಹಂಕಾರ ಎಂಬುದು ಕಾಳಸರ್ಪದ ರೀತಿಯಲ್ಲಿ ನಮ್ಮನ್ನು ಕಚ್ಚಿ ನಮ್ಮನ್ನು ನಿರ್ಜೀವವಾಗಿಸುತ್ತಿದೆ. ಅದನ್ನು ತ್ಯಜಿಸಿ ನಾನು ಕರ್ತೃವಲ್ಲ ಕೇವಲ ಸಾಕ್ಷಿ ಎಂಬ ವಿಶ್ವಾಸದ ಅಮೃತ ಕುಡಿದಾಗ ಪುನಃ ಸುಖಿಗಳಾಗುತ್ತೇವೆ.
ಏಕೋ ವಿಶುದ್ಧಬೋಧೋಽಹಮಿತಿ ನಿಶ್ಚಯವಹ್ನಿನಾ .
ಪ್ರಜ್ವಾಲ್ಯಾಜ್ಞಾನಗಹನಂ ವೀತಶೋಕಃ ಸುಖೀ ಭವ .. 1-9..
ಪ್ರಜ್ವಾಲ್ಯಾಜ್ಞಾನಗಹನಂ ವೀತಶೋಕಃ ಸುಖೀ ಭವ .. 1-9..
ಶಬ್ದಾರ್ಥ
ಏಕಃ=ಒಬ್ಬನು ವಿಶುದ್ಧ=ಪರಿಶುದ್ಧ ಬೋಧಃ+ಅಹಂ+ಇತಿ= ಪ್ರಜ್ಞೆ +ನಾನು+ಎಂದು ವಹ್ನಿನಾ=ಅಗ್ನಿಯಿಂದ ಪ್ರಜ್ವಾಲ್ಯ=ದಹಿಸಿ,ಸುಟ್ಟು ಅಜ್ಞಾನಗಹನಂ=ಗಹನವಾದ ಅಜ್ಞಾನದ ಅರಣ್ಯವನ್ನು ವೀತಶೋಕಃ=ಶೋಕರಹಿತನಾಗಿ ಸುಖೀ ಭವ = ಸುಖಿಯಾಗು
ಅನುವಾದ
ನಾನು ಪರಿಶುದ್ಧ ಪ್ರಜ್ಞೆ ಮಾತ್ರ ಎಂಬ ತಿಳುವಳಿಕೆಯ ಅಗ್ನಿಯಿಂದ ಅಜ್ಞಾನದ ಅರಣ್ಯವನ್ನು ದಹಿಸಿಬಿಡು ಮತ್ತು ಶೋಕವನ್ನು ಬಿಟ್ಟು ಸುಖಿಯಾಗು.
ಯತ್ರ ವಿಶ್ವಮಿದಂ ಭಾತಿ ಕಲ್ಪಿತಂ ರಜ್ಜುಸರ್ಪವತ್ .
ಆನಂದಪರಮಾನಂದಃ ಸ ಬೋಧಸ್ತ್ವಂ ಸುಖಂ ಭವ .. 1-10..
ಆನಂದಪರಮಾನಂದಃ ಸ ಬೋಧಸ್ತ್ವಂ ಸುಖಂ ಭವ .. 1-10..
ಶಬ್ದಾರ್ಥ
ಯತ್ರ=ಎಲ್ಲಿ ವಿಶ್ವಮ್+ಇದಂ=ಈ ವಿಶ್ವವು ಭಾತಿ=ತೋರುತ್ತದೆ ಕಲ್ಪಿತಂ=ಕಲ್ಪನೆ ಮಾಡಿಕೊಂಡ ರಜ್ಜುಸರ್ಪವತ್= ಹಗ್ಗವು(ರಜ್ಜು=ಹಗ್ಗ) ಹಾವಿನಂತೆ ಆನಂದಪರಮಾನಂದ=ಪರಮಾನಂದ ಸ್ವರೂಪ ಸಃ = ಆ ಸ್ವರೂಪ ಬೋಧಃ+ತ್ವಂ = ಪ್ರಜ್ಞೆ ನೀನು ಸುಖಂ ಭವ=ಸುಖಿಯಾಗು
ಅನುವಾದ
ಯಾವುದರಲ್ಲಿ ಈ ವಿಶ್ವವು ಹಗ್ಗದಲ್ಲಿ ಹಾವಿನಂತೆ ಕಲ್ಪಿತವಾಗಿದೆಯೋ ಆ ಆನಂದ-ಪರಮಾನಂದವಾದ ಪ್ರಜ್ಞೆಯು ನೀನು ಎಂಬುದನ್ನು ತಿಳಿದು ಸುಖದಿಂದಿರು.
