Posts

ಅಷ್ಟಾವಕ್ರನ ಕತೆ

 ಒಂದಾನೊಂದು ಕಾಲದಲ್ಲಿ ಕಹೋಡ ಎಂಬ ಒಬ್ಬ  ವ್ಯಕ್ತಿ ಧರ್ಮಗ್ರಂಥಗಳ ಅಧ್ಯಯನ ಮಾಡುತ್ತಿದ್ದನು. ಅವನು ಹೊಟ್ಟೆಪಾಡಿಗಾಗಿ ದಿನವಿಡೀ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ, ನಂತರ ರಾತ್ರಿ ವೇದಾಧ್ಯಯನ ಮಾಡುತ್ತಿದ್ದ. ರಾತ್ರಿ ಬಹಳ ವೇಳೆಯವರೆಗೆ ಶ್ಲೋಕಗಳನ್ನು ಗಟ್ಟಿಯಾಗಿ ಓದುತ್ತ ಅಧ್ಯಯನ ಮಾಡುತ್ತಿದ್ದ.  ಅವನ ಗರ್ಭಿಣಿ ಪತ್ನಿ ಸುಜಾತಾ, ಪಕ್ಕದಲ್ಲಿ ಕುಳಿತು, ತನ್ನ ಪತಿ ಶ್ಲೋಕಗಳನ್ನು ಹೇಳುತ್ತಿರುವುದನ್ನು ಕೇಳುತ್ತಿದ್ದಳು. ಸುಜಾತಾ ಎಂಟು ತಿಂಗಳ ಗರ್ಭಿಣಿಯಾಗಿದ್ದಾಗ, ಒಂದು ರಾತ್ರಿ ಅವಳ ಹೊಟ್ಟೆಯೊಳಗಿನಿಂದ ಒಂದು ಧ್ವನಿ ಕಹೋಡನಿಗೆ ಹೇಳಿತು: "ಅಪ್ಪಾ, ದಯವಿಟ್ಟು ಗಮನವಿರಲಿ - ನೀವು ಆ ಶ್ಲೋಕವನ್ನು ತಪ್ಪಾಗಿ ಉಚ್ಚರಿಸುತ್ತಿದ್ದೀರಾ."   ಕಹೋಡನಿಗೆ ಸಿಟ್ಟು ನೆತ್ತಿಗೇರಿತು. ಹಿಂದೆ ಮುಂದೆ ಯೋಚಿಸದೆ, ಇನ್ನೂ ಹುಟ್ಟದ ಮಗುವಿನ ಮೇಲೆ ಯಾಕೆ ತಾನು ಇಷ್ಟು ಸಿಟ್ಟು ಮಾಡಿಕೊಳ್ಳಬೇಕು ಎಂದೂ ಯೋಚಿಸದೇ, ತನ್ನ ಮಗುವಿಗೇ ಶಾಪ ಕೊಟ್ಟನು "ನೀನು ಅಷ್ಟಾವಕ್ರನಾಗಿ ಜನಿಸು".  ತಂದೆಯಿಂದ ಬಂದ  ಶಾಪವಲ್ಲವೇ, ಸಫಲವಾಯಿತು: ಮಗುವು ವಿರೂಪಗೊಂಡು,  ದೇಹದಲ್ಲಿ ಎಂಟು ವಕ್ರಗಳೊಂದಿಗೆ ಜನಿಸಿತು. ಮಗುವಿಗೆ ಅಷ್ಟಾವಕ್ರ ಎಂದು ಹೆಸರು ಇಡಲಾಯಿತು.  ಅವನ ಬಾಲ್ಯದಲ್ಲಿ ಅವನನ್ನು ನೋಡಿದವರೆಲ್ಲರೂ  ಅಪಹಾಸ್ಯದಿಂದ ನಗುತ್ತಿದ್ದರು. ಆದರೆ ಚಿಕ್ಕ ಅಷ್ಟಾವಕ್ರನಿಗೆ ಅದರಿಂದ ಯಾವ ಸಿಟ್ಟು ಸಿಡುಗೂ ಆಗುತ್ತುರಲಿಲ್ಲ....

