Skip to main content

ಅಷ್ಟಾವಕ್ರಗೀತಾ - ೧೧

ಜ್ಞಾನ

 ಈ ಅಧ್ಯಾಯದಲ್ಲಿ ಅಷ್ಟಾವಕ್ರನು ಹೇಗೆ ಆತ್ಮಜ್ಞಾನ ಪಡೆದ ನಂತರ ಮನುಷ್ಯನು ಹೇಗೆ ಶಾಂತನು ಹಾಗೂ ಸುಖಿಯಾಗುತ್ತಾನೆ ಎಂದು ವಿವರಿಸುತ್ತಾನೆ. ಎಲ್ಲವನ್ನೂ ನಿರ್ಮಿಸಿದ ಆ ದೇವರು ಎಲ್ಲದರಲ್ಲೂ ಅಡಕವಾಗಿದ್ದಾನೆ. ಈ ಸತ್ಯವನ್ನು ಅರಿತಮೇಲೆ ಮನುಷ್ಯ ಎಲ್ಲಾ ಆಸೆಗಳನ್ನೂ ತೋರೆದು ಶಾಂತನಾಗುತ್ತಾನೆ. ವಸ್ತುಗಳ ಕ್ಷಣಿಕತೆಯನ್ನು ಅರಿತು ಅವುಗಳ ಮೇಲಿನ ಮೋಹವನ್ನು ತ್ಯಜಿಸುತ್ತಾನೆ. ಈ ಬಣ್ಣಬಣ್ಣದ ಪ್ರಪಂಚ ನಿಜವಾಗಿ ನೋಡಿದರೆ ಬರೀ ಶೂನ್ಯ ಎಂಬ ಸತ್ಯ ಅರಿತು ಸುಖಿಯಾಗುತ್ತಾನೆ.

ಅಷ್ಟಾವಕ್ರ ಉವಾಚ ..  

ಭಾವಾಭಾವವಿಕಾರಶ್ಚ ಸ್ವಭಾವಾದಿತಿ ನಿಶ್ಚಯೀ .
ನಿರ್ವಿಕಾರೋ ಗತಕ್ಲೇಶಃ ಸುಖೇನೈವೋಪಶಾಮ್ಯತಿ .. 11-1..
 

ಇರುವುದು, ಇಲ್ಲದಿರುವದು ಇತ್ಯಾದಿ ಬದಲಾವಣೆಗಳು ವಸ್ತುಗಳ ಸ್ವಭಾವ ಎಂದು ತಿಳಿದವನು, ನಿರ್ವಿಕಾರನಾಗಿ, ದುಃಖರಹಿತನಾಗಿ ಸುಖ-ಸಮಾಧಾನವನ್ನು ಹೊಂದುತ್ತಾನೆ.

ಜಗತ್ತಿನ ಸರ್ವ ವಸ್ತುಗಳೂ ಅಶಾಶ್ವತ, ಕ್ಷಣಿಕ ಎಂದು ಮನನ ಮಾಡಿಕೊಂಡುವನು ಐಹಿಕ ವಸ್ತುಗಳ ಬಗ್ಗೆ ಆಸೆ ಪಡುವದಿಲ್ಲ - ಅವು ಸಿಗದಾಗ ದುಃಖ ಪಡುವದೂ ಇಲ್ಲ. ಸುಖ-ಶಾಂತಿ ಹೊಂದುತ್ತಾನೆ. 

ಈಶ್ವರಃ ಸರ್ವನಿರ್ಮಾತಾ ನೇಹಾನ್ಯ ಇತಿ ನಿಶ್ಚಯೀ .
ಅಂತರ್ಗಲಿತಸರ್ವಾಶಃ ಶಾಂತಃ ಕ್ವಾಪಿ ನ ಸಜ್ಜತೇ .. 11-2..
 

