Skip to main content

Posts

Showing posts with the label #ashtavakragita

ಅಷ್ಟಾವಕ್ರ

ಅಷ್ಟಾವಕ್ರಗೀತೆ ಅದ್ವೈತ ಸಿದ್ಧಾಂತದ ಪ್ರಮುಖ ಗ್ರಂಥವಾಗಿದೆ. ಇದನ್ನು ಅಷ್ಟಾವಕ್ರಮುನಿಯು ಮಿಥಿಲೆಯ ರಾಜನಾದ ಜನಕನಿಗೆ ಉಪದೇಶ ಮಾಡಿದನು.   ಬಹುಶಃ ಇದರ ರಚನೆ ಭಗವದ್ಗೀತೆಯ ನಂತರ ಅಂದರೆ ಕ್ರಿ. ಪೂ. ೪೦೦-೩೦೦ ರಲ್ಲಿ ಆಗಿರಬಹುದು. ಅಷ್ಟಾವಕ್ರ ಋಷಿ ಯಾರೆಂಬುದರ ಬಗ್ಗೆ ಹೀಗೊಂದು ಕತೆ ಇದೆ. ಅರುಣಿ ಋಷಿಗೆ ಸುಜಾತಾ ಎಂಬ ಮಗಳಿದ್ದಳು. ಅವಳು ಕಹೋಡ ಎಂಬವನನ್ನು ಮದುವೆಯಾದಳು. ಗಂಡ-ಹೆಂಡತಿಯರಿಬ್ಬರೂ ಸದಾ ವೇದಶಾಸ್ತ್ರಗಳ ಅಧ್ಯಯನದಲ್ಲಿ ನಿರತರಾಗಿರುತ್ತಿದ್ದರು.  ಆದರೆ ಹೊಟ್ಟೆಪಾಡು ಬೇಕಲ್ಲ. ಕಹೋಡ ದಿನವಿಡೀ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ, ನಂತರ ರಾತ್ರಿ ವೇದಾಧ್ಯಯನ ಮಾಡುತ್ತಿದ್ದ. ರಾತ್ರಿ ಬಹಳ ವೇಳೆಯವರೆಗೆ ಶ್ಲೋಕಗಳನ್ನು ಗಟ್ಟಿಯಾಗಿ ಓದುತ್ತಿರುತ್ತಿದ್ದ.  ಅವನ ಗರ್ಭಿಣಿ ಪತ್ನಿ ಸುಜಾತಾ, ಪಕ್ಕದಲ್ಲಿ ಕುಳಿತು, ತನ್ನ ಪತಿ ಶ್ಲೋಕಗಳನ್ನು ಹೇಳುತ್ತಿರುವುದನ್ನು ಕೇಳುತ್ತಿದ್ದಳು. ಅವಳ ಹೊಟ್ಟೆಯಲ್ಲಿರುವ ಮಗುವೂ ಕೇಳುತ್ತಿತ್ತು. ಸುಜಾತಾ ಎಂಟು ತಿಂಗಳ ಗರ್ಭಿಣಿಯಾಗಿದ್ದಾಗ, ಒಂದು ರಾತ್ರಿ ಅವಳ ಹೊಟ್ಟೆಯೊಳಗಿನಿಂದ ಒಂದು ಧ್ವನಿ ಕಹೋಡನಿಗೆ ಹೇಳಿತು: "ಅಪ್ಪಾ, ದಯವಿಟ್ಟು ಗಮನವಿರಲಿ - ನೀವು ಈ ಶ್ಲೋಕವನ್ನು ತಪ್ಪಾಗಿ ಉಚ್ಚರಿಸುತ್ತಿದ್ದೀರಾ."   ಇದನ್ನು ಕೇಳಿದ ಕಹೋಡನಿಗೆ ಸಿಟ್ಟು ನೆತ್ತಿಗೇರಿತು. ಹಿಂದೆ ಮುಂದೆ ಯೋಚಿಸದೆ, ಇನ್ನೂ ಹುಟ್ಟಿರದ ತನ್ನ ಸ್ವಂತ ಮಗುವಿಗೇ "ನೀನು ಅಷ್ಟಾವಕ್ರನಾಗಿ ಜನಿಸು" ಎಂದು ಶಾಪ ...

