ಪ್ರಶಾಂತತೆ ಅಷ್ಟಾವಕ್ರ ಉವಾಚ- ವಿಹಾಯ ವೈರಿಣಂ ಕಾಮಮರ್ಥಂ ಚಾನರ್ಥಸಂಕುಲಂ . ಧರ್ಮಮಪ್ಯೇತಯೋರ್ಹೇತುಂ ಸರ್ವತ್ರಾನಾದರಂ ಕುರು .. 10-1.. ವೈರಿಗಳಾದ ಕಾಮ, ಅನರ್ಥಗಳ ಸಂಕುಲವಾದ ಅರ್ಥ(ಧನ-ಕನಕ) ಮತ್ತು ಇವೆರಡಕ್ಕೂ ಹೇತುವಾದ ಧರ್ಮ (ಸತ್ಕರ್ಮ) ಈ ಮೂರನ್ನೂ ತ್ಯಜಿಸಿ, ಎಲ್ಲದರಲ್ಲೂ ಉದಾಸೀನತೆ ತೋರಿಸು. (ನಾವು ಕರ್ಮ ಮಾಡುವದು ಸಂಪತ್ತು ಪಡೆಯಲು ಮತ್ತು ಸುಖ ಪಡೆಯಲು. ಆ ಕರ್ಮವೇ ಕಾಮ, ಅರ್ಥಗಳ ಗಳಿಕೆಗೆ ಕಾರಣ. ಹಾಗಾಗಿ ಆ ಕರ್ಮವನ್ನೂ ತ್ಯಜಿಸಬೇಕು. ಮೋಕ್ಷ ಪ್ರಾಪ್ತಿಗಾಗಿ ಧರ್ಮಾರ್ಥಕಾಮಗಳೆಲ್ಲವನ್ನೂ ತ್ಯಜಿಸಿ ಅವುಗಳ ಬಗ್ಗೆ ನಿರಾಸಕ್ತಿ ಹೊಂದಬೇಕು.) ಸ್ವಪ್ನೇಂದ್ರಜಾಲವತ್ ಪಶ್ಯ ದಿನಾನಿ ತ್ರೀಣಿ ಪಂಚ ವಾ . ಮಿತ್ರಕ್ಷೇತ್ರಧನಾಗಾರದಾರದಾಯಾದಿಸಂಪದಃ .. 10-2.. ಮೂರು-ನಾಲ್ಕು ದಿನ ಬಾಳುವ ಮಿತ್ರ, ಭೂಮಿ, ಧನ, ಮನೆ, ಮಡದಿ ಈ ಐದೂ ಮೋಹಗಳನ್ನೂ ಸ್ವಪ್ನದಂತೆ, ಮಾಯಾಜಾಲದಂತೆ ನೋಡು (ಅವುಗಳನ್ನು ತ್ಯಜಿಸು). ಯತ್ರ ಯತ್ರ ಭವೇತ್ತೃಷ್ಣಾ ಸಂಸಾರಂ ವಿದ್ಧಿ ತತ್ರ ವೈ . ಪ್ರೌಢವೈರಾಗ್ಯಮಾಶ್ರಿತ್ಯ ವೀತತೃಷ್ಣಃ ಸುಖೀ ಭವ .. 10-3.. ಎಲ್ಲೆಲ್ಲಿ ಕಾಮನೆಗಳು ಉಂಟಾಗುವದೋ, ಅಲ್ಲೆಲ್ಲ ಜಗದ ಮಾಯೆಯಿದೆ ಎಂದು ತಿಳಿ. ದೃಢ ವೈರಾಗ್ಯವನ್ನು ಅವಲಂಬಿಸಿ ಆಸೆಯಿಲ್ಲದವನಾಗಿ ಸುಖಿಯಾಗು. ತೃಷ್ಣಾಮಾತ್ರಾತ್ಮಕೋ ಬಂಧಸ್ತನ್ನಾಶೋ ಮೋಕ್ಷ ಉಚ್ಯತೇ . ಭವಾಸಂಸಕ್ತಿಮಾತ್ರೇಣ ಪ್ರ...