ಈಶ್ವರನು ಸಕಲವನ್ನೂ ನಿರ್ಮಿಸಿದವನು. ಅವನ ಹೊರತು ಇಲ್ಲಿ ಏನೂ ಇಲ್ಲ ಎಂದು ನಿಶ್ಚಯವಾಗಿ ತಿಳಿದವನು, ಎಲ್ಲ ಆಸೆಗಳನ್ನು ತ್ಯಜಿಸಿ, ಯಾವುದಕ್ಕೂ ಅಂಟಿಕೊಳ್ಳವದೆ ಶಾಂತನಾಗಿರುತ್ತಾನೆ.

ಆಪದಃ ಸಂಪದಃ ಕಾಲೇ ದೈವಾದೇವೇತಿ ನಿಶ್ಚಯೀ .
ತೃಪ್ತಃ ಸ್ವಸ್ಥೇಂದ್ರಿಯೋ ನಿತ್ಯಂ ನ ವಾಂಛತಿ ನ ಶೋಚತಿ .. 11-3..
 

ಆಪತ್ತುಗಳು ಮತ್ತು ಸುಖ-ಸಂತೋಷಗಳು ತನಗೆ ಬರುವದು ವಿಧಿಯ ಮಾಯೆಯಿಂದಲೇ ಎಂದು ದೃಢವಾಗಿ ಅರಿತವನು, ತೃಪ್ತನಾಗಿ, ಇಂದ್ರಿಯ ನಿಗ್ರಹನಾಗಿ ಇರುತ್ತಾನೆ. ಅವನು ಏನನ್ನೂ ಆಶಿಸುವದೂ ಇಲ್ಲ, ಏನನ್ನೂ ಶೋಕಿಸುವದೂ ಇಲ್ಲ.

ಸುಖದುಃಖೇ ಜನ್ಮಮೃತ್ಯೂ ದೈವಾದೇವೇತಿ ನಿಶ್ಚಯೀ .
ಸಾಧ್ಯಾದರ್ಶೀ ನಿರಾಯಾಸಃ ಕುರ್ವನ್ನಪಿ ನ ಲಿಪ್ಯತೇ .. 11-4..
 

ಸುಖದುಃಖಗಳು, ಜನ್ಮ ಮೃತ್ಯು ಇತ್ಯಾದಿಗಳು ವಿಧಿಯ ಮಾಯೆ ಎಂದು ನಿಶ್ಚಯವಾಗಿ ತಿಳಿದವನು, ಬೇಕೆಂಬುದೆಲ್ಲಾ ಅಸಾಧ್ಯವೆಂದು ತಿಳಿದು, ನಿರಾಯಾಸನಾಗುತ್ತಾನೆ. ಮತ್ತು ಕರ್ಮಗಳನ್ನು ಮಾಡುತ್ತಿದ್ದರೂ ಅವುಗಳಿಗೆ ಅಂಟಿಕೊಳ್ಳುವದಿಲ್ಲ.

ಚಿಂತಯಾ ಜಾಯತೇ ದುಃಖಂ ನಾನ್ಯಥೇಹೇತಿ ನಿಶ್ಚಯೀ .
ತಯಾ ಹೀನಃ ಸುಖೀ ಶಾಂತಃ ಸರ್ವತ್ರ ಗಲಿತಸ್ಪೃಹಃ .. 11-5..
 

ಚಿಂತೆಯಿಂದ ದುಃಖ ಉಂಟಾಗುವುದೇ ವಿನಾ ಇನ್ನೇನೂ ಸಿಗುವದಿಲ್ಲ ಎಂಬುದನ್ನು ನಿಶ್ಚಯವಾಗಿ ತಿಳಿದವನು, ಚಿಂತಾಹೀನನಾಗಿ, ಸುಖಿಯಾಗಿ, ಶಾಂತನಾಗಿ, ನಿಸ್ಪೃಹನಾಗುತ್ತಾನೆ. (ಆಸೆಯಿಲ್ಲದವನಾಗುತ್ತಾನೆ)

ನಾಹಂ ದೇಹೋ ನ ಮೇ ದೇಹೋ ಬೋಧೋಽಹಮಿತಿ ನಿಶ್ಚಯೀ .
ಕೈವಲ್ಯಮಿವ ಸಂಪ್ರಾಪ್ತೋ ನ ಸ್ಮರತ್ಯಕೃತಂ ಕೃತಂ .. 11-6..
 