ಅಷ್ಟಾವಕ್ರಗೀತಾ - ೧

.. ಶ್ರೀ .. ಅಥ ಶ್ರೀಮದಷ್ಟಾವಕ್ರಗೀತಾ ಪ್ರಾರಭ್ಯತೇ . ಜನಕ ಉವಾಚ .. ಕಥಂ ಜ್ಞಾನಮವಾಪ್ನೋತಿ ಕಥಂ ಮುಕ್ತಿರ್ಭವಿಷ್ಯತಿ . ವೈರಾಗ್ಯಂ ಚ ಕಥಂ ಪ್ರಾಪ್ತಮೇತದ್ ಬ್ರೂಹಿ ಮಮ ಪ್ರಭೋ .. 1-1.. ಶಬ್ದಾರ್ಥ ಪ್ರಾರಭ್ಯತೇ = ಆರಂಭವಾಗುತ್ತದೆ ಜನಕ ಉವಾಚ = ಜನಕನು ಹೇಳಿದನು ಕಥಂ = ಹೇಗೆ ಜ್ಞಾನಮ್ + ಅವಾಪ್ನೋತಿ = ಜ್ಞಾನವನ್ನು ಪಡೆಯಬೇಕು ಮುಕ್ತಿ = ಮೋಕ್ಷ ಭವಿಷ್ಯತಿ = ಆಗುತ್ತದೆ ವೈರಾಗ್ಯ = ವೈರಾಗ್ಯ ಚ =ಮತ್ತು ಪ್ರಾಪ್ತಂ + ಏತತ್ = ಪಡೆಯತಕ್ಕದ್ದು , ಇದನ್ನು ಬ್ರೂಹಿ =ಹೇಳು ಮಮ =ನನ್ನ. ಪ್ರಭೋ = ಪ್ರಭುವೇ ಅನುವಾದ   ಜನಕ ಹೇಳಿದನು. ಜ್ಞಾನವನ್ನು ಹೇಗೆ ಸಂಪಾದಿಸಬೇಕು? ಮುಕ್ತಿಯನ್ನು ಹೇಗೆ ಪಡೆಯಬೇಕು? ವೈರಾಗ್ಯವನ್ನು ಪಡೆಯುವದು ಹೇಗೆ? ಪ್ರಭೂ, ಇದನ್ನು ನನಗೆ ತಿಳಿಸಿಕೊಡಿ. ಜನಕನು ನಮ್ಮೆಲ್ಲರ ಮನಸ್ಸಿನಲ್ಲಿರುವ ಪ್ರಶ್ನೆಯನ್ನೇ ಕೇಳುತ್ತಿದ್ದಾನೆ - ಜ್ಞಾನ ಪಡೆಯುವದು ಹೇಗೆ - ಅಧ್ಯಾತ್ಮ ಜ್ಞಾನ - ಕಬ್ಬಿಣದ ಕಡಲೆ - ಅದನ್ನು ತಿಳಿಯುವದು ಹೇಗೆ? ನಂತರ ಮೋಕ್ಷ ಪಡೆಯುವದು ಹೇಗೆ? ಈ ಸುಖ-ದುಃಖಗಳಿಂದ, ಹುಟ್ಟು-ಸಾವುಗಳಿಂದ, ಜರಾ-ಮೃತ್ಯುಗಳಿಂದ ಹೇಗೆ ಪಾರಾಗುವದು? ನಾನು-ನನ್ನದು ಎಂಬ ಆಶಾ-ಪಾಶದಿಂದ ಹೊರ ಬರುವದು ಹೇಗೆ? ಅಷ್ಟಾವಕ್ರ ಉವಾಚ .. ಮುಕ್ತಿಮಿಚ್ಛಸಿ ಚೇತ್ತಾತ ವಿಷಯಾನ್ ವಿಷವತ್ತ್ಯಜ . ಕ್ಷಮಾರ್ಜವದಯಾತೋಷಸತ್ಯಂ ಪೀಯೂಷವದ್ ಭಜ .. 1-2.. ಶಬ್ದಾರ್ಥ ಮುಕ್ತಿಂ = ಮು...