ಕತ್ತಲೆಯಲ್ಲಿ ಹಗ್ಗವನ್ನು ನೋಡಿ ಹಾವೆಂದು ಭಯದಿಂದ ನಡುಗುವ ಅದು ಬರೀ ಭ್ರಮೆ ಎಂದು ತಿಳಿದಾಗ ನಿರಾಳವಾಗುವಂತೆ, ಈ ವಿಶ್ವ, ಅದರ ಸುಖ-ದುಃಖಗಳು ಬರೀ ಭ್ರಮೆ. ನೀನು ಆನಂದರೂಪಿ ಪ್ರಜ್ಞೆ ಮಾತ್ರ ಎಂದು ತಿಳಿದು ನಿರಾಳವಾಗಿ ಸುಖಿಯಾಗು.
ಮುಕ್ತಾಭಿಮಾನೀ ಮುಕ್ತೋ ಹಿ ಬದ್ಧೋ ಬದ್ಧಾಭಿಮಾನ್ಯಪಿ .
ಕಿಂವದಂತೀಹ ಸತ್ಯೇಯಂ ಯಾ ಮತಿಃ ಸಾ ಗತಿರ್ಭವೇತ್ .. 1-11..
ಶಬ್ದಾರ್ಥಕಿಂವದಂತೀಹ ಸತ್ಯೇಯಂ ಯಾ ಮತಿಃ ಸಾ ಗತಿರ್ಭವೇತ್ .. 1-11..
ಮುಕ್ತ+ಅಭಿಮಾನಿ=ತಾನು ಮುಕ್ತನೆಂದು ಭಾವಿಸುವವನು ಮುಕ್ತಃ=ಮುಕ್ತ, ಸ್ವತಂತ್ರ ಬದ್ಧಃ = ಬಂಧಿತನು ಬದ್ಧ+ಅಭಿಮಾನಿ+ಅಪಿ=ತಾನು ಬಂಧಿತನು ಎಂದು ತಿಳಿದವನು ಕೂಡ (ಅಪಿ=ಕೂಡ) ಕಿಂವದಂತಿ =ನುಡಿಗಟ್ಟು ಇಹ = ಇಲ್ಲಿ, ಈ ಜಗತ್ತಿನಲ್ಲಿ. ಸತ್ಯ+ಇಯಂ=ಸತ್ಯ ಇದು ಯಾ=ಹೇಗೆ ಮತಿ=ಮನಸ್ಸು. ಸಾ=ಹಾಗೆ ಗತಿಃ+ಭವೇತ್=ಗತಿ ಆಗುತ್ತದೆ
ಅನುವಾದ
ಯಾರು ತಾನು ಮುಕ್ತನೆಂದು ತಿಳಿದುಕೊಳ್ಳುತ್ತಾನೋ, ಅವನು ಮುಕ್ತನು. ಯಾರು ತಾನು ಬಂಧಿತನು ಎಂದು ಯೋಚಿಸುತ್ತಾನೋ, ಅವನು ಬಂಧಿತನು. “ಹೇಗೆ ಮತಿಯೋ, ಹಾಗೇ ಗತಿ” ಎಂಬ ಹೇಳಿಕೆಯು ನಿಜ.
ಆತ್ಮಾ ಸಾಕ್ಷೀ ವಿಭುಃ ಪೂರ್ಣ ಏಕೋ ಮುಕ್ತಶ್ಚಿದಕ್ರಿಯಃ .
