ಆತ್ಮಜ್ಞಾನದ ಅವಲೋಕನ
ತವಾತ್ಮಜ್ಞಾನಸ್ಯ ಧೀರಸ್ಯ ಕಥಮರ್ಥಾರ್ಜನೇ ರತಿಃ .. 3-1..
ಶಬ್ದಾರ್ಥ:
ಅವಿನಾಶಿನಂ=ವಿನಾಶವಿಲ್ಲದವನನ್ನು; ಆತ್ಮಾನಂ=ಆತ್ಮನನ್ನು; ಏಕಂ=ಏಕೈಕನನ್ನು; ವಿಜ್ಞಾಯ=ತಿಳಿದು; ತತ್ತ್ವತಃ=ನಿಜ ಸ್ವರೂಪದಲ್ಲಿ; ತವ=ನಿನ್ನ; ಆತ್ಮಜ್ಞಾನಸ್ಯ=ಆತ್ಮಜ್ಞಾನಿಯ; ಧೀರಸ್ಯ=ಧೀರನ; ಕಥಂ=ಹೇಗೆ; ಅರ್ಥಾರ್ಜನೇ=ಹಣದ(ಅರ್ಥ)
ಗಳಿಕೆಯಲ್ಲಿ(ಅರ್ಜನೇ); ರತಿಃ=ಮೋಹ
ಅನುವಾದ:
ಅವಿನಾಶಿಯಾದ, ಅದ್ವೈತವಾದ ಆತ್ಮವನ್ನು ಅರಿತುಕೊಂಡಮೇಲೆ ಆತ್ಮಜ್ಞಾನಿಯಾದ ಧೀರನು, ಸಂಪತ್ತನ್ನು ಗಳಿಸುವದಲ್ಲಿ ಆಸಕ್ತಿಯನ್ನು ಹೇಗೆ ಇರಿಸಿಕೊಳ್ಳುತ್ತಾನೆ?
ವಿವರಣೆ:
ಆತ್ಮಜ್ಞಾನವನ್ನು ಹುಡುಕುತ್ತ ಜನಕನು ಅದರ ಜೊತೆಗೇ ರಾಜ್ಯಭಾರವನ್ನೂ ಮಾಡುತ್ತಿದ್ದಾನೆ. ಅದಕ್ಕಾಗಿ ಅಷ್ಟಾವಕ್ರ ಮುನಿಯು ಅವನನ್ನು ಪರೀಕ್ಷಿಸುತ್ತ ಕೇಳುತ್ತಾನೆ - ಆತ್ಮಜ್ಞಾನವನ್ನು ಪಡೆದ ಮೇಲೆಯೂ ಹೇಗೆ ಧನಸಂಪಾದನೆಯಲ್ಲಿ ಆಸಕ್ತಿ ಇರುತ್ತದೆ.
ಶುಕ್ತೇರಜ್ಞಾನತೋ ಲೋಭೋ ಯಥಾ ರಜತವಿಭ್ರಮೇ .. 3-2..
ಶಬ್ದಾರ್ಥ:
ಆತ್ಮ+ಅಜ್ಞಾನಾತ್=ಆತ್ಮದ ಅಜ್ಞಾನದಿಂದ; ಅಹೋ=ಅಹೋ; ಪ್ರೀತಿಃ=ಪ್ರೀತಿ;ವಿಷಯಭ್ರಮಗೋಚರೇ=ಭ್ರಮೆಯಾದ ವಿಷಯಗಳಲ್ಲಿ; ಶುಕ್ತೇ+ಅಜ್ಞಾನತಃ=ಚಿಪ್ಪಿನಲ್ಲಿ ಅಜ್ಞಾನದಿಂದ; ಲೋಭಃ=ಲೋಭ; ಯಥಾ=ಹೇಗೆ; ರಜತವಿಭ್ರಮೇ=ಬೆಳ್ಳಿಯೆಂದು ಭ್ರಮೆ
ಅನುವಾದ:
ಕಪ್ಪೆಚಿಪ್ಪನ್ನು ನೋಡಿ ಬೆಳ್ಳಿಯೆಂದು ಭ್ರಮೆಯಿಂದ ಮೋಹವುಂಟಾಗುವಂತೆ, ಆತ್ಮದ ಅಜ್ಞಾನದ ಭ್ರಮೆಯು ಗೋಚರವಾಗುವ ವಸ್ತುಗಳಲ್ಲಿ ಪ್ರೀತಿಯನ್ನು ಉಂಟುಮಾಡುತ್ತದೆ.