ಅಷ್ಟಾವಕ್ರಗೀತಾ - ೧

ಅಷ್ಟಾವಕ್ರ ಗೀತೆ ಜನಕ ಮತ್ತು ಅಷ್ಟಾವಕ್ರನ ಸಂವಾದದ ರೂಪದಲ್ಲಿದೆ. ರಾಜಾ ಜನಕ ಅಷ್ಟಾವಕ್ರನನ್ನು ಮುಕ್ತಿಯನ್ನು ಪಡೆಯುವ ಮಾರ್ಗದ ಬಗ್ಗೆ ಕೇಳುತ್ತಾನೆ. ಅಷ್ಟಾವಕ್ರ ಅವನಿಗೆ ಅದನ್ನು ವಿವರಿಸುತ್ತಾನೆ   . . ಶ್ರೀ .. ಅಥ ಶ್ರೀಮದಷ್ಟಾವಕ್ರಗೀತಾ ಪ್ರಾರಭ್ಯತೇ . ಜನಕ ಉವಾಚ .. ಕಥಂ ಜ್ಞಾನಮವಾಪ್ನೋತಿ ಕಥಂ ಮುಕ್ತಿರ್ಭವಿಷ್ಯತಿ . ವೈರಾಗ್ಯಂ ಚ ಕಥಂ ಪ್ರಾಪ್ತಮೇತದ್ ಬ್ರೂಹಿ ಮಮ ಪ್ರಭೋ .. 1-1.. ಜನಕ ಹೇಳಿದನು: ಜ್ಞಾನವನ್ನು ಹೇಗೆ ಸಂಪಾದಿಸಬೇಕು? ಮುಕ್ತಿಯನ್ನು ಹೇಗೆ ಪಡೆಯಬೇಕು? ವೈರಾಗ್ಯವನ್ನು ಪಡೆಯುವದು ಹೇಗೆ? ಪ್ರಭೂ,  ನನಗೆ ತಿಳಿಸಿಕೊಡಿ. ಅಷ್ಟಾವಕ್ರ ಉವಾಚ .. ಮುಕ್ತಿಮಿಚ್ಛಸಿ ಚೇತ್ತಾತ ವಿಷಯಾನ್ ವಿಷವತ್ತ್ಯಜ . ಕ್ಷಮಾರ್ಜವದಯಾತೋಷಸತ್ಯಂ ಪೀಯೂಷವದ್ ಭಜ .. 1-2.. ಅಷ್ಟಾವಕ್ರ ಹೇಳಿದನು:    ನೀನು ಮುಕ್ತಿ ಪಡೆಯಬೇಕೆಂಬ ಆಸೆ ಇದ್ದರೆ ವಿಷಯಗಳನ್ನು(ಕಾಮ, ಕ್ರೋಧ ಇತ್ಯಾದಿ) ವಿಷದಂತೆ ತ್ಯಜಿಸಬೇಕು. ಕ್ಷಮೆ, ದಯೆ ಸತ್ಯ ಮತ್ತು ಸಮಾಧಾನಗಳನ್ನು ಅಮೃತದಂತೆ ಬೆಳೆಸಿಕೊಳ್ಳಬೇಕು. ನ ಪೃಥ್ವೀ ನ ಜಲಂ ನಾಗ್ನಿರ್ನ ವಾಯುರ್ದ್ಯೌರ್ನ ವಾ ಭವಾನ್ . ಏಷಾಂ ಸಾಕ್ಷಿಣಮಾತ್ಮಾನಂ ಚಿದ್ರೂಪಂ ವಿದ್ಧಿ ಮುಕ್ತಯೇ .. 1-3.. ಮುಕ್ತಿ ಪಡೆಯಲು ನೀನು  ಭೂಮಿ, ನೀರು, ಬೆಂಕಿ, ಗಾಳಿ, ಆಕಾಶಗಳಿಂದ ತುಂಬಿದವನಲ್ಲ. ಮುಕ್ತಿಯನ್ನು ಗಳಿಸಲು ನೀನು ಇವೆಲ್ಲವುಗಳ ಸಾಕ್ಷಿ ಹಾಗೂ ಚಿತ್ ( ಪ್ರಜ್ಞೆಯ) ರೂಪನು ಎಂಬ ಮಾತನ್ನು ...