ಅಸಂಗೋ ನಿಃಸ್ಪೃಹಃ ಶಾಂತೋ ಭ್ರಮಾತ್ಸಂಸಾರವಾನಿವ .. 1-12..
ಅಸಂಗೋ ನಿಃಸ್ಪೃಹಃ ಶಾಂತೋ ಭ್ರಮಾತ್ಸಂಸಾರವಾನಿವ .. 1-12..
ಶಬ್ದಾರ್ಥ:
ಆತ್ಮಾ=ಆತ್ಮವು ಸಾಕ್ಷಿ=ಸಾಕ್ಷಿ ವಿಭುಃ=ಸರ್ವವ್ಯಾಪಿ ಪೂರ್ಣ=ಸಂಪೂರ್ಣ ಮುಕ್ತಃ=ಮುಕ್ತನು ಚಿತ್=ಪ್ರಜ್ಞೆ ಅಕ್ರಿಯಃ=ಅಕ್ರಿಯನು ಅಸಂಗಃ = ಅಸಂಗನು ನಿಃಸ್ಪೃಹಃ=ಆಸೆಯಿಲ್ಲದ ಶಾಂತಃ=ಶಾಂತ ಭ್ರಮಾತ್+ಸಂಸಾರವಾನ್+ಇವ = ಭ್ರಮೆಯಿಂದ +ಸಂಸಾರಚಕ್ರದಲ್ಲಿರುವವನು+ಎಂದು
ಅನುವಾದ:
ನೀನು ನಿಜವಾಗಿ ಸರ್ವವ್ಯಾಪಿ, ಪೂರ್ಣನು, ಅಕ್ರಿಯ ಆತ್ಮನು, ಸಾಕ್ಷಿಯು. ನೀನು ನಿಸ್ಸಂಗಿ, ಆಸೆಯಿಲ್ಲದ ಶಾಂತ ಆತ್ಮನು. ಮಾಯೆಯಿಂದ ನಿನಗೆ ಸಂಸಾರದಲ್ಲಿ ಇರುವಂತೆ ಭ್ರಮೆಯಾಗುತ್ತದೆ. ಕೂಟಸ್ಥಂ ಬೋಧಮದ್ವೈತಮಾತ್ಮಾನಂ ಪರಿಭಾವಯ .
ಆಭಾಸೋಽಹಂ ಭ್ರಮಂ ಮುಕ್ತ್ವಾ ಭಾವಂ ಬಾಹ್ಯಮಥಾಂತರಂ .. 1-13..
ಶಬ್ದಾರ್ಥ:ಆಭಾಸೋಽಹಂ ಭ್ರಮಂ ಮುಕ್ತ್ವಾ ಭಾವಂ ಬಾಹ್ಯಮಥಾಂತರಂ .. 1-13..
ಕೂಟಸ್ಥಂ=ನಿರ್ವಿಕಾರಿ ಬೋಧಂ=ಪ್ರಜ್ಞೆ ಅದ್ವೈತಂ=ಅದ್ವಿತೀಯನು ಆತ್ಮಾನಂ=ಆತ್ಮವನ್ನು ಪರಿಭಾವಯ= ಅರಿತುಕೋ ಆಭಾಸಃ=ತೋರಿಕೆಯಿಂದ ಅಹಂ=ನಾನು ಭ್ರಮಂ=ಭ್ರಮೆಯನ್ನು ಮುಕ್ತ್ವಾ = ತ್ಯಜಿಸಿ ಭಾವಂ=ಭಾವವನ್ನು ಬಾಹ್ಯಂ+ಅಥ+ಅಂತರಂ=ಬಾಹ್ಯ ಹಾಗೂ ಅಂತರಂಗದ
ಅನುವಾದ:
ನೀನು ಶರೀರ, ನೀನು ಬುದ್ಧಿ ಎಂಬ ಬಾಹ್ಯ ಅಥವಾ ಅಂತರಂಗದ ಆಭಾಸಗಳನ್ನು ಹಾಗೂ ಭ್ರಮೆಯನ್ನು ಬಿಟ್ಟು, ನೀನು ಅಚಲ, ಚಿತ್ ಸ್ವರೂಪಿ, ಅದ್ವೈತ ಆತ್ಮನೆಂದು ತಿಳಿ.