ವಿವರಣೆ:
ಅಷ್ಟಾವಕ್ರ ಮತ್ತೆ ಹೇಳುತ್ತಾನೆ - ಜನಕನ ರಾಜ್ಯ, ಧನ, ಕನಕಗಳ ಬಗ್ಗೆ ಇರುವ ಪ್ರೀತಿ ಅವುಗಳ ನಿಜ ಸ್ವರೂಪ ತಿಳಿಯದೇ ಇರುವದರಿಂದ. ಅವೆಲ್ಲವೂ ಸುಳ್ಳು, ನಮ್ಮ ಭ್ರಮೆ ಎಂದು ಅರಿವಾದ ಮೇಲೆ ಲೌಕಿಕ ವಸ್ತುಗಳ ಮೇಲೆ ಪ್ರೀತಿ ನಾಶವಾಗುತ್ತದೆ.
ಸೋಽಹಮಸ್ಮೀತಿ ವಿಜ್ಞಾಯ ಕಿಂ ದೀನ ಇವ ಧಾವಸಿ .. 3-3..
ಶಬ್ದಾರ್ಥ:
ವಿಶ್ವಂ=ವಿಶ್ವವು; ಸ್ಫುರತಿ=ಕಾಣುತ್ತದೆ; ಯತ್ರ+ಇದಂ=ಎಲ್ಲಿ ಇದು; ತರಂಗಾಃ=ಅಲೆಗಳು; ಇವ=ಹಾಗೆ; ಸಾಗರೇ=ಸಾಗರದಲ್ಲಿ; ಸಃ+ಅಹಂ+ಇತಿ=ಅವನು ನಾನು ಎಂದು; ವಿಜ್ಞಾಯ=ತಿಳಿದು; ಕಿಂ=ಯಾಕೆ; ದೀನ ಇವ=ದೀನನಂತೆ; ಧಾವಸಿ=ಓಡುತ್ತೀಯ
ಅನುವಾದ:
ಯಾರಲ್ಲಿ ಬ್ರಹ್ಮಾಂಡವು ಸಮುದ್ರದ ಮೇಲಿನ ಅಲೆಗಳಂತೆ ಕಾಣಿಸುವದೋ ಅವನೇ ನೀನು ಎಂದು ತಿಳಿದಿದ್ದರೂ, ನೀನು ಯಾಕೆ ದೀನನಂತೆ ಓಡುತ್ತೀಯ?
ವಿವರಣೆ:
ನಮ್ಮ ಎಲ್ಲ ದುಃಖ, ಭಯ, ತಲ್ಲಣಗಳಿಗೆ ಕಾರಣ ವಿಶ್ವವನ್ನು ನಮ್ಮಿಂದ ಬೇರೆಯೆಂದು ಭಾವಿಸುವುದು. ಆದರೆ ವಿಶ್ವ ಬೇರೆಯಲ್ಲ - ಆತ್ಮ ಬೇರೆಯಲ್ಲ ಎಂಬ ಮಾತು ಮನನವಾದಾಗ ಎಲ್ಲ ಚಿಂತೆಗಳೂ ಮಾಯವಾಗಿ ಸುಖ, ಶಾಂತಿ, ಸಮಾಧಾನ ದೊರೆಯುವದು.
ಉಪಸ್ಥೇಽತ್ಯಂತಸಂಸಕ್ತೋ ಮಾಲಿನ್ಯಮಧಿಗಚ್ಛತಿ .. 3-4..