ನಾನು ದೇಹವಲ್ಲ. ದೇಹ ನನ್ನದು ಅಲ್ಲ ಎಂದು ದೃಢವಾಗಿ ತಿಳಿದವನು, ನಾನು ಕೇವಲ ಚೈತನ್ಯ ಎಂಬುದನ್ನು ನಿಶ್ಚಯವಾಗಿ ತಿಳಿದವನು, ಕೃತಾಕೃತಗಳ ಸ್ಮರಣೆ ಮಾಡದೇ, ಕೈವಲ್ಯ ಪ್ರಾಪ್ತನಾಗುತ್ತಾನೆ. 

ಆಬ್ರಹ್ಮಸ್ತಂಬಪರ್ಯಂತಮಹಮೇವೇತಿ ನಿಶ್ಚಯೀ .
ನಿರ್ವಿಕಲ್ಪಃ ಶುಚಿಃ ಶಾಂತಃ ಪ್ರಾಪ್ತಾಪ್ರಾಪ್ತವಿನಿರ್ವೃತಃ .. 11-7..
 

ಬ್ರಹ್ಮನಿಂದ ಆರಂಭವಾಗಿ ಹುಲ್ಲಿನ ಪೊದೆಯತನಕ ಇವೆಲ್ಲವೂ ತಾನೇ ಎಂದು ನಿಶ್ಚಯವಾಗಿ ತಿಳಿದವನು, ನಿರ್ವಿಕಲ್ಪನಾಗಿ, ಶುದ್ಧನಾಗಿ, ಶಾಂತನಾಗಿ, ಪ್ರಾಪ್ತ-ಅಪ್ರಾಪ್ತಗಳ ಚಿಂತೆಯಿಂದ ದೂರನಾಗುತ್ತಾನೆ.

ನಾನಾಶ್ಚರ್ಯಮಿದಂ ವಿಶ್ವಂ ನ ಕಿಂಚಿದಿತಿ ನಿಶ್ಚಯೀ .
ನಿರ್ವಾಸನಃ ಸ್ಫೂರ್ತಿಮಾತ್ರೋ ನ ಕಿಂಚಿದಿವ ಶಾಮ್ಯತಿ .. 11-8..
 

ನಾನಾ ಆಶ್ಚರ್ಯಗಳ ಈ ವಿಶ್ವ ಏನೂ ಅಲ್ಲ ಎಂಬುದನ್ನು ನಿಶ್ಚಯವಾಗಿ ತಿಳಿದವನು, ವಾಸನಾರಹಿತನಾಗಿ ಸ್ಫೂರ್ತಿಮಾತ್ರನಾಗಿ ಶಾಂತನಾಗುತ್ತಾನೆ.

 

ಸಂಪೂರ್ಣ ಕೃತಿಯನ್ನು ಡೌನ್ ಲೋಡ್ ಮಾಡಿ. 