ಅಷ್ಟಾವಕ್ರಗೀತಾ - ೨

ಆತ್ಮಸಾಕ್ಷಾತ್ಕಾರದ ಆನಂದ ಅಷ್ಟಾವಕ್ರನಿಂದ ಆತ್ಮಜ್ಞಾನ ಪಡೆದ ಜನಕನು ತನ್ನ ಹರ್ಷವನ್ನು ಈ ಕೆಳಗಿನ ಸಾಲುಗಳಲ್ಲಿ ವ್ಯಕ್ತಪಡಿಸುತ್ತಾನೆ.  ಜನಕ ಉವಾಚ .. ಅಹೋ ನಿರಂಜನಃ ಶಾಂತೋ ಬೋಧೋಽಹಂ ಪ್ರಕೃತೇಃ ಪರಃ . ಏತಾವಂತಮಹಂ ಕಾಲಂ ಮೋಹೇನೈವ ವಿಡಂಬಿತಃ .. 2-1.. ಶಬ್ದಾರ್ಥ:  ಅಹೋ =ಓಹೋ    ನಿರಂಜನ =ನಿರ್ವಿಕಾರಿ    ಶಾಂತಃ =ಶಾಂತನು  ಬೋಧಃ + ಅಹಂ =ಪ್ರಜ್ಞೆ ನಾನು  ಪ್ರಕೃತೇಃ =ಪ್ರಕೃತಿಗಿಂತ  ಪರಃ =ಆಚೆ    ಏತಾವಂತಂ =ಇಷ್ಟು ಬಹಳ ಅಹಂ =ನಾನು ಕಾಲಂ =ಕಾಲ  ಮೋಹೇನ + ಏವ =ಮೋಹದಿಂದಲೇ  ವಿಡಂಬಿತಃ =ಮೋಸ ಹೋಗಿದ್ದೆ  ಅನುವಾದ: ಅಹೋ, ನಾನು ನಿಷ್ಕಳಂಕ, ಶಾಂತ ಮತ್ತು ಈ ಪ್ರಕೃತಿಯನ್ನು ಮೀರಿದ ಜ್ಞಾನವಾಗಿರುವೆ. (ಇದನ್ನು ತಿಳಿಯದೆ) ಇಷ್ಟು ದಿನ ಭ್ರಮೆಯಿಂದ ಮೋಸ ಹೋಗಿದ್ದೆ. ಯಥಾ ಪ್ರಕಾಶಯಾಮ್ಯೇಕೋ ದೇಹಮೇನಂ ತಥಾ ಜಗತ್ . ಅತೋ ಮಮ ಜಗತ್ಸರ್ವಮಥವಾ ನ ಚ ಕಿಂಚನ .. 2-2.. ಶಬ್ದಾರ್ಥ: ಯಥಾ =ಹೇಗೆ ಪ್ರಕಾಶಯಾಮಿ + ಏಕಃ =ಒಬ್ಬನೇ ಪ್ರಕಾಶಿಸುತ್ತೇನೆ  ದೇಹಮ್ + ಏನಂ =ಈ ದೇಹಮ್  ತಥಾ =ಹಾಗೇ ಜಗತ್ =ಜಗತ್ತನ್ನು ಅತಃ =ಹಾಗಾಗಿ ಮಮ =ನನ್ನ ಜಗತ್ + ಸರ್ವಂ =ಇಡೀ ಜಗತ್ತು  ನ =ಅಲ್ಲ  ಚ =ಹಾಗೂ ಕಿಂಚನ =ಯಾವದೂ ಅಲ್ಲ ಅನುವಾದ: ಹೇಗೆ ನಾನು ಈ ಶರೀರವನ್ನು ಪ್ರಕಾಶಿಸುತ್ತೇನೋ - ಹಾಗೆಯೆ ನಾನು ಈ ಜಗತ್ತನ್ನೂ ಪ್ರಕಾಶಿಸುತ್ತೇನೆ. ಹಾಗಾಗಿ ...