ಶಬ್ದಾರ್ಥ:
ಶ್ರುತ್ವ+ಅಪಿ=ಕೇಳಿದ ಮೇಲೂ; ಶುದ್ಧ ಚೈತನ್ಯಂ=ಶುದ್ಧ ಚೈತನ್ಯ; ಆತ್ಮಾನಂ=ಆತ್ಮವನ್ನು;ಅತಿ ಸುಂದರಂ=ಅತಿ ಸುಂದರವಾದ; ಉಪಸ್ಥೇ=ಹತ್ತಿರ ಇರುವದರಲ್ಲಿ/ ಇಂದ್ರಿಯಗಳಲ್ಲಿ; ಅತ್ಯಂತ=ಬಹಳ; ಸಂಸಕ್ತಃ=ಪ್ರೀತಿಯುಳ್ಳವನಾಗಿ; ಮಾಲಿನ್ಯಂ=ಮಾಲಿನ್ಯವನ್ನು; ಅಧಿಗಚ್ಛತಿ=ಹೊಂದುತ್ತೀಯ
ಅನುವಾದ:
ನೀನು ಶುದ್ಧ ಚೈತನ್ಯನೆಂದೂ, ಆತ್ಮನೂ, ಅತಿ ಸುಂದರನೆಂದೂ ಕೇಳಿ ತಿಳಿದಮೇಲೂ, ಮಲಿನವಾದ ವಿಷಯಸುಖಗಳಲ್ಲಿ ಯಾಕೆ ಆಸಕ್ತಿ ತೋರಿಸುತ್ತಿರುವೆ? (ಇನ್ನೊಂದು ಅನುವಾದ - ತಾನು ಆತ್ಮ, ಶುದ್ಧ ಪ್ರಜ್ಞೆ ಮತ್ತು ಅತ್ಯಂತ ಸುಂದರ ಎಂದು ಕೇಳಿದ ನಂತರವೂ, ದೇಹಕ್ಕೆ ಅತಿಯಾಗಿ ಅಂಟಿಕೊಂಡಿರುವವನು ಮಾಲಿನ್ಯವನ್ನು ಪಡೆಯುತ್ತಾನೆ.)
ವಿವರಣೆ:
ರಾಜಾ ಜನಕನು ತನ್ನ ಅರಮನೆಯಲ್ಲಿ ಸರ್ವಸುಖಗಳಲ್ಲಿ ಮುಳುಗುತ್ತಾನೆ. ಆದರೆ ಆತ್ಮಜ್ಞಾನಿಗೆ ವಿಷಯಸುಖಗಳಲ್ಲಿ ಹೇಗೆ ತಾನೇ ಆಸಕ್ತಿ ಉಂಟಾಗುತ್ತದೆ. ವಿಷಯಾಸಕ್ತಿ ಮನಸ್ಸನ್ನು ಅಶುದ್ಧ ಹಾಗೂ ಮಲಿನವನ್ನಾಗಿಸುತ್ತದೆ.
ಮುನೇರ್ಜಾನತ ಆಶ್ಚರ್ಯಂ ಮಮತ್ವಮನುವರ್ತತೇ .. 3-5..