Comments

Popular posts from this blog

ಅಷ್ಟಾವಕ್ರಗೀತಾ - ೧

.. ಶ್ರೀ .. ಅಥ ಶ್ರೀಮದಷ್ಟಾವಕ್ರಗೀತಾ ಪ್ರಾರಭ್ಯತೇ . ಜನಕ ಉವಾಚ .. ಕಥಂ ಜ್ಞಾನಮವಾಪ್ನೋತಿ ಕಥಂ ಮುಕ್ತಿರ್ಭವಿಷ್ಯತಿ . ವೈರಾಗ್ಯಂ ಚ ಕಥಂ ಪ್ರಾಪ್ತಮೇತದ್ ಬ್ರೂಹಿ ಮಮ ಪ್ರಭೋ .. 1-1.. ಶಬ್ದಾರ್ಥ ಪ್ರಾರಭ್ಯತೇ = ಆರಂಭವಾಗುತ್ತದೆ ಜನಕ ಉವಾಚ = ಜನಕನು ಹೇಳಿದನು ಕಥಂ = ಹೇಗೆ ಜ್ಞಾನಮ್ + ಅವಾಪ್ನೋತಿ = ಜ್ಞಾನವನ್ನು ಪಡೆಯಬೇಕು ಮುಕ್ತಿ = ಮೋಕ್ಷ ಭವಿಷ್ಯತಿ = ಆಗುತ್ತದೆ ವೈರಾಗ್ಯ = ವೈರಾಗ್ಯ ಚ =ಮತ್ತು ಪ್ರಾಪ್ತಂ + ಏತತ್ = ಪಡೆಯತಕ್ಕದ್ದು , ಇದನ್ನು ಬ್ರೂಹಿ =ಹೇಳು ಮಮ =ನನ್ನ. ಪ್ರಭೋ = ಪ್ರಭುವೇ ಅನುವಾದ   ಜನಕ ಹೇಳಿದನು. ಜ್ಞಾನವನ್ನು ಹೇಗೆ ಸಂಪಾದಿಸಬೇಕು? ಮುಕ್ತಿಯನ್ನು ಹೇಗೆ ಪಡೆಯಬೇಕು? ವೈರಾಗ್ಯವನ್ನು ಪಡೆಯುವದು ಹೇಗೆ? ಪ್ರಭೂ, ಇದನ್ನು ನನಗೆ ತಿಳಿಸಿಕೊಡಿ. ಜನಕನು ನಮ್ಮೆಲ್ಲರ ಮನಸ್ಸಿನಲ್ಲಿರುವ ಪ್ರಶ್ನೆಯನ್ನೇ ಕೇಳುತ್ತಿದ್ದಾನೆ - ಜ್ಞಾನ ಪಡೆಯುವದು ಹೇಗೆ - ಅಧ್ಯಾತ್ಮ ಜ್ಞಾನ - ಕಬ್ಬಿಣದ ಕಡಲೆ - ಅದನ್ನು ತಿಳಿಯುವದು ಹೇಗೆ? ನಂತರ ಮೋಕ್ಷ ಪಡೆಯುವದು ಹೇಗೆ? ಈ ಸುಖ-ದುಃಖಗಳಿಂದ, ಹುಟ್ಟು-ಸಾವುಗಳಿಂದ, ಜರಾ-ಮೃತ್ಯುಗಳಿಂದ ಹೇಗೆ ಪಾರಾಗುವದು? ನಾನು-ನನ್ನದು ಎಂಬ ಆಶಾ-ಪಾಶದಿಂದ ಹೊರ ಬರುವದು ಹೇಗೆ? ಅಷ್ಟಾವಕ್ರ ಉವಾಚ .. ಮುಕ್ತಿಮಿಚ್ಛಸಿ ಚೇತ್ತಾತ ವಿಷಯಾನ್ ವಿಷವತ್ತ್ಯಜ . ಕ್ಷಮಾರ್ಜವದಯಾತೋಷಸತ್ಯಂ ಪೀಯೂಷವದ್ ಭಜ .. 1-2.. ಶಬ್ದಾರ್ಥ ಮುಕ್ತಿಂ = ಮು...