ದೇಹಾಭಿಮಾನಪಾಶೇನ ಚಿರಂ ಬದ್ಧೋಽಸಿ ಪುತ್ರಕ .
ಬೋಧೋಽಹಂ ಜ್ಞಾನಖಡ್ಗೇನ ತನ್ನಿಕೃತ್ಯ ಸುಖೀ ಭವ .. 1-14..
ಶಬ್ದಾರ್ಥ: ಬೋಧೋಽಹಂ ಜ್ಞಾನಖಡ್ಗೇನ ತನ್ನಿಕೃತ್ಯ ಸುಖೀ ಭವ .. 1-14..
ದೇಹಾಭಿಮಾನ= ಶರೀರದ ಮೋಹ ಪಾಶೇನ=ಹಗ್ಗದಿಂದ ಚಿರಂ=ಚಿರಕಾಲದಿಂದ ಬದ್ಧಃ+ಅಸಿ=ಕಟ್ಟಿಹಾಕಲ್ಪಟ್ಟಿದ್ದೀಯ ಪುತ್ರಕ = ಮಗನೇ ಬೋಧಃ+ಅಹಂ=ನಾನು ಪ್ರಜ್ಞೆ, ಬೋಧ ಖಡ್ಗೇನ=ಖಡ್ಗದಿಂದ ತತ್+ನಿಕೃತ್ಯ=ಅದನ್ನು ಕಡಿದು
ಅನುವಾದ:
ಪುತ್ರಾ, ದೇಹದ ಅಭಿಮಾನವೆಂಬ ಹಗ್ಗದಿಂದ ಚಿರಕಾಲದಿಂದ ನೀನು ಬಂಧಿತನಾಗಿರುವೆ. ನಾನು “ಪ್ರಜ್ಞೆ” ಎನ್ನುವ ಜ್ಞಾನದ ಖಡ್ಗದಿಂದ ಅದನ್ನು (ಆ ಹಗ್ಗವನ್ನು) ಕತ್ತರಿಸಿ, ಸುಖಿಯಾಗು.
ವಿವರಣೆ:
ನನ್ನದು ಈ ಶರೀರ, ಈ ಮನಸ್ಸು, ಈ ಬುದ್ಧಿ ಎಂಬ ಮೋಹದಿಂದ ಸದಾಕಾಲ ಶರೀರದ ಲಾಲನೆ-ಪಾಲನೆಯಲ್ಲಿ, ಅದರ ಸುಖ-ದುಃಖಗಳಲ್ಲಿ ಮುಳುಗಿದ್ದು ನಿನ್ನನ್ನು ನೀನೆ ಬಂಧಿಸಿಕೊಂಡಿದ್ದೀಯ. ನಾನು ಈ ಶರೀರ-ಬುದ್ಧಿ, ಮನಸ್ಸು ಯಾವುದೂ ಅಲ್ಲ, ಬರೀ ಪ್ರಜ್ಞೆ ಎಂದು ಅರಿತಾಗ, ಆ ಶೃಂಖಲೆ - ದೇಹದ ಮೋಹದ ಶೃಂಖಲೆ ತನ್ನಷ್ಟಕ್ಕೆ ಬಿಚ್ಚುತ್ತದೆ. ಆಗ ನೀನು ಸುಖಿಯಾಗುತ್ತೀಯ.
ನಿಃಸಂಗೋ ನಿಷ್ಕ್ರಿಯೋಽಸಿ ತ್ವಂ ಸ್ವಪ್ರಕಾಶೋ ನಿರಂಜನಃ .
ಅಯಮೇವ ಹಿ ತೇ ಬಂಧಃ ಸಮಾಧಿಮನುತಿಷ್ಠತಿ .. 1-15..
ಶಬ್ದಾರ್ಥ:ಅಯಮೇವ ಹಿ ತೇ ಬಂಧಃ ಸಮಾಧಿಮನುತಿಷ್ಠತಿ .. 1-15..