ಅಷ್ಟಾವಕ್ರಗೀತಾ - ೨

ಆತ್ಮಸಾಕ್ಷಾತ್ಕಾರದ ಆನಂದ   ಅಷ್ಟಾವಕ್ರನಿಂದ ಆತ್ಮಜ್ಞಾನ ಪಡೆದ ಜನಕನು ತನ್ನ ಹರ್ಷವನ್ನು ಈ ಕೆಳಗಿನ ಸಾಲುಗಳಲ್ಲಿ ವ್ಯಕ್ತಪಡಿಸುತ್ತಾನೆ.   ಜನಕ ಉವಾಚ .. ಅಹೋ ನಿರಂಜನಃ ಶಾಂತೋ ಬೋಧೋಽಹಂ ಪ್ರಕೃತೇಃ ಪರಃ . ಏತಾವಂತಮಹಂ ಕಾಲಂ ಮೋಹೇನೈವ ವಿಡಂಬಿತಃ .. 2-1..  ನಾನು ನಿಷ್ಕಳಂಕ, ಶಾಂತ ಮತ್ತು  ಈ ಪ್ರಕೃತಿಯನ್ನು ಮೀರಿದ ಜ್ಞಾನವಾಗಿರುವೆ. (ಇದನ್ನು ತಿಳಿಯದೆ) ಇಷ್ಟು ದಿನ ಭ್ರಮೆಯಿಂದ ಮೋಸ ಹೋಗಿದ್ದೆ. ಯಥಾ ಪ್ರಕಾಶಯಾಮ್ಯೇಕೋ ದೇಹಮೇನಂ ತಥಾ ಜಗತ್ . ಅತೋ ಮಮ ಜಗತ್ಸರ್ವಮಥವಾ ನ ಚ ಕಿಂಚನ .. 2-2.. ಹೇಗೆ ನಾನು ಈ ಶರೀರಕ್ಕೆ ಬೆಳಕು ಕೊಡುವವನೋ - ಹಾಗೆಯೆ ನಾನು ಈ ಜಗತ್ತಿಗೆ ಬೆಳಕು ಕೊಡುವವನು. ಹಾಗಾಗಿ ಈ ಜಗತ್ತೆಲ್ಲ ನನ್ನದು. ಅಥವಾ ಯಾವುದೂ ನನ್ನದಲ್ಲ. (ಬೆಳಕಿಲ್ಲದೇ ಶರೀರ ಕಾಣಲಾರದು. ನಾನು ಶರೀರವನ್ನು ಬೆಳಕು ನೀಡಿ ಅದನ್ನು ಪ್ರಕಟಿಸುವವನು). ಸ ಶರೀರಮಹೋ ವಿಶ್ವಂ ಪರಿತ್ಯಜ್ಯ ಮಯಾಧುನಾ . ಕುತಶ್ಚಿತ್ ಕೌಶಲಾದ್ ಏವ ಪರಮಾತ್ಮಾ ವಿಲೋಕ್ಯತೇ .. 2-3.. ಈಗ ಈ ಶರೀರವನ್ನು ಹಾಗು ವಿಶ್ವವನ್ನು ಪರಿತ್ಯಜಿಸಿ, ಹೇಗೋ ಕೌಶಲ್ಯದಿಂದ ಪರಮಾತ್ಮನನ್ನು  ಕಲ್ಪಿಸಿಕೊಳ್ಳುತ್ತೇನೆ. (ಪರಮಾತ್ಮನ ರೂಪವನ್ನು ಅರಿಯುತ್ತೇನೆ.) ಯಥಾ ನ ತೋಯತೋ ಭಿನ್ನಾಸ್ತರಂಗಾಃ ಫೇನಬುದ್ಬುದಾಃ . ಆತ್ಮನೋ ನ ತಥಾ ಭಿನ್ನಂ ವಿಶ್ವಮಾತ್ಮವಿನಿರ್ಗತಂ .. 2-4.. ಹೇಗೆ ಅಲೆ, ನೊರೆ, ನೀರಿನ ಗುಳ್ಳೆ ಇವೆಲ್ಲವೂ ನೀರಿಗಿಂತ ...