ಅಷ್ಟಾವಕ್ರಗೀತಾ - ೩

ಆತ್ಮಜ್ಞಾನದ ಅವಲೋಕನ ಅಷ್ಟಾವಕ್ರ ಉವಾಚ .. ಅವಿನಾಶಿನಮಾತ್ಮಾನಮೇಕಂ ವಿಜ್ಞಾಯ ತತ್ತ್ವತಃ . ತವಾತ್ಮಜ್ಞಾನಸ್ಯ ಧೀರಸ್ಯ ಕಥಮರ್ಥಾರ್ಜನೇ ರತಿಃ .. 3-1..  ಶಬ್ದಾರ್ಥ: ಅವಿನಾಶಿನಂ =ವಿನಾಶವಿಲ್ಲದವನನ್ನು;   ಆತ್ಮಾನಂ =ಆತ್ಮನನ್ನು;   ಏಕಂ =ಏಕೈಕನನ್ನು;  ವಿಜ್ಞಾಯ =ತಿಳಿದು;  ತತ್ತ್ವತಃ =ನಿಜ ಸ್ವರೂಪದಲ್ಲಿ;  ತವ =ನಿನ್ನ;  ಆತ್ಮಜ್ಞಾನಸ್ಯ =ಆತ್ಮಜ್ಞಾನಿಯ;  ಧೀರಸ್ಯ =ಧೀರನ;  ಕಥಂ =ಹೇಗೆ;  ಅರ್ಥಾರ್ಜನೇ =ಹಣದ(ಅರ್ಥ) ಗಳಿಕೆಯಲ್ಲಿ(ಅರ್ಜನೇ);  ರತಿಃ =ಮೋಹ ಅನುವಾದ: ಅವಿನಾಶಿಯಾದ, ಅದ್ವೈತವಾದ ಆತ್ಮವನ್ನು ಅರಿತುಕೊಂಡಮೇಲೆ ಆತ್ಮಜ್ಞಾನಿಯಾದ ಧೀರನು, ಸಂಪತ್ತನ್ನು ಗಳಿಸುವದಲ್ಲಿ ಆಸಕ್ತಿಯನ್ನು ಹೇಗೆ ಇರಿಸಿಕೊಳ್ಳುತ್ತಾನೆ? ವಿವರಣೆ: ಆತ್ಮಜ್ಞಾನವನ್ನು ಹುಡುಕುತ್ತ ಜನಕನು ಅದರ ಜೊತೆಗೇ ರಾಜ್ಯಭಾರವನ್ನೂ ಮಾಡುತ್ತಿದ್ದಾನೆ. ಅದಕ್ಕಾಗಿ ಅಷ್ಟಾವಕ್ರ ಮುನಿಯು ಅವನನ್ನು ಪರೀಕ್ಷಿಸುತ್ತ ಕೇಳುತ್ತಾನೆ - ಆತ್ಮಜ್ಞಾನವನ್ನು ಪಡೆದ ಮೇಲೆಯೂ ಹೇಗೆ ಧನಸಂಪಾದನೆಯಲ್ಲಿ ಆಸಕ್ತಿ ಇರುತ್ತದೆ.  ಆತ್ಮಾಜ್ಞಾನಾದಹೋ ಪ್ರೀತಿರ್ವಿಷಯಭ್ರಮಗೋಚರೇ . ಶುಕ್ತೇರಜ್ಞಾನತೋ ಲೋಭೋ ಯಥಾ ರಜತವಿಭ್ರಮೇ .. 3-2.. ಶಬ್ದಾರ್ಥ: ಆತ್ಮ + ಅಜ್ಞಾನಾತ್ =ಆತ್ಮದ ಅಜ್ಞಾನದಿಂದ; ಅಹೋ =ಅಹೋ; ಪ್ರೀತಿಃ =ಪ್ರೀತಿ; ವಿಷಯಭ್ರಮಗೋಚರೇ =ಭ್ರಮೆಯಾದ ವಿಷಯಗಳಲ್ಲಿ; ಶುಕ್ತೇ + ಅಜ್ಞಾನತಃ =ಚಿಪ್...