ನಿಃಸಂಗಃ= ವಿರಾಗಿ, ಸಂಗವಿಲ್ಲದ ನಿಷ್ಕ್ರಿಯಃ=ಕ್ರಿಯೆಯಿಲ್ಲದ ತ್ವಂ=ನೀನು ಸ್ವಪ್ರಕಾಶಃ=ಸ್ವಪ್ರಕಾಶ, ತಾನೇ ಬೆಳಕು ಸೂಸುವ ನಿರಂಜನಃ=ನಿಷ್ಕಳಂಕ ಅಯಂ+ಏವ= ಇದೇ ತೇ=ನಿನ್ನ ಬಂಧಃ=ಬಂಧನ ಸಮಾಧಿಮ್= ಸಮಾಧಿಯನ್ನು ಅನುತಿಷ್ಠತಿ=ಪ್ರಯತ್ನಿಸುತ್ತೀಯ
ಅನುವಾದ:
ನೀನು ನಿಸ್ಸಂಗಿ, ನಿಷ್ಕ್ರಿಯ, ಸ್ವಪ್ರಕಾಶಿತ, ನಿಷ್ಕಳಂಕ. ನೀನು ಇನ್ನೂ ಸಮಾಧಿಯ ಪ್ರಯತ್ನ ಮಾಡುತ್ತಿರುವದೇ ನಿನ್ನ ಬಂಧನ.
ವಿವರಣೆ:
ನೀನು ಈಗಾಗಲೇ ನಿರ್ವಿಕಲ್ಪ, ನಿರಾಕಾರ ಆತ್ಮನಾಗಿರುವಾಗ, ಧ್ಯಾನ, ಸಮಾಧಿ ಇತ್ಯಾದಿ ಪ್ರಯತ್ನಗಳನ್ನು ಮಾಡುವ ಅವಶ್ಯಕತೆ ಎಲ್ಲಿದೆ?
ತ್ವಯಾ ವ್ಯಾಪ್ತಮಿದಂ ವಿಶ್ವಂ ತ್ವಯಿ ಪ್ರೋತಂ ಯಥಾರ್ಥತಃ .
ಶುದ್ಧಬುದ್ಧಸ್ವರೂಪಸ್ತ್ವಂ ಮಾ ಗಮಃ ಕ್ಷುದ್ರಚಿತ್ತತಾಂ .. 1-16..
ಶುದ್ಧಬುದ್ಧಸ್ವರೂಪಸ್ತ್ವಂ ಮಾ ಗಮಃ ಕ್ಷುದ್ರಚಿತ್ತತಾಂ .. 1-16..
ಶಬ್ದಾರ್ಥ:
ತ್ವಯಾ=ನಿನ್ನಿಂದ ವ್ಯಾಪ್ತಂ=ವ್ಯಾಪಿಸಲ್ಪಟ್ಟ ಇದಂ=ಈ ವಿಶ್ವಂ=ವಿಶ್ವವು ತ್ವಯಿ=ನಿನ್ನಲ್ಲಿ ಪ್ರೋತಂ=ನೇಯಲ್ಪಟ್ಟಿದೆ ಯತಾರ್ಥತಃ = ನಿಜವಾಗಿ ಶುದ್ಧಬುದ್ಧಸ್ವರೂಪಃ=ಶುದ್ಧ ಪ್ರಜ್ಞಾ ಸ್ವರೂಪನು ತ್ವಂ=ನೀನು ಮಾ=ಬೇಡ ಗಮ=ಬೀಳಬೇಡ ಕ್ಷದ್ರಚಿತ್ತತಾಂ= ಸಣ್ಣ ಮನಸ್ಸಿನ (ಕ್ಷುದ್ರ =ಸಣ್ಣ ಚಿತ್ತ=ಮನಸ್ಸು)
ಅನುವಾದ:
ಈ ವಿಶ್ವ ನಿನ್ನಿಂದಲೇ ವ್ಯಾಪಿಸಿಕೊಂಡಿದೆ. ಇದು ನಿನ್ನೊಳಗೇ ನೇಯಲ್ಪಟ್ಟಿದೆ. ಶುದ್ಧ ಚೇತನ ಸ್ವರೂಪ ನೀನು. ಹಾಗಾಗಿ (ನಿನ್ನ ನೈಜ ಸ್ವರೂಪವನ್ನು ಮರೆತು) ಸಣ್ಣ ಮನಸ್ಸಿನವನಾಗಬೇಡ.