ಅಷ್ಟಾವಕ್ರಗೀತಾ - ೩

 ಆತ್ಮಜ್ಞಾನದ ಅವಲೋಕನ ಅಷ್ಟಾವಕ್ರ ಉವಾಚ .. ಅವಿನಾಶಿನಮಾತ್ಮಾನಮೇಕಂ ವಿಜ್ಞಾಯ ತತ್ತ್ವತಃ . ತವಾತ್ಮಜ್ಞಾನಸ್ಯ ಧೀರಸ್ಯ ಕಥಮರ್ಥಾರ್ಜನೇ ರತಿಃ .. 3-1..  ಅವಿನಾಶಿಯಾದ, ಅದ್ವೈತವಾದ ಆತ್ಮವನ್ನು ಅರಿತುಕೊಂಡಮೇಲೆ ಆತ್ಮಜ್ಞಾನಿಯಾದ ವ್ಯಕ್ತಿಯು, ಸಂಪತ್ತಿನ ಗಳಿಕೆಯಲ್ಲಿ ಆಸಕ್ತಿಯನ್ನು ಹೇಗೆ ಇರಿಸಿಕೊಳ್ಳುತ್ತಾನೆ? ಆತ್ಮಾಜ್ಞಾನಾದಹೋ ಪ್ರೀತಿರ್ವಿಷಯಭ್ರಮಗೋಚರೇ . ಶುಕ್ತೇರಜ್ಞಾನತೋ ಲೋಭೋ ಯಥಾ ರಜತವಿಭ್ರಮೇ .. 3-2.. ಕಪ್ಪೆಚಿಪ್ಪನ್ನು ನೋಡಿ ಬೆಳ್ಳಿಯೆಂದು ಭ್ರಮೆಯಿಂದ ಮೋಹವಾಗುವಂತೆ, ಆತ್ಮದ ಅಜ್ಞಾನವು ಭ್ರಮೆಯ ಬಯಕೆಯನ್ನು (ಕಾಣುವ ವಸ್ತುಗಳಲ್ಲಿ) ಉಂಟುಮಾಡುತ್ತದೆ. ವಿಶ್ವಂ ಸ್ಫುರತಿ ಯತ್ರೇದಂ ತರಂಗಾ ಇವ ಸಾಗರೇ . ಸೋಽಹಮಸ್ಮೀತಿ ವಿಜ್ಞಾಯ ಕಿಂ ದೀನ ಇವ ಧಾವಸಿ .. 3-3.. ಯಾರಲ್ಲಿ ಬ್ರಹ್ಮಾಂಡವು ಸಮುದ್ರದ ಮೇಲಿನ  ಅಲೆಗಳಂತೆ ಕಾಣಿಸುವದೋ ಅವನೇ ನೀನು ಎಂದು ತಿಳಿದಿದ್ದರೂ, ನೀನು ಯಾಕೆ ದೀನನಂತೆ ಓಡುತ್ತೀಯ? ಶ್ರುತ್ವಾಪಿ ಶುದ್ಧಚೈತನ್ಯ ಆತ್ಮಾನಮತಿಸುಂದರಂ . ಉಪಸ್ಥೇಽತ್ಯಂತಸಂಸಕ್ತೋ ಮಾಲಿನ್ಯಮಧಿಗಚ್ಛತಿ .. 3-4.. ನೀನು ಶುದ್ಧ ಚೈತನ್ಯನೆಂದೂ, ಅತಿ ಸುಂದರನೆಂದೂ ಕೇಳಿ ತಿಳಿದಮೇಲೂ, ಮಲಿನವಾದ ವಿಷಯಸುಖಗಳಲ್ಲಿ ಯಾಕೆ ಆಸಕ್ತಿ ತೋರಿಸುತ್ತಿರುವೆ? (ಇನ್ನೊಂದು ಅನುವಾದ - ತಾನು ಆತ್ಮ, ಶುದ್ಧ ಪ್ರಜ್ಞೆ ಮತ್ತು ಅತ್ಯಂತ ಸುಂದರ ಎಂದು ಕೇಳಿದ ನಂತರವೂ, ದೇಹಕ್ಕೆ ಅತಿಯಾಗಿ ಅಂಟಿಕೊಂಡಿರುವವನು ಮಾಲಿನ್ಯವನ್ನು ಪಡೆಯುತ್ತಾನೆ....