ಅಷ್ಟಾವಕ್ರ ಗೀತಾ - ೫

ಲಯದ ಉಪದೇಶ ಅಷ್ಟಾವಕ್ರ ಉವಾಚ .. ನ ತೇ ಸಂಗೋಽಸ್ತಿ ಕೇನಾಪಿ ಕಿಂ ಶುದ್ಧಸ್ತ್ಯಕ್ತುಮಿಚ್ಛಸಿ . ಸಂಘಾತವಿಲಯಂ ಕುರ್ವನ್ನೇವಮೇವ ಲಯಂ ವ್ರಜ .. 5-1.. ಅಷ್ಟಾವಕ್ರನು ಜನಕನಿಗೆ ಮೋಕ್ಷದ ಮಾರ್ಗವನ್ನು ತಿಳಿಸಿ ಹೇಳುತ್ತಾ ಹೀಗೆ ಹೇಳುತ್ತಾನೆ- ನೀನು ಶುದ್ಧನು, ನಿನಗೆ ಯಾವುದರ ಸಂಗವೂ ಇಲ್ಲ   ಹೀಗಿರುವಾಗ ಏನನ್ನು ತಾನೇ ತ್ಯಜಿಸಲು ಇಚ್ಛಿಸುವೆ? ನೀನು ಶರೀರ-ಮನ-ಅಹಂಕಾರಗಳ ಮೋಹವನ್ನು ನಾಶವಾಗಿಸಿ ಲಯವನ್ನು, ಮುಕ್ತಿಯನ್ನು ಹೊಂದು ಉದೇತಿ ಭವತೋ ವಿಶ್ವಂ ವಾರಿಧೇರಿವ ಬುದ್ಬುದಃ . ಇತಿ ಜ್ಞಾತ್ವೈಕಮಾತ್ಮಾನಮೇವಮೇವ ಲಯಂ ವ್ರಜ .. 5-2.. ಸಾಗರದಿಂದ ಅಲೆಗಳು ಉದಯಿಸಿದಂತೆ, ಈ ವಿಶ್ವವೆಲ್ಲ ನಿನ್ನಿಂದಲೇ ಉದ್ಭವವಾಗುತ್ತದೆ. ಇದನ್ನು ತಿಳಿದು, ನೀನೇ ಆತ್ಮನೆಂದು ತಿಳಿದು, ಲಯವನ್ನು (ಮೋಕ್ಷವನ್ನು) ಹೊಂದು. ಪ್ರತ್ಯಕ್ಷಮಪ್ಯವಸ್ತುತ್ವಾದ್ ವಿಶ್ವಂ ನಾಸ್ತ್ಯಮಲೇ ತ್ವಯಿ . ರಜ್ಜುಸರ್ಪ ಇವ ವ್ಯಕ್ತಮೇವಮೇವ ಲಯಂ ವ್ರಜ .. 5-3.. ಹಗ್ಗ ಸರ್ಪದಂತೆ ಕಾಣುವಂತೆ, ಪ್ರತ್ಯಕ್ಷವೆನಿಸಿದರೂ ಅವಸ್ತುವಾದದ್ದರಿಂದ (ಮಿಥ್ಯೆಯಾದದ್ದರಿಂದ) ಈ ವಿಶ್ವವು ಅಮಲನಾದ(ಶುದ್ಧನಾದ) ನಿನ್ನೊಳಗೆ ಇಲ್ಲ. ಇದನ್ನು ಅರಿತು ಲಯವನ್ನು ಹೊಂದು. ಸಮದುಃಖಸುಖಃ ಪೂರ್ಣ ಆಶಾನೈರಾಶ್ಯಯೋಃ ಸಮಃ . ಸಮಜೀವಿತಮೃತ್ಯುಃ ಸನ್ನೇವಮೇವ ಲಯಂ ವ್ರಜ .. 5-4.. ನೀನಗೆ ಸುಖ-ದುಃಖಗಳು ಸಮಾನ. ಆಶಾ-ನಿರಾಶೆಗಳು ಸಮಾನ. ಜೀವನ-ಮೃತ್ಯುಗಳು ಸಮಾನ. ಈ ರೀತಿಯವನಾಗಿರುವ ನೀನು ಆತ್ಮದಲ್ಲಿ ಲಯವನ್ನು ಹೊಂದು....