ವಿವರಣೆ:
ವಿವರಣೆ:
ನಾವು ಸ್ವಪ್ನ ಜಗತ್ತಿನಲ್ಲಿ ಕಾಣುವ ಜನರು, ಜಾಗ, ಸನ್ನಿವೇಶಗಳೆಲ್ಲ ನಮ್ಮ ಮನದ ಸೃಷ್ಟಿ - ಅವು ಯಾವವೂ ನಿಜವಲ್ಲ. ಅದೇ ರೀತಿ, ಈ ಜಗತ್ತೂ ಸಹ ನಮ್ಮ ಆತ್ಮದ ಕಲ್ಪನೆ ಮಾತ್ರ. ಹಾಗಾಗಿ ಜಗತ್ತನ್ನು ಆತ್ಮವೇ ಆವರಿಸಿಕೊಂಡಿದೆ. ಅದು ಆತ್ಮದೊಳಗೆಯೇ ನೇಯಲ್ಪಟ್ಟಿದೆ. ಇದನ್ನು ಮನದಟ್ಟು ಮಾಡಿಕೊಂಡು ನಾನು-ನನ್ನದು ಎಂಬ ಸಣ್ಣ ಬುದ್ಧಿಗಳನ್ನು ತ್ಯಜಿಸಬೇಕು.
ನಿರಪೇಕ್ಷೋ ನಿರ್ವಿಕಾರೋ ನಿರ್ಭರಃ ಶೀತಲಾಶಯಃ .
ಅಗಾಧಬುದ್ಧಿರಕ್ಷುಬ್ಧೋ ಭವ ಚಿನ್ಮಾತ್ರವಾಸನಃ .. 1-17..
ಶಬ್ದಾರ್ಥ:ಅಗಾಧಬುದ್ಧಿರಕ್ಷುಬ್ಧೋ ಭವ ಚಿನ್ಮಾತ್ರವಾಸನಃ .. 1-17..
ನಿರಪೇಕ್ಷಃ=ಅಪೇಕ್ಷೆಯಿಲ್ಲದ ನಿರ್ವಿಕಾರಃ=ವಿಕಾರವಿಲ್ಲದ ನಿರ್ಭರ=ಸಂಪೂರ್ಣ ಶೀತಲಾಶಯ=ಶಾಂತವಾದ ಅಗಾಧಬುದ್ಧಿಃ = ಅಗಾಧ ಬುದ್ಧಿ ಅಕ್ಷೋಭ್ಯಃ=ಕ್ಷೋಭೆಗೊಳ್ಳದ ಭವ=ಆಗು ಚಿನ್ಮಾತ್ರ+ವಾಸನಃ= ಚಿತ್ತದಲ್ಲಿ ಮಾತ್ರ ಆಸಕ್ತನಾದ
ಅನುವಾದ:
ನೀನು ಸಂಪೂರ್ಣನು, ನಿರ್ವಿಕಾರ, ಆಕಾರರಹಿತನು, ಶಾಂತಚಿತ್ತನು, ಅಗಾಧಬುದ್ಧಿಯುಳ್ಳವನೂ, ಪ್ರಶಾಂತನು ಆಗಿರುವೆ. ನೀನು ಚಿತ್ತದಲ್ಲಿ ಮಾತ್ರ ಆಸಕ್ತನಾಗು.
ಸಾಕಾರಮನೃತಂ ವಿದ್ಧಿ ನಿರಾಕಾರಂ ತು ನಿಶ್ಚಲಂ .
ಏತತ್ತತ್ತ್ವೋಪದೇಶೇನ ನ ಪುನರ್ಭವಸಂಭವಃ .. 1-18..
ಶಬ್ದಾರ್ಥ:ಏತತ್ತತ್ತ್ವೋಪದೇಶೇನ ನ ಪುನರ್ಭವಸಂಭವಃ .. 1-18..