ಶಬ್ದಾರ್ಥ:
ಸರ್ವಭೂತೇಷು=ಎಲ್ಲ ಜೀವಿಗಳಲ್ಲಿ; ಚ=ಹಾಗೂ; ಆತ್ಮಾನಂ=ಆತ್ಮನನ್ನು, ತನ್ನನ್ನು; ಸರ್ವಭೂತಾನಿ=ಎಲ್ಲ ಜೀವಿಗಳನ್ನು; ಚ=ಹಾಗೂ; ಆತ್ಮನಿ=ಆತ್ಮದಲ್ಲಿ, ತನ್ನಲ್ಲಿ; ಮುನೇಃ=ಮುನಿಯ; ಜಾನತಃ=ತಿಳಿದುಕೊಂಡ; ಆಶ್ಚರ್ಯಂ=ಆಶ್ಚರ್ಯ; ಮಮತ್ವಂ=ತನ್ನತನವನ್ನು; ಅನುವರ್ತತೇ=ಮುಂದುವರಿಸುತ್ತಾನೆ
ಅನುವಾದ:
ಸರ್ವಭೂತಗಳಲ್ಲೂ ತಾನು ಇರುವಾಗ, ತನ್ನಲ್ಲಿ ಸರ್ವಭೂತಗಳೂ ಇರುವಾಗ, ಅದನ್ನು ತಿಳಿದನಂತರವೂ ಮುನಿಯು ಮಮತ್ವವನ್ನು (ನಾನು, ನನ್ನದು ಎಂಬ ಮೋಹ) ಇನ್ನೂ ಉಳಿಸಿಕೊಳ್ಳುವದು ಆಶ್ಚರ್ಯವೇ.
ವಿವರಣೆ:
ನನ್ನತನ - ಅಹಂ ಭಾವನೆ ಹೇಳುತ್ತದೆ - ಈ ಶರೀರ ನನ್ನದು, ಈ ಹೆಂಡತಿ, ಮಕ್ಕಳು ನನ್ನವು, ಈ ಮನೆ-ಮಠ ನನ್ನದು. ಅದರಿಂದ ಮೋಹ ಉಂಟಾಗುತ್ತದೆ. ಆದರೆ ಸಕಲ ಜೀವಿಗಳಲ್ಲೂ ಪರಮಾತ್ಮನೇ ಇರುವನು - ಆ ಪರಮಾತ್ಮ ಇರುವದು ತನ್ನೊಳಗೂ. ಇದನ್ನು ಅರಿತನಂತರ ಈ ಅಹಂ-ಕಾರ ಮಾಯವಾಗಬೇಕಲ್ಲ. ಹೀಗೆಂದು ಅಷ್ಟಾವಕ್ರ ರಾಜಾ ಜನಕನು ಇನ್ನೂ ರಾಜ್ಯಭಾರವನ್ನು ಮುಂದುವರಿಸುವದರ ಬಗ್ಗೆ ಹೇಳುತ್ತಾನೆ.
ಆಶ್ಚರ್ಯಂ ಕಾಮವಶಗೋ ವಿಕಲಃ ಕೇಲಿಶಿಕ್ಷಯಾ .. 3-6..
ಆಶ್ಚರ್ಯಂ ಕಾಮಮಾಕಾಂಕ್ಷೇತ್ ಕಾಲಮಂತಮನುಶ್ರಿತಃ .. 3-7..
ಆಶ್ಚರ್ಯಂ ಮೋಕ್ಷಕಾಮಸ್ಯ ಮೋಕ್ಷಾದ್ ಏವ ವಿಭೀಷಿಕಾ .. 3-8..
ಅಮುತ್ರ=ಅಲ್ಲಿ, ಪರಲೋಕದಲ್ಲಿ ವಿಭೀಷಿಕಾ = ಭಯಭೀತ
ಇಹ-ಪರಗಳಲ್ಲಿ ವಿರಕ್ತನಾದವನು, ನಿತ್ಯಾನಿತ್ಯಗಳ ವಿವೇಕವನ್ನು ತಿಳಿದವನು, ಮೋಕ್ಷದ ವಾಂಛೆಯನ್ನು ಹೊಂದಿರುವವನು, ಮೋಕ್ಷದಿಂದಲೇ ಭಯ-ಭೀತನಾಗುವದು ಆಶ್ಚರ್ಯವೇ ಸರಿ.ಆತ್ಮಾನಂ ಕೇವಲಂ ಪಶ್ಯನ್ ನ ತುಷ್ಯತಿ ನ ಕುಪ್ಯತಿ .. 3-9..