ಅಷ್ಟಾವಕ್ರಗೀತಾ - ೪

ಆತ್ಮಸಾಕ್ಷಾತ್ಕಾರದ ವೈಭವ  ಜನಕ ಉವಾಚ .. ಹಂತಾತ್ಮಜ್ಞಾನಸ್ಯ ಧೀರಸ್ಯ ಖೇಲತೋ ಭೋಗಲೀಲಯಾ . ನ ಹಿ ಸಂಸಾರವಾಹೀಕೈರ್ಮೂಢೈಃ ಸಹ ಸಮಾನತಾ .. 4-1.. ಆತ್ಮಜ್ಞಾನಿಯಾದ ಧೀರನು ಭೋಗಲೀಲೆಯಲ್ಲಿ ಕ್ರೀಡಿಸುವಂತೆ ಕಂಡರೂ ಸಂಸಾರದ ಭಾರವನ್ನು ಹೊರುವ ಮೂಢರ ಜೊತೆ ಅವನನ್ನು ಹೋಲಿಸಲಾಗುವದಿಲ್ಲ. (ಯಾಕೆಂದರೆ ಅವನು ಭೋಗದಿಂದ ಯಾವ ರೀತಿಯಲ್ಲೂ ಪರಿಣಾಮಿತನಾಗುವದಿಲ್ಲ) ಯತ್ ಪದಂ ಪ್ರೇಪ್ಸವೋ ದೀನಾಃ ಶಕ್ರಾದ್ಯಾಃ ಸರ್ವದೇವತಾಃ . ಅಹೋ ತತ್ರ ಸ್ಥಿತೋ ಯೋಗೀ ನ ಹರ್ಷಮುಪಗಚ್ಛತಿ .. 4-2.. ಯಾವ ಸ್ಥಿತಿಯನ್ನು ಹೊಂದಲು ಇಂದ್ರ(ಶಕ್ರ)ನನ್ನು ಒಳಗೊಂಡು ದೇವತೆಗಳೆಲ್ಲ  ಅತ್ಯುತ್ಸುಕರಾಗಿರುತ್ತಾರೋ, ಆ ಸ್ಥಿತಿಯನ್ನು ಹೊಂದಿಯೂ ಕೂಡ ಯೋಗಿಯು ಹರ್ಷವನ್ನು ಹೊಂದುವದಿಲ್ಲ. ತಜ್ಜ್ಞಸ್ಯ ಪುಣ್ಯಪಾಪಾಭ್ಯಾಂ ಸ್ಪರ್ಶೋ ಹ್ಯಂತರ್ನ ಜಾಯತೇ . ನ ಹ್ಯಾಕಾಶಸ್ಯ ಧೂಮೇನ ದೃಶ್ಯಮಾನಾಪಿ ಸಂಗತಿಃ .. 4-3.. ಹೊಗೆ ಆಕಾಶವನ್ನೇ ತಲುಪಿದಂತೆ ಕಂಡರೂ ಅದು ದೂರವೇ ಇರುವಂತೆ,  ಜ್ಞಾನಿಗೆ ಪಾಪ ಪುಣ್ಯಗಳಾವವವೂ ತಟ್ಟುವದಿಲ್ಲ.  ಆತ್ಮೈವೇದಂ ಜಗತ್ಸರ್ವಂ ಜ್ಞಾತಂ ಯೇನ ಮಹಾತ್ಮನಾ . ಯದೃಚ್ಛಯಾ ವರ್ತಮಾನಂ ತಂ ನಿಷೇದ್ಧುಂ ಕ್ಷಮೇತ ಕಃ .. 4-4.. ಈ ಜಗತ್ತೆಲ್ಲವನ್ನು ಸ್ವಯಂ ಆತ್ಮವೇ ಎಂದು ತಿಳಿದ ಮಹಾತ್ಮನನ್ನು, ತನ್ನಿಚ್ಛೆಯಂತೆ ಜೀವಿಸುವದನ್ನು ಯಾರು ತಾನೇ ತಡೆಯಬಲ್ಲರು. ಆಬ್ರಹ್ಮಸ್ತಂಬಪರ್ಯಂತೇ ಭೂತಗ್ರಾಮೇ ಚತುರ್ವಿಧೇ . ವಿಜ್ಞಸ್ಯೈವ ಹಿ ಸಾಮರ್ಥ್ಯಮಿಚ್ಛಾನಿಚ್ಛಾವಿವ...