ಸಾಕಾರಂ=ಆಕಾರ ಸಹಿತವಾದ (ಸ+ಆಕಾರ) ಅನೃತಂ=ಸುಳ್ಳು ವಿದ್ಧಿ = ತಿಳಿದುಕೋ ನಿಶ್ಚಲಂ=ಶಾಶ್ವತ ಏತತ್+ತತ್ವೋಪದೇಶೇನ = ಈ ತತ್ವೋಪದೇಶದಿಂದ ನ = ಅಲ್ಲ ಪುನರ್ಭವಸಂಭವ=ಪುನರ್ಜನ್ಮದ ಸಾಧ್ಯತೆ
ಅನುವಾದ:
ಸಾಕಾರವು ಸುಳ್ಳೆಂಬುದನ್ನು ತಿಳಿ. ನಿರಾಕಾರವು ನಿಶ್ಚಲ. ಈ ತತ್ವದ ಮೂಲಕ ನೀನು ಜನ್ಮಮೃತ್ಯುಗಳ ಚಕ್ರದಿಂದ ಮುಕ್ತನಾಗಬಹುದು.
ವಿವರಣೆ:
ವಿವರಣೆ:
ನಮ್ಮನ್ನು ನಾವು ಸಾಕಾರ(ಸ+ಆಕಾರ)ವೆಂದು - ನಮ್ಮ ದೇಹವೆಂದು ತಿಳಿದುಕೊಂಡು ಸಂಸಾರ ಜಾಲದಲ್ಲಿ ಸಿಲುಕಿ ನಿರಂತರ ಜನ್ಮ-ಮೃತ್ಯಗಳ ಚಕ್ರದಲ್ಲಿ ಸುತ್ತುತ್ತಲೇ ಇರುತ್ತೇವೆ. ನಾವು ಕೇವಲ ನಿರಾಕಾರವಾದ ಆತ್ಮ ಎಂದು ಅರಿತಾಗ, ಭ್ರಮೆಗಳೆಲ್ಲಾ ಹರಿದು ಮುಕ್ತರಾಗುತ್ತೇವೆ.
ಯಥಾ+ಏವ=ಹೇಗೆ ಆದರ್ಶ=ಕನ್ನಡಿ ಮಧ್ಯಸ್ಥೇ=ಮಧ್ಯದಲ್ಲಿ ರೂಪೆ=ರೂಪದಲ್ಲಿ ಅಂತೆ=ಒಳಗಡೆ ಪರಿತಃ=ಹೊರಗಡೆ ತು = ಆದರೆ ಸಃ=ಅವನು ತಥಾ+ಏವ=ಹಾಗೆಯೇ ಅಸ್ಮಿನ್=ಈ ಶರೀರೇ=ಶರೀರದಲ್ಲಿ ಅಂತಃ ಪರಿತಃ=ಒಳಗೆ ಹಾಗೂ ಹೊರಗೆ ಪರಮೇಶ್ವರಃ=ಪರಮೇಶ್ವರ
ಅನುವಾದ:
ಯಥೈವಾದರ್ಶಮಧ್ಯಸ್ಥೇ ರೂಪೇಽನ್ತಃ ಪರಿತಸ್ತು ಸಃ .