ತುಷ್ಯತಿ=ಸಂತೋಷ ಪಡುತ್ತಾನೆ ಕುಪ್ಯತಿ=ಕೋಪಗೊಳ್ಳುತ್ತಾನೆ
ಧೀರನಾದರೋ ಭೋಗದಲ್ಲಿದ್ದರೂ, ಅಥವಾ ಪೀಡೆಯಲ್ಲಿದ್ದರೂ, ಕೇವಲ ಆತ್ಮವನ್ನಷ್ಟೇ ನೋಡುತ್ತಾ, ಸಂತಸ ಪಡುವದೂ ಇಲ್ಲ, ಕೋಪಿಸಿಕೊಳ್ಳುವದೂ ಇಲ್ಲ.ಸಂಸ್ತವೇ ಚಾಪಿ ನಿಂದಾಯಾಂ ಕಥಂ ಕ್ಷುಭ್ಯೇತ್ ಮಹಾಶಯಃ .. 3-10..
ಸಂಸ್ತವೇ=ಹೊಗಳುವಿಕೆಯಲ್ಲಿ ಚೇಷ್ಟಮಾನಂ=ನೋಡುತ್ತ, ನಟಿಸುತ್ತ
ತನ್ನ ಶರೀರವನ್ನು ಅನ್ಯರ ಶರೀರದಂತೆ ಭಾವಿಸಿ ಸಾಕ್ಷಿಯಂತೆ ನೋಡುತ್ತಿರುವ ಮಹಾನುಭಾವನು, ಹೊಗಳುವಿಕೆಯಿಂದ ಅಥವಾ ನಿಂದೆಯಿಂದ, ಹೇಗೆ ತಾನೇ ಕ್ಷೋಭೆಗೊಳ್ಳುತ್ತಾನೆ?ಅಪಿ ಸನ್ನಿಹಿತೇ ಮೃತ್ಯೌ ಕಥಂ ತ್ರಸ್ಯತಿ ಧೀರಧೀಃ .. 3-11..
ವಿಗತಕೌತುಕಃ=ಕೌತುಕವಿಲ್ಲದೆ ತ್ರಸ್ಯತಿ=ಭಯದಿಂದ ನಡುಗುತ್ತಾನೆ
ಈ ವಿಶ್ವವೇ ಬರೀ ಮಾಯೆಯೆಂದು ತಿಳಿದು, ಯಾವ ಆಸಕ್ತಿಯನ್ನೂ ಹೊಂದದೇ ಇರುವ ಧೀರ ಮಾನವನು, ಮೃತ್ಯುವು ಸನಿಹವಾದಾಗ ಕೂಡ ಹೇಗೆ ತಾನೇ ಭಯಪಡುತ್ತಾನೆ?ತಸ್ಯಾತ್ಮಜ್ಞಾನತೃಪ್ತಸ್ಯ ತುಲನಾ ಕೇನ ಜಾಯತೇ .. 3-12..
ಯಾವ ಮಹಾತ್ಮನು ನಿರಾಶೆಯಲ್ಲೂ ಸಹ ಸ್ಥಿತಪ್ರಜ್ಞನಾಗಿರುತ್ತಾನೋ, ಆತ್ಮಜ್ಞಾನದಿಂದ ತೃಪ್ತನಾಗಿರುತ್ತಾನೋ, ಅಂತಹವನನ್ನು ಯಾರಿಗೂ ಹೋಲಿಸಲಾಗುವದಿಲ್ಲ.
ಇದಂ ಗ್ರಾಹ್ಯಮಿದಂ ತ್ಯಾಜ್ಯಂ ಸ ಕಿಂ ಪಶ್ಯತಿ ಧೀರಧೀಃ .. 3-13..
ಯದೃಚ್ಛಯಾಗತೋ ಭೋಗೋ ನ ದುಃಖಾಯ ನ ತುಷ್ಟಯೇ .. 3-14..
ಸಂಪೂರ್ಣ ಕೃತಿಯನ್ನು ಡೌನ್ ಲೋಡ್ ಮಾಡಿ.
Comments
Post a Comment