ಅಷ್ಟಾವಕ್ರ ಗೀತಾ - ೫

ಲಯದ ಉಪದೇಶ ಅಷ್ಟಾವಕ್ರ ಉವಾಚ .. ನ ತೇ ಸಂಗೋಽಸ್ತಿ ಕೇನಾಪಿ ಕಿಂ ಶುದ್ಧಸ್ತ್ಯಕ್ತುಮಿಚ್ಛಸಿ . ಸಂಘಾತವಿಲಯಂ ಕುರ್ವನ್ನೇವಮೇವ ಲಯಂ ವ್ರಜ .. 5-1.. ಅಷ್ಟಾವಕ್ರನು ಜನಕನಿಗೆ ಮೋಕ್ಷದ ಮಾರ್ಗವನ್ನು ತಿಳಿಸಿ ಹೇಳುತ್ತಾ ಹೀಗೆ ಹೇಳುತ್ತಾನೆ- ನೀನು ನಿಸ್ಸಂಗನು, ಶುದ್ಧನು ಆಗಿರುವಾಗ ಏನನ್ನು ತಾನೇ ತ್ಯಜಿಸಲು ಇಚ್ಛಿಸುವೆ? ನೀನು ಶರೀರ ಎನ್ನುವ ಭಾವನೆಯನ್ನು ಬಿಟ್ಟು ಲಯವನ್ನು, ಮುಕ್ತಿಯನ್ನು ಹೊಂದು ಉದೇತಿ ಭವತೋ ವಿಶ್ವಂ ವಾರಿಧೇರಿವ ಬುದ್ಬುದಃ . ಇತಿ ಜ್ಞಾತ್ವೈಕಮಾತ್ಮಾನಮೇವಮೇವ ಲಯಂ ವ್ರಜ .. 5-2.. ಸಾಗರದಿಂದ ಅಲೆಗಳು ಉದಯಿಸಿದಂತೆ, ಈ ವಿಶ್ವವೆಲ್ಲ ನಿನ್ನಿಂದಲೆ ಉದ್ಭವವಾಗುತ್ತದೆ ಇದನ್ನು ತಿಳಿದು, ನೀನೇ ಆತ್ಮನೆಂದು ತಿಳಿದು, ಲಯವನ್ನು (ಮೋಕ್ಷವನ್ನು) ಹೊಂದು. ಪ್ರತ್ಯಕ್ಷಮಪ್ಯವಸ್ತುತ್ವಾದ್ ವಿಶ್ವಂ ನಾಸ್ತ್ಯಮಲೇ ತ್ವಯಿ . ರಜ್ಜುಸರ್ಪ ಇವ ವ್ಯಕ್ತಮೇವಮೇವ ಲಯಂ ವ್ರಜ .. 5-3.. ಹಗ್ಗ ಸರ್ಪದಂತೆ ಕಾಣುವಂತೆ, ಪ್ರತ್ಯಕ್ಷವೆನಿಸಿದರೂ ಅವಸ್ತುವಾದದ್ದರಿಂದ (ಮಿಥ್ಯೆಯಾದದ್ದರಿಂದ) ಈ ವಿಶ್ವವು ಅಮಲನಾದ ನಿನ್ನಲ್ಲಿ ಇಲ್ಲ. ಇದನ್ನು ಅರಿತು ಲಯವನ್ನು ಹೊಂದು. ಸಮದುಃಖಸುಖಃ ಪೂರ್ಣ ಆಶಾನೈರಾಶ್ಯಯೋಃ ಸಮಃ . ಸಮಜೀವಿತಮೃತ್ಯುಃ ಸನ್ನೇವಮೇವ ಲಯಂ ವ್ರಜ .. 5-4.. ನೀನಗೆ ಸುಖ-ದುಃಖಗಳು ಸಮಾನ. ನಿನಗೆ ಆಶಾ-ನಿರಾಶೆಗಳು ಸಮಾನ. ಜೀವನ-ಮೃತ್ಯುಗಳು ಸಮಾನ. ಈ ರೀತಿಯವನಾಗಿರುವ ನೀನು ಲಯವನ್ನು ಹೊಂದು.    ಸಂಪೂರ್ಣ ಕೃತಿಯನ್ನು ಡೌನ್ ಲೋಡ್ ಮಾ...