ತಥೈವಾಽಸ್ಮಿನ್ ಶರೀರೇಽನ್ತಃ ಪರಿತಃ ಪರಮೇಶ್ವರಃ .. 1-19
ಶಬ್ದಾರ್ಥ:ತಥೈವಾಽಸ್ಮಿನ್ ಶರೀರೇಽನ್ತಃ ಪರಿತಃ ಪರಮೇಶ್ವರಃ .. 1-19
ಯಥಾ+ಏವ=ಹೇಗೆ ಆದರ್ಶ=ಕನ್ನಡಿ ಮಧ್ಯಸ್ಥೇ=ಮಧ್ಯದಲ್ಲಿ ರೂಪೆ=ರೂಪದಲ್ಲಿ ಅಂತೆ=ಒಳಗಡೆ ಪರಿತಃ=ಹೊರಗಡೆ ತು = ಆದರೆ ಸಃ=ಅವನು ತಥಾ+ಏವ=ಹಾಗೆಯೇ ಅಸ್ಮಿನ್=ಈ ಶರೀರೇ=ಶರೀರದಲ್ಲಿ ಅಂತಃ ಪರಿತಃ=ಒಳಗೆ ಹಾಗೂ ಹೊರಗೆ ಪರಮೇಶ್ವರಃ=ಪರಮೇಶ್ವರ
ಅನುವಾದ:
ಹೇಗೆ ಕನ್ನಡಿಯು ತನ್ನೊಳಗೆ ಪ್ರತಿಬಿಂಬವಿದ್ದಾಗಲೂ ಇರುತ್ತದೆ ಹಾಗೂ ಯಾವುದೇ ಪ್ರತಿಬಿಂಬವಿಲ್ಲದಿದ್ದಾಗಲೂ ಇರುತ್ತದೆಯೋ, ಹಾಗೇ, ಪರಮೇಶ್ವರನು ಶರೀರದ ಒಳಗೆ ಹಾಗೂ ಹೊರಗೂ ಸಹ ಇರುತ್ತಾನೆ.
ವಿವರಣೆ:
ವಿವರಣೆ:
ಕನ್ನಡಿಯಲ್ಲಿ ಕಾಣುವ ನಮ್ಮ ಪ್ರತಿಬಿಂಬ ಮಿಥ್ಯೆ. ಕೇವಲ ಕನ್ನಡಿ ಮಾತ್ರ ಸತ್ಯ, ಪ್ರತಿಬಿಂಬವಿಲ್ಲದಿದ್ದರೂ ಕನ್ನಡಿ ಮಾತ್ರ ಯಾವಾಗಲೂ ಇರುತ್ತದೆ. ಹಾಗೆಯೇ ನಮ್ಮ ದೇಹ, ಮನಸ್ಸು ಇವೆಲ್ಲ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬದ ಹಾಗೆಯೇ ಮಿಥ್ಯೆ- ಕೇವಲ ಆತ್ಮ ಮಾತ್ರ ಸತ್ಯ.
ಏಕಂ ಸರ್ವಗತಂ ವ್ಯೋಮ ಬಹಿರಂತರ್ಯಥಾ ಘಟೇ .
ನಿತ್ಯಂ ನಿರಂತರಂ ಬ್ರಹ್ಮ ಸರ್ವಭೂತಗಣೇ ತಥಾ .. 1-20..
ಶಬ್ದಾರ್ಥ:ನಿತ್ಯಂ ನಿರಂತರಂ ಬ್ರಹ್ಮ ಸರ್ವಭೂತಗಣೇ ತಥಾ .. 1-20..
ಏಕಂ=ಏಕನು ಸರ್ವಗತಂ=ಸರ್ವವ್ಯಾಪಿ ವ್ಯೋಮ=ಆಕಾಶ ಬಹಿಃ+ಅಂತರ್ = ಹೊರಗೆ ಹಾಗೂ ಒಳಗೆ ಯಥಾ=ಹೇಗೆ ಘಟೇ=ಮಡಿಕೆಯಲ್ಲಿ ನಿತ್ಯಂ=ನಿತ್ಯನು ನಿರಂತರಂ=ಅಡೆತಡೆಯಿಲ್ಲದ
ಅನುವಾದ:
ಹೇಗೆ ಒಂದೇ ಅನಂತ ಸರ್ವವ್ಯಾಪಿ ಆಕಾಶವು ಮಡಿಕೆಯೊಳಗಿನ ಪ್ರತಿಬಿಂಬದಲ್ಲಿದ್ದಂತೆ, ಅದರ ಹೊರಗೂ ಇರುವದೋ, ಹಾಗೆಯೇ ನಿತ್ಯ ನಿರಂತರ ಬ್ರಹ್ಮನು ಸರ್ವಭೂತಗಳಲ್ಲೂ ಅಡಗಿದ್ದಾನೆ.
Comments
Post a Comment