ಅಷ್ಟಾವಕ್ರಗೀತಾ- ೬

ಯತಾರ್ಥ ಜ್ಞಾನೋಪದೇಶ ಜನಕ ಉವಾಚ- ಆಕಾಶವದನಂತೋಽಹಂ ಘಟವತ್ ಪ್ರಾಕೃತಂ ಜಗತ್ . ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ .. 6-1.. ನಾನು (ಆತ್ಮ) ಆಕಾಶದಂತೆ ಅನಂತನು. ಈ ಪ್ರಾಕೃತಿಕ ಜಗತ್ತಾದರೋ ಮಡಿಕೆಯಂತೆ. ಇದನ್ನು ಅರಿಯುವದೇ ಜ್ಞಾನ. (ಹಾಗಾಗಿ) ಈ ಇದನ್ನು(ಜಗತ್ತನ್ನು) ಗೃಹಿಸುವದು, ತ್ಯಜಿಸುವದು ಅಥವಾ ನಾಶ ಮಾಡುವ ಪ್ರಶ್ನೆಯೇ ಇಲ್ಲ. ಮಹೋದಧಿರಿವಾಹಂ ಸ ಪ್ರಪಂಚೋ ವೀಚಿಸನ್ನಿಭಃ . ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ .. 6-2.. ನಾನು ಮಹಾಸಾಗರದಂತೆ ಅನಂತನು, ಪ್ರಪಂಚವೋ ಆ ಸಾಗರದ ಅಲೆಯಂತೆ ಕ್ಷಣಿಕ. ಇದೇ ಜ್ಞಾನ. ಹಾಗಾಗಿ ಈ ಆತ್ಮವನ್ನು ಗೃಹಿಸುವದೂ ಅಲ್ಲ, ತ್ಯಜಿಸುವದೂ ಅಲ್ಲ, ಬದಲಾಗಿ ಅದರಲ್ಲೇ ಲಯವಾಗುವದೇ ಸರಿ. ಅಹಂ ಸ ಶುಕ್ತಿಸಂಕಾಶೋ ರೂಪ್ಯವದ್ ವಿಶ್ವಕಲ್ಪನಾ . ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ .. 6-3.. ಚಿಪ್ಪನ್ನು ನೋಡಿ ಬೆಳ್ಳಿಯೆಂದು ಭ್ರಮೆ ಹೊಂದುವಂತೆ, ಭ್ರಮೆಯಿಂದ ಆತ್ಮ ಬಾಹ್ಯ ಜಗತ್ತಿನಂತೆ ಕಂಡುಬರುತ್ತದೆ. ಇದನ್ನು ಅರಿತಮೇಲೆ ಈ ಆತ್ಮವನ್ನು ಗೃಹಿಸುವದು, ತ್ಯಜಿಸುವದು ಅಥವಾ ನಾಶ ಮಾಡಲು ಸಾಧ್ಯ ಇಲ್ಲ. ಅಹಂ ವಾ ಸರ್ವಭೂತೇಷು ಸರ್ವಭೂತಾನ್ಯಥೋ ಮಯಿ . ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ .. 6-4.. ನಾನೇ ಸಕಲಭೂತಗಳಲ್ಲಿ ಇದ್ದೇನೆ. ನನ್ನಲ್ಲಿ ಸರ್ವಭೂತಗಳು ಇವೆ. ಈ ಜ್ಞಾನ ತಿಳಿದ ಮೇಲೆ ಆತ್ಮದ ತ್ಯಾಗ, ಗೃಹಣ ಅಥವಾ ಲಯದ ಪ್ರಶ್ನೆಯೇ ಇಲ್ಲ.   ಸಂಪೂರ್ಣ ಕೃತಿಯನ್ನು...